ಬ್ರೇಕಿಂಗ್ ನ್ಯೂಸ್
24-08-22 03:18 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 24: ಅತ್ಯಾಚಾರಗೈದ ಯುವಕನನ್ನೆ ಸಂತ್ರಸ್ತೆ ಮದುವೆಯಾದ ಕಾರಣ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ರದ್ದುಗೊಳಿಸಿದೆ.
17 ವರ್ಷದ ಸಂತ್ರಸ್ತ ಯುವತಿ 18 ವರ್ಷ ತುಂಬಿದ ನಂತರ ಆರೋಪಿಯನ್ನೇ ಮದುವೆಯಾಗಿದ್ದಳು. ಇದಲ್ಲದೆ, ಸೆಷನ್ಸ್ ಕೋರ್ಟ್ನಲ್ಲಿ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ದಂಪತಿಗೆ ಮಗು ಆಗಿತ್ತು. ಈ ಬಗ್ಗೆ ತೀರ್ಪು ನೀಡಿರುವ ನ್ಯಾಯಾಧೀಶರು, ಸಂತ್ರಸ್ತ ಯುವತಿ ವಿಚಾರಣೆ ಸಂದರ್ಭದಲ್ಲಿ ಪ್ರತಿಕೂಲವಾಗಿ ತಿರುಗಿದರೆ, ಅರ್ಜಿದಾರನು ಎಲ್ಲ ಅಪರಾಧಗಳಿಂದ ಮುಕ್ತಗೊಳ್ಳುತ್ತಾನೆ. ಇದು ನೋವಿನ ಅಂತಿಮ ಫಲಿತಾಂಶವಲ್ಲ. ಆದರೆ, ಕ್ರಿಮಿನಲ್ ನ್ಯಾಯ ವ್ಯವಸ್ಥೆಯಲ್ಲಿನ ಪ್ರಕ್ರಿಯೆ ಅಂತಹ ನೋವನ್ನು ಉಂಟು ಮಾಡುತ್ತದೆ" ಎಂದು ತಿಳಿಸಿದ್ದಾರೆ.
ಈ ಬಗ್ಗೆ ಪ್ರಾಸಿಕ್ಯೂಷನ್ ಕಡೆಯಿಂದ ಎದುರಾದ ವಿರೋಧವನ್ನು ನಿರ್ಲಕ್ಷಿಸಿದ ಹೈಕೋರ್ಟ್, ಕಕ್ಷಿದಾರರ ಮತ್ತು ಸಂತ್ರಸ್ತೆಯ ನಡುವಿನ ಒಪ್ಪಂದವನ್ನು ಅಂಗೀಕರಿಸುವುದು ಮತ್ತು ಪ್ರಕ್ರಿಯೆಗಳನ್ನು ಕೊನೆಗೊಳಿಸುವುದು ಸೂಕ್ತ ಎಂದು ಹೇಳಿದೆ. ಮದುವೆಯಾಗಿ ಮಗುವನ್ನು ಬೆಳೆಸುತ್ತಿರುವ ದಂಪತಿಗಳಿಗೆ ನ್ಯಾಯಾಲಯವು ತನ್ನ ಬಾಗಿಲುಗಳನ್ನು ಮುಚ್ಚಿದರೆ, ಇಡೀ ಪ್ರಕ್ರಿಯೆಯು ನ್ಯಾಯಾಂಗ ವ್ಯವಸ್ಥೆಯ ತಪ್ಪಿಗೆ ಕಾರಣವಾಗುತ್ತದೆ" ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ತೀರ್ಪಿನ ಸಂದರ್ಭ ಉಲ್ಲೇಖಿಸಿದ್ದಾರೆ.
ಸಂತ್ರಸ್ತೆಯ ತಂದೆ ತನ್ನ ಅಪ್ರಾಪ್ತ ಮಗಳು ಕಾಣೆಯಾಗಿದ್ದಾಳೆ ಎಂದು ಮಾರ್ಚ್ 2019 ರಲ್ಲಿ ದೂರು ದಾಖಲಿಸಿದ್ದರು. ಆದರೆ, ಆರೋಪಿಯೊಂದಿಗೆ ಬಾಲಕಿ ಪತ್ತೆಯಾಗಿದ್ದು ಇಬ್ಬರೂ ಒಮ್ಮತದಿಂದ ಈ ನಿರ್ಧಾರಕ್ಕೆ ಬಂದಿದ್ದಾಗಿ ಹೇಳಿಕೆ ನೀಡಿದ್ದರು. ಆದರೆ, ಬಾಲಕಿಗೆ ಕೇವಲ 17 ವರ್ಷ ವಯಸ್ಸಾಗಿದ್ದರಿಂದ ಆರೋಪಿ ವಿರುದ್ಧ ಪೋಕ್ಸೋ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. 18 ತಿಂಗಳ ಕಾಲ ಜೈಲಿನಲ್ಲಿದ್ದ ಆತನಿಗೆ ಬಳಿಕ ಜಾಮೀನು ನೀಡಲಾಗಿತ್ತು. ಆರೋಪಿ ಬಿಡುಗಡೆಯಾದ ನಂತರ, ದಂಪತಿ ನವೆಂಬರ್ 2020 ರಲ್ಲಿ ವಿವಾಹವಾಗಿದ್ದು ವರ್ಷದ ನಂತರ, ಅವರಿಗೆ ಹೆಣ್ಣು ಮಗುವಾಗಿತ್ತು.
The Karnataka High Court has quashed criminal proceedings against a 23-year-old man facing charges under the Protection of Children from Sexual Offences (POCSO) Act and rape charges under the Indian Penal Code (IPC). The 17-year-old victim had married him after reaching 18 and the couple even had a child while the case was pending in a Sessions Court.
22-04-25 10:15 pm
Bangalore Correspondent
30 ವರ್ಷಗಳಲ್ಲಿ ಮುಸ್ಲಿಮರು, ಪರಿಶಿಷ್ಟರ ಸಂಖ್ಯೆ ದುಪ...
22-04-25 10:13 pm
Bidar SSLC Student, Blackmail: ಫುಲ್ ಮಾರ್ಕ್ ಕೊ...
22-04-25 02:37 pm
ಜನಿವಾರ ತೆಗೆಸಿರುವ ಕ್ರಮ ನಿಯಮಬಾಹಿರ, ಧಾರ್ಮಿಕ ನಂಬಿ...
22-04-25 01:00 pm
R Ashok, Census Probe: ಜಾತಿಗಣತಿ ವರದಿಯೇ ನಕಲಿ,...
21-04-25 07:27 pm
22-04-25 10:33 pm
HK News Desk
Rahul Gandhi, BJP : ಅಮೆರಿಕದಲ್ಲಿ ನಿಂತು ಭಾರತದ ಚ...
22-04-25 07:13 pm
Next Pope: ರೋಮನ್ ಕ್ಯಾಥೋಲಿಕ್ ಚರ್ಚ್ನ 266ನೇ ಪೋಪ...
21-04-25 07:46 pm
Pope Francis Death, Vatican, Catholic: ಕೆಥೋಲಿ...
21-04-25 02:13 pm
No GST on UPI Payments: ಎರಡು ಸಾವಿರಕ್ಕಿಂತ ಮೇಲಿ...
20-04-25 08:42 pm
21-04-25 10:32 pm
Mangalore Correspondent
Puttur, Arun Putila: ಬ್ರಾಹ್ಮಣರು ಮತ್ತೆ ಪರಶುರಾಮ...
21-04-25 07:08 pm
Mangalore Chakravarti Sulibele, Ujre; ಸರ್ಕಾರವ...
20-04-25 05:42 pm
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
22-04-25 07:37 pm
Bangalore Correspondent
IPS Om Prakash Murder, Update: ನಿವೃತ್ತ ಡಿಜಿಪಿ...
22-04-25 03:26 pm
Om Prakash IPS Murder, Wife arrest: ನಿವೃತ್ತ ಡ...
21-04-25 01:03 pm
Karnataka DGP Om Prakash Murder, wife: ನಿವೃತ್...
20-04-25 10:52 pm
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm