ಬ್ರೇಕಿಂಗ್ ನ್ಯೂಸ್
08-05-25 05:32 pm HK News Desk ಕ್ರೈಂ
ನವದೆಹಲಿ, ಮೇ 8: ಜೈಶ್ ಇ ಮಹಮ್ಮದ್ ಮುಖ್ಯಸ್ಥ ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಜರ್ನ ಸೋದರ, ಮುಫ್ತಿ ಅಬ್ದುಲ್ ರೌಫ್ ಅಸ್ಗರ್ 'ಆಪರೇಷನ್ ಸಿಂಧೂರ' ಕಾರ್ಯಾಚರಣೆಯಲ್ಲಿ ಬಲಿಯಾಗಿದ್ದಾನೆ.
1999ರಲ್ಲಿ ಭಾರತದಿಂದ ಕಂದಹಾರ್ ತೆರಳುತ್ತಿದ್ದ IC-814 ಪ್ರಯಾಣಿಕ ವಿಮಾನದ ಹೈಜಾಕ್ ಪ್ರಕರಣದಲ್ಲಿ ಅಬ್ದುಲ್ ರೌಫ್ ಅಸ್ಗರ್ ಮಾಸ್ಟರ್ ಮೈಂಡ್ ಆಗಿದ್ದ. ಮುಜಫರಬಾದ್ ನಲ್ಲಿರುವ ಜೈಶ್ ನೆಲೆಯ ಮೇಲೆ ಬಾಂಬ್ ದಾಳಿ ನಡೆಸಿದಾಗ ಮಸೂದ್ ಅಜರ್ ಪತ್ನಿ, ಸೋದರ ಸೇರಿದಂತೆ ಹತ್ತು ಮಂದಿ ಸಾವಿಗೀಡಾಗಿದ್ದರು.
ತೀವ್ರ ಗಾಯಗೊಂಡಿದ್ದ ಅಸ್ಗರ್ ಈಗ ಪ್ರಾಣ ಬಿಟ್ಟಿದ್ದಾನೆ. ಮುಫ್ತಿ ಅಬ್ದುಲ್ ರೌಫ್ ಅಸ್ಗರ್ನನ್ನು ಅಬ್ದುಲ್ ರೌಫ್ ಅಜರ್ ಅಂತಲೂ ಕರೆಯುತ್ತಿದ್ದರು. ಜೈಷ್-ಇ- ಮೊಹಮ್ಮದ್ ಸಂಘಟನೆಯ ಕಮಾಂಡರ್ ಹಾಗೂ ಭಾರತಕ್ಕೆ ಬೇಕಾಗಿದ್ದ ಮೋಸ್ಟ್ ವಾಂಟೆಂಡ್ ಉಗ್ರನೂ ಆಗಿದ್ದ.
ಭಾರತದ ದಾಳಿ ಬಗ್ಗೆ ಸ್ಥಳೀಯ ಮಾಧ್ಯಮಕ್ಕೆ ಹೇಳಿಕೆ ನೀಡಿದ್ದ ಮಸೂದ್ ಅಜರ್, ನನ್ನ ಕುಟುಂಬದ 10 ಮಂದಿಯ ಜೀವ ಹೋಗಿದೆ ಎಂದು ತಿಳಿಸಿದ್ದ. ಇದೇ ಮೌಲಾನಾ ಮಸೂದ್ ಅಜರ್ನನ್ನು ಐಸಿ-814 ಕಂದಹಾರ್ ವಿಮಾನ ಅಪಹರಣ ಸಂದರ್ಭದಲ್ಲಿ ದೆಹಲಿಯ ತಿಹಾರ್ ಜೈಲಿನಿಂದ ಬಿಡುಗಡೆ ಮಾಡಲಾಗಿತ್ತು. ಬಳಿಕ ಪಾಕ್ಗೆ ಹೋಗಿ ಭಾರತದ ವಿರುದ್ಧ ಜೈಷ್-ಇ-ಮೊಹಮ್ಮದ್ ಸಂಘಟನೆ ಕಟ್ಟಿದ್ದ.
ಇದೇ ಜೈಷ್ ಮೊಹಮ್ಮದ್ ಸಂಘಟನೆಯೇ 2001ರಲ್ಲಿ ಭಾರತದ ಪಾರ್ಲಿಮೆಂಟ್ ಮೇಲೆ ದಾಳಿ ನಡೆಸಿತ್ತು. ಮಸೂದ್ ಅಜರ್ ಅನುಪಸ್ಥಿತಿಯಲ್ಲಿ ಜೈಷ್ ಇ ಮೊಹಮ್ಮದ್ ಸಂಘಟನೆ ಮುನ್ನೆಡೆಸಿದ್ದ ರೌಫ್ ಅಜರ್ ನನ್ನು ಹೊಡೆದುರುಳಿಸುವಲ್ಲಿ ಭಾರತದ ಸೇನೆ ಯಶಸ್ವಿಯಾಗಿದೆ.
Abdul Rauf Azhar, a globally designated terrorist and the mastermind of the IC-814 Air India flight hijacking, was killed in Indian Armed Forces missile strikes on terror launch pads in Pakistan's Punjab and PoK under 'Operation Sindoor' on Wednesday sources said
14-05-25 05:16 pm
Bangalore Correspondent
Hassan Kidnap: ಅಪ್ಪನ ಎದುರೇ ಮಗಳ ಅಪಹರಣ ; ಬೇಲೂರಿ...
13-05-25 09:50 pm
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
14-05-25 04:45 pm
HK News Desk
ಆದಂಪುರ ವಾಯುನೆಲೆ ಧ್ವಂಸ ಮಾಡಿದ್ದೇವೆಂದ ಪಾಕಿಗಳಿಗೆ...
13-05-25 08:47 pm
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
14-05-25 01:42 pm
Mangalore Correspondent
Agumbe, Accident, Yakshagana: ಆಗುಂಬೆ ; ಭಾರೀ ಮ...
14-05-25 01:28 pm
ಪ್ರಧಾನಿ ಮೋದಿ ಆದಂಪುರ ವಾಯುನೆಲೆಗೆ ದಿಢೀರ್ ಭೇಟಿ ;...
13-05-25 10:33 pm
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm