ಬ್ರೇಕಿಂಗ್ ನ್ಯೂಸ್
13-11-20 04:56 pm Mangalore Correspondent ಕ್ರೈಂ
ಪುತ್ತೂರು, ನವೆಂಬರ್ 13: ಮುಸ್ಲಿಂ ಯುವಕನೊಬ್ಬ ಹಿಂದು ಹೆಸರಿನಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಯುವತಿಯ ಸ್ನೇಹ ಸಂಪಾದಿಸಿ ಆಕೆಯೊಂದಿಗೆ ಧರ್ಮಸ್ಥಳ ಸೇರಿ ಸುತ್ತಾಡಿ ಸಿಕ್ಕಿಬಿದ್ದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ.
ಕಡಬ ತಾಲೂಕು ಮರ್ದಾಳ ಗ್ರಾಮದ ಪಾಲೆತ್ತಡ್ಕ ನಿವಾಸಿ ಶೇಖ್ ಇಸ್ಮಾಯಿಲ್ ಎಂಬವರ ಪುತ್ರ ಅಬ್ದುಲ್ ರಜಾಕ್ ಎಂಬಾತ ತನ್ನ ಹೆಸರು ಬದಲಾಯಿಸಿ ಕೌಶಿಕ್ ಯಾನೆ ಸಂಜು ಎಂಬ ಹೆಸರಲ್ಲಿ ಫೇಸ್ಬುಕ್ ಖಾತೆ ಸೃಷ್ಟಿಸಿದ್ದ. ಅಲ್ಲದೆ, ತನಗೆ ತಂದೆ, ತಾಯಿ ಇಲ್ಲದಿದ್ದು, ಯಾರಾದ್ರೂ ಗೆಳಯರಾಗುವವರು ಫ್ರೆಂಡ್ ರಿಕ್ವೆಸ್ಟ್ ಕಳಿಸುವಂತೆ ಕೇಳಿಕೊಂಡಿದ್ದ. ಅಲ್ಲದೆ, 20ರಿಂದ 25 ವರ್ಷದ ಒಳಗಿನ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟನ್ನೂ ಕಳಿಸಿದ್ದ. ಈ ವೇಳೆ, ಕೌಕ್ರಾಡಿ ಗ್ರಾಮದ 24ರ ಹರೆಯದ ಯುವತಿಯೊಬ್ಬಳು ಕನೆಕ್ಟ್ ಆಗಿದ್ದು, ವಾಟ್ಸಪ್ ನಂಬರ್ ಪಡೆದು ಇಬ್ಬರೂ ಚಾಟಿಂಗ್ ಆರಂಭಿಸಿದ್ದರು. ಆನಂತರ ಇಬ್ಬರ ನಡುವೆ ಗೆಳೆತನ ಬೆಳೆದಿದ್ದು, ಯುವತಿಯೂ ಹುಚ್ಚು ಮಾತಿಗೆ ಮರುಳಾಗಿದ್ದಾಳೆ.
ಇತ್ತೀಚೆಗೆ ನವೆಂಬರ್ 1ರಂದು ಹುಡುಗಿ ತನ್ನ ಹೆತ್ತವರ ಸಮ್ಮತಿ ಪಡೆದು, ಆತನೊಂದಿಗೆ ಧರ್ಮಸ್ಥಳಕ್ಕೆ ತೆರಳಿದ್ದಳು. ಈ ವೇಳೆ ಹಣೆತುಂಬ ಕುಂಕುಮ ಪ್ರಸಾದ ಹಾಕ್ಕೊಂಡಿದ್ದ ಕೌಶಿಕ್ ಯಾನೆ ಅಬ್ದುಲ್ಲ ಹುಡುಗಿ ಜೊತೆ ನಿಂತು ಫೋಟೋ ಕೂಡ ತೆಗೆಸಿಕೊಂಡಿದ್ದ. ಬಳಿಕ ಈ ಫೋಟೋಗಳನ್ನು ಫೇಸ್ಬುಕ್ ನಲ್ಲಿ ಹಾಕ್ಕೊಂಡಿದ್ದಲ್ಲದೆ, ತಾನು ಅಪ್ಪಟ ಹಿಂದು ಎನ್ನುವಂತೆ ಹುಡುಗಿ ಮುಂದೆ ನಿರೂಪಿಸಲು ಹೋಗಿದ್ದಾನೆ. ಆದರೆ, ಫೇಸ್ಬುಕ್ ನಲ್ಲಿ ಹೀಗೆ ನಾಮ ಹಾಕ್ಕೊಂಡು ಫೋಟೋ ಹಾಕಿದ್ದನ್ನು ಗಮನಿಸಿದ ಆತನ ಮುಸ್ಲಿಂ ಸಮುದಾಯದ ಯುವಕರು ಆಕ್ಷೇಪಿಸಿದ್ದಾರೆ. ಈ ವೇಳೆ, ಅಬ್ದುಲ್ ರಜಾಕನ ವಾಸ್ತವ ಹೊರಗೆ ಬಂದಿದ್ದು ಹುಡುಗಿಯೂ ತಾನು ಮೋಸ ಹೋಗಿರುವುದನ್ನು ಅರಿತಿದ್ದಾಳೆ.
ಮನೆಯಲ್ಲಿ ಹೊಸ ಹುಡುಗ ಸಂಪರ್ಕ ಆಗಿದ್ದನ್ನು ಹೇಳಿಕೊಂಡು ತಿರುಗಿದ್ದ ಹುಡುಗಿಗೆ ಮುಸ್ಲಿಂ ಹುಡುಗನ ನಾಟಕ ಅರಿವಾಗಿದ್ದು, ಸುಳ್ಳು ಹೇಳಿ ವಂಚಿಸಿರುವ ವಿಚಾರದಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ.
ಪುತ್ತೂರು ಭಾಗದಲ್ಲಿ ಈ ವಿಚಾರ ಹಿಂದು ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದ್ದು, ಇದು ಕೂಡ ಲವ್ ಜಿಹಾದಿ ಕೃತ್ಯದ ಒಂದು ಭಾಗ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೇ ಅಬ್ದುಲ್ ರಜಾಕ್ ಫೇಸ್ಬುಕ್ ನಲ್ಲಿ ಇನ್ನೂ ಹಲವು ಖಾತೆಗಳನ್ನು ಹೊಂದಿರುವುದು ಬಹಿರಂಗವಾಗಿದ್ದು, ಕನಕರಾಜು ಹೆಸರಲ್ಲಿ ಅಕೌಂಟ್ ಹೊಂದಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಹುಡುಗ- ಹುಡುಗಿ ಜೊತೆಯಾಗಿ ತೆಗೆಸಿಕೊಂಡಿದ್ದ ಫೋಟೋಗಳು ಜಾಲತಾಣದಲ್ಲಿ ವೈರಲ್ ಆಗಿದೆ.
Puttur Muslim Boy Fakes himself as Hindu to win the heart of Girl on Facebook for Marriage. Later he was exposed and a case has been registered in Uppinangady Police Station. The boy is identified as Abdul Razak (25), son of Sheikh Ismail, resident of Palathadka House in Mardhala, Bantra village, Kadaba taluk
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 06:25 pm
HK News Desk
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
ಎಸ್-400 ಏರ್ ಡಿಫೆನ್ಸ್ ಸಿಸ್ಟಮ್ ಮತ್ತು ಬ್ರಹ್ಮೋಸ್...
10-05-25 09:24 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm