ಬ್ರೇಕಿಂಗ್ ನ್ಯೂಸ್
05-09-22 10:45 pm Mangalore Correspondent ಕ್ರೈಂ
ಮಂಗಳೂರು, ಸೆ.5 : ಮಂಗಳೂರು ನಗರದ ವಿವಿಧ ಕಡೆಗಳಲ್ಲಿ ಮಹಿಳೆಯರ ಸರ ಸುಲಿಗೆ ಮಾಡುತ್ತಿದ್ದ ಮೂರು ಜನ ಆರೋಪಿಗಳನ್ನು ಮಂಗಳೂರು ನಗರದ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ಸುಲಿಗೆ ಮಾಡಿದ 90 ಗ್ರಾಂ ತೂಕದ ಚಿನ್ನಾಭರಣ, 2 ಸ್ಕೂಟರ್ ಮತ್ತು 3 ಮೊಬೈಲ್ ಪೋನ್ ಸಹಿತ ಒಟ್ಟು 5 ಲಕ್ಷ ಮೌಲ್ಯ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಕ್ತಿನಗರ ನಿವಾಸಿ ಜಗದೀಶ್ ಶೆಟ್ಟಿ(39), ಉರ್ವಾ ನಿವಾಸಿ ಸುಜಿತ್ ಶೆಟ್ಟಿ (40), ಪದವಿನಂಗಡಿ ನಿವಾಸಿ ಸುರೇಶ್ ರೈ(39) ಬಂಧಿತರು. ಕಳೆದ ಆಗಸ್ಟ್ ತಿಂಗಳಲ್ಲಿ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಎರಡು ಸರ ಸುಲಿಗೆ ಪ್ರಕರಣ, ಕಂಕನಾಡಿ ಠಾಣೆ ವ್ಯಾಪ್ತಿಯಲ್ಲಿ 1 ಸರ ಸುಲಿಗೆ ಪ್ರಕರಣ ದಾಖಲಾಗಿತ್ತು.
ಆ.14ರಂದು ಮಂಗಳೂರು ಕದ್ರಿ ಆಳ್ವಾರಿಸ್ ರಸ್ತೆಯಲ್ಲಿ ಪುಣೆ ಮೂಲದ ಮಹಿಳೆಯ ಸರ ಕಳ್ಳತನ ಆಗಿತ್ತು. ಅನಂತರ ಆ.24 ರಂದು ಕುಲಶೇಖರ ಎವರೆಸ್ಟ್ ಪ್ಲಾಸ್ಟಿಕ್ ಫ್ಯಾಕ್ಟರಿಯ ರಸ್ತೆಯಲ್ಲಿ ಮಹಿಳೆಯ ಸರ ಸುಲಿಗೆ ಪ್ರಕರಣ ದಾಖಲಾಗಿತ್ತು. ಆ.25 ರಂದು ಮಂಗಳೂರು ನಗರ ಕಂಕನಾಡಿ ಪೊಲೀಸ್ ಠಾಣೆಯ ಶಕ್ತಿನಗರದ ರಾಜೀವ ನಗರದಲ್ಲಿ ಮಹಿಳೆ ಸರವನ್ನು ಸುಲಿಗೆ ಮಾಡಲಾಗಿತ್ತು.
ಕೃತ್ಯದ ಬಗ್ಗೆ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದರು. ಮಹಿಳೆಯರ ಸರ ಸುಲಿಗೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳು ಮಂಗಳೂರು ನಗರದ ಕಾರ್ ಸ್ಟ್ರೀಟ್ ಬಳಿ ಚಿನ್ನದ ಸರವನ್ನು ಮಾರಾಟ ಮಾಡಲು ಬಂದಿದ್ದರು. ಜುವೆಲ್ಲರಿಗೆ ಬಂದಿದ್ದ ಮಾಹಿತಿ ಪಡೆದ ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ, ಕೃತ್ಯ ಬೆಳಕಿಗೆ ಬಂದಿದೆ.
ಆರೋಪಿಗಳ ಪೈಕಿ ಜಗದೀಶ್ ರಿಕ್ಷಾ ಚಾಲಕನಾಗಿದ್ದು, ಸುಜಿತ್ ಶೆಟ್ಟಿ ಫೈನಾನ್ಸ್ ವ್ಯವಹಾರ ನಡೆಸುತ್ತಿದ್ದ. ಸುರೇಶ್ ರೈ ಟೆಂಪೋ ಚಾಲಕನಾಗಿರುತ್ತಾನೆ. ಸುಜಿತ್ ಶೆಟ್ಟಿ ಮಂಗಳೂರಿನಲ್ಲಿ 2002ರಲ್ಲಿ ನಡೆದ ತ್ರಿವಳಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ.
Mangalore Three robbers held for snatching gold and selling it to gold smith.
25-04-24 02:19 pm
HK News Desk
Mallikarjun Kharge speech at Kalaburgi: ಮತ ಹಾ...
24-04-24 11:14 pm
ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ; ಆರೋಪಿ...
24-04-24 07:10 pm
Priyanka Gandhi, PM Modi, Chitradurga: ದೊಡ್ಡ...
23-04-24 10:46 pm
Eshwarappa slams Vijayendra, BJP: ಬಿಜೆಪಿ ಬಗ್ಗ...
23-04-24 09:24 pm
25-04-24 03:49 pm
HK News Desk
Groom electrocuted in Rajasthan: ರೆಸಾರ್ಟ್ ನಲ್...
24-04-24 05:01 pm
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
25-04-24 02:42 pm
Mangalore Correspondent
Vishwa Hindu Parishad, Vhp, Mangalore: ರಾಜ್ಯದ...
25-04-24 12:59 pm
Subramanya Dhareshwara: ಯಕ್ಷಗಾನ ರಂಗದಲ್ಲಿ ಕ್ರಾ...
25-04-24 11:52 am
Brijesh Chowta, Mangalore: ಕಾಂಗ್ರೆಸಿಗೆ ಮತ ನೀಡ...
24-04-24 10:39 pm
Mangalore Brijesh Chowta, George Fernandes: ಕ...
24-04-24 10:00 pm
25-04-24 03:33 pm
Bangalore Correspondent
Gang raped in Bengaluru: ಬೆಂಗಳೂರಿನಲ್ಲಿ ಯುವತಿ...
25-04-24 12:19 pm
Glide touist bus, Mangalore, crime: ಬೆಂಗಳೂರು...
24-04-24 10:48 pm
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm
Trading scam, Online fraud, Crime: ದುಪ್ಪಟ್ಟು...
24-04-24 03:41 pm