ಬ್ರೇಕಿಂಗ್ ನ್ಯೂಸ್
13-11-20 04:38 pm Headline Karnataka News Network ಕ್ರೈಂ
ಮುಂಬೈ, ನವೆಂಬರ್ 13: ಎಟಿಎಂ ಮೆಷೀನ್ ಗೆ ಹಣ ತುಂಬಲು ಬಂದಿದ್ದ ವೇಳೆ ವ್ಯಾನ್ ಚಾಲಕ ವಾಹನದಲ್ಲಿದ್ದ 4.25 ಕೋಟಿ ರೂಪಾಯಿ ಹಣದ ಜೊತೆಗೆ ಪರಾರಿಯಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.
ವಿರಾರ್ ನ ಬೋಲಿಂಜ್ ನಲ್ಲಿ ಘಟನೆ ನಡೆದಿದ್ದು, ಬ್ಯಾಂಕ್ ಸಿಬಂದಿ ವಾಹನ ನಿಲ್ಲಿಸಿ ಕೋಟಕ್ ಮಹೀಂದ್ರಾ ಎಟಿಎಂ ಒಳಗೆ ತೆರಳಿದ್ದರು. ಗಾರ್ಡ್ ಕೂಡ ವಾಹನದಿಂದ ಇಳಿದು ಹೊರಗೆ ನಿಂತಿದ್ದರು. ಈ ವೇಳೆ, ವಾಹನದಲ್ಲಿ ಕೋಟ್ಯಂತರ ರೂ. ಹಣ ಇರುವುದನ್ನು ತಿಳಿದಿದ್ದ ಚಾಲಕ ವ್ಯಾನ್ ಸಹಿತ ಮುಂದಕ್ಕೆ ಹೋಗಿದ್ದು, ಆನಂತರ ಪರಾರಿಯಾಗಿದ್ದಾನೆ.
ಘಟನೆ ಬ್ಯಾಂಕ್ ಸಿಬಂದಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದ್ದಾರೆ. ಆದರೆ, ಪೊಲೀಸರ ಪ್ರಕಾರ, ಚಾಲಕನ ಹೆಸರು, ಮಾಹಿತಿ ನೀಡಿಲ್ಲ. ವಾಹನದಲ್ಲಿ ಜಿಪಿಎಸ್ ಅಳವಡಿಸಿದ್ದು, ಅದರ ಪತ್ತೆಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ. ದೀಪಾವಳಿ ಸಂದರ್ಭದಲ್ಲಿ ಬ್ಯಾಂಕ್ ರಜೆ ಇರುವುದರಿಂದ ಎಟಿಎಂಗೆ ಹಣ ತುಂಬಿಸುವುದಕ್ಕಾಗಿ ಸಿಬಂದಿ ಮುಂದಾಗಿದ್ದರು. ಬೇರೆ ಬೇರೆ ಎಟಿಎಂಗೆ ಹಣ ತುಂಬಿಸುವ ಕಾರ್ಯವನ್ನು ಲಾಜಿಸ್ಟಿಕ್ಸ್ ಕಂಪನಿ ನಿರ್ವಹಿಸುತ್ತದೆ.
ಆರೋಪಿ ಚಾಲಕ ವ್ಯಾನನ್ನು ನಿಲ್ಲಿಸಿ ಟ್ರಂಕ್ ನಲ್ಲಿರುವ ಹಣವನ್ನು ಬೇರೆ ವಾಹನಕ್ಕೆ ತುಂಬಿಸಿ ಎಸ್ಕೇಪ್ ಆಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಆತನ ಜೊತೆಗಿದ್ದ ಸೆಕ್ಯುರಿಟಿ ಗಾರ್ಡ್ ಮತ್ತು ಸಿಬಂದಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
The driver of a cash logistics firm allegedly fled with a van containing nearly Rs 4.3 crore as his colleagues were filling an ATM in Virar, Mumbai.
07-06-25 08:04 pm
HK News Desk
Bjp, CM Siddaramaiah, DK Shivakumar: ಸಿಎಂ ಸಿದ...
07-06-25 06:57 pm
MLC K. Govindaraj: ಕಾಲ್ತುಳಿತ ಪ್ರಕರಣ ; ಸಿಎಂ ರಾ...
06-06-25 10:58 pm
Mohandas Pai, RCB, Death: ಪೊಲೀಸ್ ಕಮಿಷನರ್ ಸಸ್ಪ...
06-06-25 09:46 pm
Police Constable Protest, Commissioner Dayana...
06-06-25 09:03 pm
07-06-25 09:54 pm
HK News Desk
Starlink, Elon Musk: ಇಂಟರ್ನೆಟ್ ಸಿಗದ ಹಳ್ಳಿಗಳಿಗ...
07-06-25 07:10 pm
ಜಗತ್ತಿನ ಅತಿ ಎತ್ತರದ ರೈಲ್ವೇ ಸೇತುವೆ ಉದ್ಘಾಟಿಸಿದ ಮ...
06-06-25 11:08 pm
ತಂದೆ ಮುಸ್ಲಿಂ - ತಾಯಿ ಹಿಂದು ; ಮಗನಿಗೆ ಇಸ್ಲಾಂ ಅನು...
05-06-25 07:54 pm
30 ಅಡಿ ಉದ್ದದ ಅತಿ ವಿರಳ ದೇವರ ಮೀನು ತಮಿಳುನಾಡಿನಲ್ಲ...
04-06-25 05:05 pm
07-06-25 11:02 pm
Mangalore Correspondent
Siddaramaiah, DK Shivakumar, CT Ravi: ಕಾಲ್ತುಳ...
07-06-25 09:15 pm
Ct Ravi, Mangalore, BJP: ರೋಗಕ್ಕೆ ಮದ್ದು ಕೊಡದ ಹ...
07-06-25 08:48 pm
Mangalore, PG Student Arrested, Bomb Threat,...
07-06-25 05:37 pm
Mangalore Fire Accident, Derlakatte: ದೇರಳಕಟ್ಟ...
07-06-25 12:08 pm
07-06-25 10:39 pm
Mangalore Correspondent
Mangalore Murder, Crime, Rahiman: ಅಬ್ದುಲ್ ರಹಿ...
03-06-25 10:25 pm
Mangalore Suhas Shetty Murder Case, arrest; ಸ...
03-06-25 08:01 pm
Bank robbery, Vijayapura, 58 crore: ವಿಜಯಪುರದಲ...
03-06-25 01:33 pm
Mangalore Police, CCB, Cattle trafficking, Ta...
02-06-25 04:01 pm