ಬ್ರೇಕಿಂಗ್ ನ್ಯೂಸ್
06-02-23 03:20 pm Mangalore Correspondent ಕ್ರೈಂ
ಮಂಗಳೂರು, ಫೆ.6: ಜುವೆಲ್ಲರಿ ಉದ್ಯೋಗಿಯನ್ನು ಕತ್ತು ಸೀಳಿ ಕೊಂದ ಪ್ರಕರಣದಲ್ಲಿ ಆರೋಪಿಯ ಸಿಸಿಟಿವಿ ಆಧರಿಸಿ ಪೊಲೀಸರು ಆತನ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ. ಜುವೆಲ್ಲರಿಂದ ಹೊರಗೆ ನಡೆದುಕೊಂಡು ಹೋಗುತ್ತಿರುವ ಯುವಕ ತಲೆಗೆ ಕಪ್ಪು ಟೋಪಿ, ಮುಖಕ್ಕೆ ಮಾಸ್ಕ್ ಹಾಕ್ಕೊಂಡಿದ್ದ. ಕಪ್ಪು ಜರ್ಕಿನ್ ತೊಟ್ಟಿದ್ದು ಜೀನ್ಸ್ ಪ್ಯಾಂಟ್ ಹಾಕಿದ್ದ. ಅಂದಾಜು 28ರ ಆಸುಪಾಸಿನ ಯುವಕನಂತಿದ್ದು, ಈತನ ಮಾಹಿತಿ ಸಿಕ್ಕರೆ ಪೊಲೀಸರಿಗೆ ತಿಳಿಸಲು ಮನವಿ ಮಾಡಿದ್ದಾರೆ.
ಜುವೆಲ್ಲರಿ ಅಂಗಡಿಯಿಂದ ಹೊರಬಂದಿದ್ದ ವ್ಯಕ್ತಿ ಅನತಿ ದೂರದ ವರೆಗೆ ಓಡಿ ಆನಂತರ ಆಟೋದಲ್ಲಿ ತೆರಳಿದ್ದ. ಹೀಗಾಗಿ ಪೊಲೀಸರು ಆಟೋ ಚಾಲಕನನ್ನು ವಶಕ್ಕೆ ಪಡೆದು ಮಾಹಿತಿ ಸಂಗ್ರಹಿಸಿದ್ದಾರೆ. ಆರೋಪಿ ಆನಂತರ ಎಲ್ಲಿ ಹೋಗಿದ್ದಾನೆ ಅನ್ನುವುದರ ಮಾಹಿತಿ ಇಲ್ಲ. ಇದೇ ವೇಳೆ, ಜುವೆಲ್ಲರಿಯಿಂದ 12 ಗ್ರಾಮ್ ತೂಕದ ಎರಡು ಸಣ್ಣ ಚಿನ್ನದ ಸರ ನಾಪತ್ತೆಯಾಗಿದ್ದು, ಅದನ್ನು ಆತ ಒಯ್ದಿರುವ ಶಂಕೆಯಿದೆ. ಆದರೆ ಸಣ್ಣ ಚಿನ್ನದ ಸರಕ್ಕಾಗಿ ಈ ಕೊಲೆ ಮಾಡಿದ್ದಿರಬಹುದೇ ಅನ್ನುವುದು ಅನುಮಾನಕ್ಕೆ ಕಾರಣವಾಗಿದೆ.
ಕೊಲೆಯ ಬಗ್ಗೆ ಮಾಹಿತಿ ನೀಡಿರುವ ಕಮಿಷನರ್ ಶಶಿಕುಮಾರ್, ಕತ್ತನ್ನು ಹರಿತ ಆಯುಧದಿಂದ ಅಡಿ ಭಾಗದಿಂದಲೇ ಸೀಳಿದ್ದು ಕಂಡುಬಂದಿದೆ ಎಂದಿದ್ದಾರೆ. ಹಾಗಾಗಿ ಆರೋಪಿ ಹರಿತ ಆಯುಧವನ್ನೇ ಬಳಸಿದ್ದಾನೆ ಎನ್ನಲಾಗುತ್ತಿದೆ. ಅಲ್ಲದೆ, ಈ ರೀತಿ ಕತ್ತು ಸೀಳುವುದು ಅದರಲ್ಲಿ ತರಬೇತಿ ಪಡೆದವರೇ ಆಗಿರಬೇಕು ಅನ್ನುವುದು ಪೊಲೀಸರ ಅನಿಸಿಕೆ. ಸಾಧಾರಣ ಯುವಕನೊಬ್ಬ ಜನನಿಬಿಡ ರಸ್ತೆಯ ಜುವೆಲ್ಲರಿ ನುಗ್ಗಿ ಹತ್ಯೆ ಮಾಡಿರುವುದು ಬಹಳಷ್ಟು ಶಂಕೆಗೆ ಕಾರಣವಾಗಿದೆ. ಆತ ಕೊಲೆ ಮಾಡುವ ಉದ್ದೇಶದಿಂದಲೇ ಹರಿತ ಆಯುಧವನ್ನು ಹಿಡಿದುಕೊಂಡು ಬಂದಿದ್ದನೇ ಅನ್ನುವ ಅನುಮಾನವೂ ಇದೆ. ಹಿಂತಿರುಗಿ ಹೋಗುವ ಸಂದರ್ಭದಲ್ಲಿ ಕೈಯಲ್ಲಿ ಕಪ್ಪು ಬಣ್ಣದ ಚೀಲದಲ್ಲಿ ಏನೋ ವಸ್ತುವನ್ನು ಹಿಡಿದುಕೊಂಡಿದ್ದ. ಅದು ಹರಿತ ಆಯುಧವೇ ಆಗಿರುವ ಸಾಧ್ಯತೆಯಿದೆ. ಕತ್ತು ಸೀಳಿ ಕೊಲೆಗೈಯುವ ಕೃತ್ಯ ಕಳೆದ ಒಂದು ವರ್ಷದಲ್ಲಿ ದೇಶದ ಹಲವೆಡೆ ನಡೆದಿದ್ದು, ಪೊಲೀಸರು ಆ ದೃಷ್ಟಿಯಿಂದಲೂ ತನಿಖೆ ನಡೆಸುತ್ತಿದ್ದಾರೆ.
ಕೊಲೆಯಾದ ರಾಘವ ಆಚಾರ್ಯ(55) ಬಡ ಕುಟುಂಬದ ವ್ಯಕ್ತಿಯಾಗಿದ್ದು, ಈ ಹಿಂದೆ ಹಲವು ಚಿನ್ನದ ಅಂಗಡಿಗಳಲ್ಲಿ ಕೆಲಸ ಮಾಡಿದ್ದರು. ಇತ್ತೀಚೆಗೆ ಏಳು ತಿಂಗಳ ಹಿಂದೆ ಮಂಗಳೂರು ಜುವೆಲ್ಲರಿಗೆ ಕೆಲಸಕ್ಕೆ ಸೇರಿದ್ದರು. ಇವರ ಒಬ್ಬ ಮಗ ಊರಲ್ಲಿ ಕೆಲಸ ಸಿಗದೆ ಇತ್ತೀಚೆಗೆ ದುಬೈಗೆ ಹೋಗಿದ್ದ. ಇನ್ನೊಬ್ಬ ಕೆಲಸಕ್ಕಾಗಿ ಅಲೆದಾಡುತ್ತಿದ್ದಾನೆ. ಮತ್ತೊಬ್ಬ ಮಗಳು ಪಿಯುಸಿ ಓದುತ್ತಿದ್ದಾಳೆ. ಪತ್ನಿ ಬೇಕರಿಯಲ್ಲಿ ಕೆಲಸಕ್ಕಿದ್ದು, ಗಂಡನಿಗೆ ಆಧಾರವಾಗಿದ್ದರು. ಇದೀಗ ಕುಟುಂಬದ ಆಸರೆಯಾಗಿದ್ದವರೇ ಕೊಲೆಯಾಗಿದ್ದಾರೆ.
In connection to the incident where a miscreant stabbed a staffer to death, the police have released the portrait of the suspected killer, from the CCTV footage. The police, in statement said, “On February 3, between 3-30 pm to 3-45 pm, the following person came to Mangalore Jewellers situated at Balmatta Road, Mangaluru (Mangaluru north police station jurisdiction) in the guise of a gold buyer and stabbed and killed the staff Raghavendra Achar who was alone inside the jeweller. The portrait of the said person was found in the footage recorded in the local CCTVs.
17-05-25 01:44 pm
Bangalore Correspondent
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
Pro Pakistan slogan, Arrest, Bangalore: ಬೆಂಗಳ...
14-05-25 05:16 pm
17-05-25 10:51 pm
HK News Desk
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
ಡೊನಾಲ್ಡ್ ಟ್ರಂಪ್ ಟೀಕಿಸಿದ್ದ ಪೋಸ್ಟ್ ಡಿಲೀಟ್ ಮಾಡಿದ...
16-05-25 04:45 pm
ಮುಸ್ಲಿಂ ವ್ಯಕ್ತಿಗೆ ಕುರಾನ್ ಪ್ರಕಾರ ನಾಲ್ಕು ಮದುವೆ...
15-05-25 09:09 pm
Donald Trump: ನಾನೇನೂ ಮಧ್ಯಸ್ಥಿಕೆ ವಹಿಸಿರಲಿಲ್ಲ,...
15-05-25 08:38 pm
17-05-25 10:09 pm
Mangalore Correspondent
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
CM Siddaramaiah, New Dc Office Mangalore Inau...
16-05-25 10:27 pm
Siddaramaiah, Cm Mangalore, BJP black flag: ಸ...
16-05-25 06:05 pm
17-05-25 05:00 pm
Bangalore Correspondent
Mangalore Stabbing, Panemangalore, Crime, Att...
16-05-25 11:06 pm
Belagavi Protest, Quran Burnt, Police, Crime:...
16-05-25 09:20 pm
Davanagere Crime, Gold Robbery: ಆನ್ಲೈನ್ ಗೇಮಿಂ...
15-05-25 11:06 pm
Bangalore Crime, Mobile showroom: ಮೊಬೈಲ್ ಅಂಗಡ...
15-05-25 06:02 pm