ಬ್ರೇಕಿಂಗ್ ನ್ಯೂಸ್
09-04-25 08:15 pm HK News Desk ಕ್ರೈಂ
ಕಲಬುರಗಿ, ಎ.9 : ಇಡೀ ದೇಶವನ್ನೆ ಬೆಚ್ಚಿಬೀಳಿಸಿದ್ದ ಬೀದರ್ ಎಸ್ಬಿಐ ಎಟಿಎಂ ದರೋಡೆ ಪ್ರಕರಣ ಮಾಸುವ ಮುನ್ನವೇ ಕಲಬುರಗಿಯಲ್ಲೂ ಸಹ ಎಸ್ಬಿಐ ಎಟಿಎಂ ದರೋಡೆ ಮಾಡಲಾಗಿದೆ. ತಡರಾತ್ರಿ ಎಟಿಎಂ ನುಗ್ಗಿದ ದರೋಡೆಕೋರ ಗ್ಯಾಂಗ್, ಸಿಸಿ ಕ್ಯಾಮರಾಕ್ಕೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿ ಬಳಿಕ ಗ್ಯಾಸ್ ಕಟರ್ನಿಂದ 18 ಲಕ್ಷ ರೂಪಾಯಿ ಕಳ್ಳತನ ಮಾಡಿಕೊಂಡು ಹೋಗಿದೆ.
ಕಲಬುರಗಿ ನಗರದ ರಿಂಗ್ ರಸ್ತೆಯ ರಾಮನಗರ ಬಡಾವಣೆಯ ಬಳಿಯ ಎಸ್.ಬಿ.ಐ ಎಟಿಎಮ್ನಲ್ಲಿ ದರೋಡೆ ಮಾಡಲಾಗಿದೆ. ಜನವರಿ 16 ರಂದು ಬೀದರ್ನಲ್ಲಿ ಎಟಿಎಮ್ಗೆ ಹಣ ತುಂಬುವ ಸಿಬ್ಬಂದಿಗಳ ಮೇಲೆ ದರೋಡೆಕೋರರ ಗ್ಯಾಂಗ್ ಫೈರಿಂಗ್ ಮಾಡಿ 80 ಲಕ್ಷಕ್ಕೂ ಅಧಿಕ ಹಣ ದರೋಡೆ ಮಾಡಿಕೊಂಡು ಹೋಗಿತ್ತು. ಆ ಪ್ರಕರಣದ ಆರೋಪಿಗಳು ಇನ್ನೂ ಸಿಕ್ಕಿಲ್ಲ.. ಇದೀಗ ಕಲಬುರಗಿಯಲ್ಲಿ ಸಹ ಬುಧವಾರ ನಸುಕಿನ ಜಾವ 3 ಗಂಟೆಯಿಂದ 4 ಗಂಟೆಯ ಅವಧಿಯಲ್ಲಿ ಇಬ್ಬರು ದರೋಡೆಕೋರರು, ಎಟಿಎಮ್ ನಲ್ಲಿನ ಸಿಸಿ ಕ್ಯಾಮರಾಗಳಿಗೆ ಬ್ಕ್ಯಾಕ್ ಸ್ಪ್ರೇ ಮಾಡಿದ ಬಳಿಕ ಗ್ಯಾಸ್ ಕಟರ್ನಿಂದ ಮಶೀನ್ ಕಟ್ ಮಾಡಿ 18 ಲಕ್ಷ ರೂಪಾಯಿ ದರೋಡೆ ಮಾಡಿದ್ದಾರೆ.
ದರೋಡೆ ನಡೆಸಿದವರ ಚಲನವಲನ ಪಕ್ಕದ ಅಂಗಡಿಯೊಂದರ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ಎಟಿಎಮ್ ಮುಂಭಾಗದಲ್ಲಿ ಐ20 ಕಾರೊಂದು ಹೋಗಿದ್ದರ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಬೀದರ್ನಲ್ಲಿ ಎಟಿಎಮ್ಗೆ ಹಣ ತುಂಬುವಾಗ ದರೋಡೆ ಘಟನೆ ಬಳಿಕ ಕಲಬುರಗಿ ಪೊಲೀಸರು ಎಲ್ಲಾ ಬ್ಯಾಂಕ್ ಮತ್ತು ಎಟಿಎಮ್ಗೆ ಹಣ ತುಂಬುವ ಏಜೆನ್ಸಿಗಳ ಮುಖ್ಯಸ್ಥರ ಸಭೆ ನಡೆಸಿ ಮುಂಜಾಗ್ರತಾ ಕ್ರಮಗಳನ್ನ ಕೈಗೊಳ್ಳಲು ನಿರ್ದೇಶನ ನೀಡಿದ್ದರು. ಆದರೆ ಇಲ್ಲಿ ದರೋಡೆಯಾದ ಎಟಿಎಮ್ಗೆ ಸೆಕ್ಯುರಿಟಿ ಗಾರ್ಡ್ ಇರಲಿಲ್ಲ. ನಿನ್ನೆ ಸಂಜೆ 6 ಗಂಟೆ ಸುಮಾರಿಗೆ ಇದೇ ಎಟಿಎಂ ಮೆಶಿನ್ನಿಗೆ ಸುಮಾರು 18 ಲಕ್ಷ ರೂಪಾಯಿ ಹಣವನ್ನ ತುಂಬಲಾಗಿತ್ತು.. ಈ ವೇಳೆ ದರೋಡೆಕೋರ ಗ್ಯಾಂಗ್ ಗ್ರಾಹಕರ ಸೋಗಿನಲ್ಲಿ ಬಂದು ಎಟಿಎಮ್ ಬಳಿಯ ಚಲನವಲನ ಗಮನಿಸಿ ಹೋಗಿದ್ದಾರೆ. ಅದರಂತೆ ಇಂದು ನಸುಕಿನ ಜಾವ 3 ಗಂಟೆ ಸುಮಾರಿಗೆ ಎಟಿಎಮ್ ದರೋಡೆ ಮಾಡಿಕೊಂಡು ಹೋಗಿದ್ದಾರೆ. ಸುರಕ್ಷತಾ ಕ್ರಮ ಕೈಗೊಳ್ಳದೇ ಇದ್ದುದರಿಂದಲೇ ದರೋಡೆ ಕೃತ್ಯ ಆಗಿದೆಯೆಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಬಗ್ಗೆ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮೇಲ್ನೋಟಕ್ಕೆ ಉತ್ತರ ಪ್ರದೇಶ ಅಥವಾ ಬಿಹಾರ್ ಗ್ಯಾಂಗ್ ಕೃತ್ಯ ನಡೆಸಿರುವ ಶಂಕೆ ವ್ಯಕ್ತವಾಗಿದೆ.
An incident of theft of Rs 18 lakh from an ATM by spraying black paint on the CCTV camera installed inside the kiosk was reported in the city past midnight on Wednesday.
17-12-25 10:30 pm
HK News Desk
ಯಶವಂತಪುರ - ಕಾರವಾರ ಗೋಮಟೇಶ್ವರ ಎಕ್ಸ್ ಪ್ರೆಸ್ ರೈಲು...
17-12-25 12:45 pm
ಶೃಂಗೇರಿ ; ಬಿಕಾಂ ಓದುತ್ತಿದ್ದ ವಿದ್ಯಾರ್ಥಿನಿ ಹಠಾತ್...
17-12-25 12:42 pm
ಶಿವಮೊಗ್ಗ, ಧಾರವಾಡ ಸೇರಿ ಹಲವೆಡೆ ಲೋಕಾಯುಕ್ತ ದಾಳಿ ;...
16-12-25 03:08 pm
ಮಂಗಳೂರು ಬೆನ್ನಲ್ಲೇ ತುಮಕೂರು ಜಿಲ್ಲಾಧಿಕಾರಿ ಕಚೇರಿಗ...
16-12-25 12:57 pm
17-12-25 10:27 pm
HK News Desk
ಆಸ್ಟ್ರೇಲಿಯಾ ಬೋಂಡಿ ಬೀಚ್ ದಾಳಿ ; ಹೈದ್ರಾಬಾದ್ ಮೂಲದ...
17-12-25 01:38 pm
ಯುಕೆಯ ಮಿಡ್ಲಾಂಡ್ಸ್ ನಲ್ಲಿ ಕನ್ನಡ ರಾಜ್ಯೋತ್ಸವ ; ಬರ...
16-12-25 06:33 pm
ಭಟ್ಕಳ ತಹಸೀಲ್ದಾರ್ ಕಚೇರಿಗೂ ಸ್ಫೋಟದ ಬೆದರಿಕೆ ; ತಮಿ...
16-12-25 01:56 pm
ಪಾಕಿಸ್ತಾನದ ಎರಡು ವಿವಿಗಳಲ್ಲಿ ಸಂಸ್ಕೃತ ಕಲಿಯಲು ಕೋರ...
15-12-25 08:12 pm
17-12-25 08:54 pm
Mangalore Correspondent
New year 2026, Mangalore Rules: ಹೊಸ ವರ್ಷಾಚರಣೆ...
17-12-25 08:19 pm
Udupi, Baby death: ಉಡುಪಿ ; ತಾಯಿ ಕೈಯಿಂದ ಜಾರಿ ಬ...
17-12-25 05:23 pm
Mangalore Jail, Fight, Ccb Police: ಮಂಗಳೂರು ಜೈ...
17-12-25 05:05 pm
Mangalore Landslide, Death: ಗುಡ್ಡ ಕುಸಿದು ಕಾರ್...
16-12-25 10:25 pm
17-12-25 11:14 am
Bangalore Correspondent
ಕದ್ರಿಯಲ್ಲಿ ಬೈಕ್ ಕದ್ದು ಭಟ್ಕಳದಲ್ಲಿ ಮಹಿಳೆಯ ಸರ ಕಸ...
16-12-25 10:35 pm
Mangalore Crime, Robbery, Mukka: 'ಬಂಗಾರ್ ಒಲ್ಪ...
15-12-25 10:26 pm
Udupi Murder, Brahmavar, Update: ಕುಡಿದ ಮತ್ತಿನ...
15-12-25 05:37 pm
Brahmavar Murder, Udupi Crime: ಎಣ್ಣೆ ಪಾರ್ಟಿಯಲ...
15-12-25 12:19 pm