ಕದ್ದ ಬೈಕಿನಲ್ಲಿ ತೆರಳುತ್ತಿದ್ದಾಗ ಸಿಕ್ಕಿಬಿದ್ದ ಇಬ್ಬರು ಅಂದರ್

12-12-20 03:37 pm       Mangalore Correspondent   ಕ್ರೈಂ

ಕಳವುಗೈದ ಬೈಕಿನಲ್ಲಿ ತಿರುಗಾಡುತ್ತಿದ್ದ ಮೊಹಮ್ಮದ್ ಸಫ್ವಾನ್, ಸೈಫುಲ್ಲಾ ಫರಾಜ್ ಎಂಬುವವರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮಂಗಳೂರು, ಡಿ.12: ಕಳವುಗೈದ ಬೈಕಿನಲ್ಲಿ ತಿರುಗಾಡುತ್ತಿದ್ದ ಇಬ್ಬರು ಯುವಕರನ್ನು ಪಾಂಡೇಶ್ವರ ಪೊಲೀಸರು ಬಂಧಿಸಿದ್ದಾರೆ.

ಮೊಹಮ್ಮದ್ ಸಫ್ವಾನ್, ಸೈಫುಲ್ಲಾ ಫರಾಜ್ ಬಂಧಿತರು. ಪಾಂಡೇಶ್ವರ ಠಾಣೆಯ ಇಜ ನ್ ಸ್ಪೆಕ್ಟರ್ ಅನಂತ ಮುರ್ಡೇಶ್ವರ, ಸಿಬ್ಬಂದಿಯೊಂದಿಗೆ ರೌಂಡ್ಸ್ ಮಾಡುತ್ತಿದ್ದಾಗ ನಸುಕಿನ 3 ಗಂಟೆಗೆ ಅನುಮಾನಾಸ್ಪದ ಬೈಕ್ ಕಂಡುಬಂದಿದೆ. ಮೀನುಕಾರಿಕಾ ದಕ್ಕೆಯಲ್ಲಿ ಬೈಕ್ ತಡೆದು ತಪಾಸಣೆ ನಡೆಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಆರೋಪಿಗಳ ಸಹಿತ ಬೈಕ್‌ನ್ನು ವಶ ಪಡಿಸಿರುವ ಪೊಲೀಸರು, ಪ್ರಕರಣ ದಾಖಲಿಸಿದ್ದಾರೆ. ಬೈಕನ್ನು ಸುರತ್ಕಲ್ ಬಳಿ ಕಳವು ಮಾಡಿರುವುದಾಗಿ ಆರೋಪಿಗಳು ವಿಚಾರಣೆ ವೇಳೆ ಹೇಳಿದ್ದಾರೆ.