ಬ್ರೇಕಿಂಗ್ ನ್ಯೂಸ್
26-03-25 11:08 pm HK News Desk ಕ್ರೈಂ
ರೋಹ್ಟಕ್, ಮಾ.26: ತನ್ನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆಂಬ ಶಂಕೆಯಲ್ಲಿ ಹರ್ಯಾಣದಲ್ಲಿ ಯೋಗ ಶಿಕ್ಷಕನೊಬ್ಬನನ್ನು ಕಿಡ್ನಾಪ್ ಮಾಡಿ ಜೀವಂತ ಸಮಾಧಿ ಮಾಡಿರುವ ಪೈಶಾಚಿಕ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ರೋಹ್ಟಕ್ ನಗರದ ಬಾಬಾ ಮಸ್ತ್ ನಾಥ್ ಯುನಿವರ್ಸಿಟಿಯ ಯೋಗ ಶಿಕ್ಷಕ ಜಗದೀಪ್ ಜೀವಂತ ಸಮಾಧಿ ಮಾಡಲ್ಪಟ್ಟು ಕೊಲೆಯಾದವರು.
2024ರ ಡಿಸೆಂಬರ್ 24ರಂದು ಜಗದೀಪ್ ದಿಢೀರ್ ಎನ್ನುವಂತೆ ನಾಪತ್ತೆಯಾಗಿದ್ದರು. ಈ ಬಗ್ಗೆ ನಾನಾ ಕಡೆಯಲ್ಲಿ ಹುಡುಕಾಡಿದ ಬಳಿಕ ಫೆ.23ರಂದು ಆತನ ಕುಟುಂಬ ಪೊಲೀಸರಿಗೆ ನಾಪತ್ತೆ ದೂರು ನೀಡಿತ್ತು. ಪೊಲೀಸರು ಆತನ ಮೊಬೈಲ್ ಕರೆ ಆಧರಿಸಿ ತನಿಖೆ ಶುರು ಮಾಡಿದ್ದರು. ಎರಡು ವಾರಗಳ ಹುಡುಕಾಟದ ಬಳಿಕ ಮಾರ್ಚ್ 24ರಂದು ಹರ್ದೀಪ್ ಮತ್ತು ಧರ್ಮಪಾಲ್ ಎಂಬಿಬ್ಬರನ್ನು ಬಂಧಿಸಿದ್ದು, ಜೀವಂತ ಸಮಾಧಿ ಮಾಡಿರುವ ಘಟನೆಯನ್ನು ಬಯಲು ಮಾಡಿದ್ದಾರೆ.
ಜಗದೀಪ್ ವಾಸವಿದ್ದ ಮನೆಯ ಮಾಲೀಕನ ಪತ್ನಿಯೊಂದಿಗೆ ಅನೈತಿಕ ಸಂಬಂಧ ಇರಿಸಿಕೊಂಡಿದ್ದಾನೆ ಎಂಬ ಶಂಕೆಯಲ್ಲಿ ಮನೆ ಮಾಲೀಕ ಕೊಲೆಗೆ ಸಂಚು ರೂಪಿಸಿದ್ದ. ಇದರಂತೆ, ಆಗಂತುಕರು ಜಗದೀಪ್ ಅವರನ್ನು ಹಿಡಿದು ಹಗ್ಗದಲ್ಲಿ ಕೈಕಾಲು ಕಟ್ಟಿ ಪೈಂತವಾಸ್ ಎನ್ನುವ ಗ್ರಾಮಕ್ಕೆ ಕರೆದೊಯ್ದು ಅಲ್ಲಿ ಮೊದಲೇ ತೆಗೆದಿಟ್ಟಿದ್ದ ಗುಂಡಿಗೆ ಹಾಕಿ ಮಣ್ಣು ತುಂಬಿಸಿದ್ದಾರೆ. ಆಮೂಲಕ ಯೋಗ ಶಿಕ್ಷಕನನ್ನು ಜೀವಂತವಾಗಿಯೇ ಉಸಿರು ಕಟ್ಟಿಸಿ ಸಾಯುವಂತೆ ಮಾಡಿದ್ದಾರೆ. ಏಳು ಅಡಿ ಆಳದ ಗುಂಡಿಯಲ್ಲಿ ಶವ ಇರುವುದನ್ನು ಪೊಲೀಸರು ಪತ್ತೆಹಚ್ಚಿ ಹೊರ ತೆಗೆದಿದ್ದು ಪೋಸ್ಟ್ ಮಾರ್ಟಂ ಮಾಡಲು ಕಳಿಸಿದ್ದಾರೆ.
A horrific crime has come to light in Paintawas village, Charkhi Dadri, where a Yoga teacher, Jagdeep, was kidnapped and buried alive in a 7-foot pit.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
06-12-25 06:12 pm
Mangalore Correspondent
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
Brother Sajith Joseph Ban, Mangalore Prayer:...
04-12-25 06:39 pm
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm