ಬ್ರೇಕಿಂಗ್ ನ್ಯೂಸ್
09-08-20 05:27 pm Udupi Reporter ಕ್ರೈಂ
ಉಡುಪಿ, ಆಗಸ್ಟ್ 9: ದೇಶದಲ್ಲಿ ಕೇಂದ್ರ ಸರಕಾರವೇನೋ ತ್ರಿವಳಿ ತಲಾಖ್ ಗೆ ನಿಷೇಧ ಹೇರಿದೆ. ಮುಸ್ಲಿಂ ಮಹಿಳೆಯರು ಇದರಿಂದ ಸಂತಸಗೊಂಡಿದ್ದೂ ಆಗಿದೆ. ಆದರೆ, ತ್ರಿವಳಿ ತಲಾಖ್ ನೀಡೋರು ಕಡಿಮೆಯಾಗಿದ್ದಾರೆ ಅಂದರೆ ಅದು ಭ್ರಮೆ ಮಾತ್ರ. ಹುಟ್ಟುಗುಣ ಸುಟ್ಟರೂ ಬಿಡದು ಎನ್ನುವಂತೆ ಕೆಲವರು ವರ್ತಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ಇಲ್ಲೊಬ್ಬ ಫೇಸ್ಬುಕ್ಕಲ್ಲೇ ತಲಾಖ್, ತಲಾಖ್ ಎಂದು ಕಂಬಿ ಎಣಿಸಿದ್ದು..
ಉಡುಪಿ ಜಿಲ್ಲೆಯ ಶಿರ್ವ ನಿವಾಸಿ ಶೇಕ್ ಮೊಹಮ್ಮದ್ ಸಲೀಂ (38) ಎಂಬಾತ ತನ್ನ ಪತ್ನಿಗೆ ಫೇಸ್ಬುಕ್ ತಲಾಖ್ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶಿರ್ವ ಜಾಮಿಯಾ ಮಸೀದಿ ಸಮೀಪದ ನಿವಾಸಿಯಾಗಿರುವ ಮೊಹಮ್ಮದ್ ಸಲೀಂ, 2010ರ ಸೆ.23ರಂದು ವಿವಾಹವಾಗಿದ್ದ. ಅಷ್ಟೇ ಅಲ್ಲ, ಮದುವೆಯಾಗಿ ಪತ್ನಿಯ ಜೊತೆಗೇ ಸೌದಿಗೂ ತೆರಳಿದ್ದ. ದಾಂಪತ್ಯಕ್ಕೆ ಸಾಕ್ಷಿಯಾಗಿ ಪುತ್ರಿಯೂ ಜನಿಸಿದ್ದಳು. ಆದರೆ, ಈ ನಡುವೆ ಸಲೀಂಗೆ ಏನು ಗರ ಬಡಿಯಿತೋ ಗೊತ್ತಿಲ್ಲ. ಸೌದಿ ಅರೇಬಿಯಾದ ದಮ್ಮಾಮ್ನಲ್ಲಿ ಪತ್ನಿ , ಮಗಳನ್ನು ಬಿಟ್ಟು 2019 ಅಕ್ಟೋಬರ್ 3ರಂದು ಎಸ್ಕೇಪ್ ಆಗಿ ಮುಂಬೈಗೆ ಬಂದಿದ್ದ. ಅಷ್ಟೇ ಅಲ್ಲ, ಮುಂಬೈಗೆ ಬರುವಾಗಲೇ ಇನ್ನೊಬ್ಬಳನ್ನು ಕಟ್ಟಿಕೊಂಡೇ ಆಗಮಿಸಿದ್ದ.

ಪತ್ನಿ ಹಾಗೂ ಮಗಳಿಗೆ ಗೊತ್ತೇ ಆಗದ ರೀತಿ ಮತ್ತೊಬ್ಬ ಮಹಿಳೆಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದ. ಅಷ್ಟೇ ಅಲ್ಲ, ಹಳೆಯ ಪತ್ನಿಗೆ ತನ್ನ ಫೇಸ್ಬುಕ್ ಖಾತೆಯ ಮೆಸೆಂಜರ್ ಮೂಲಕ ತ್ರಿವಳಿ ತಲಾಖಿನ ವಾಯ್ಸ್ ಮೆಸೇಜ್ ಕಳಿಸಿದ್ದಾನೆ. ಗಂಡನ ಕಿತಾಪತಿ ಕಂಡು ಆಘಾತಗೊಂಡ ಪತ್ನಿ ಸ್ವಪ್ನಾಝ್, ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧ ಇರುವುದನ್ನು ಮನಗಂಡು ಸೇಡು ತೀರಿಸಲು ನಿರ್ಧರಿಸಿದ್ದಾಳೆ.
ಪತಿಯ ವಂಚನೆಯಿಂದ ದಿಕ್ಕೇ ತೋಚದಂತಾಗಿದ್ದ ಪತ್ನಿ ಸ್ವಪ್ನಾಝ್ ಧೈರ್ಯ ಮಾಡಿ, ಸೌದಿಯಿಂದಲೇ ಶಿರ್ವ ಠಾಣೆಗೆ ದೂರು ನೀಡಿದ್ದಾಳೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಶಿರ್ವ ಪೊಲೀಸರು, ಮೊಹಮ್ಮದ್ ಸಲೀಂ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆಗಸ್ಟ್ 7 ರಂದು ಶಿರ್ವಕ್ಕೆ ಬಂದಿದ್ದ ಮೊಹಮ್ಮದ್ ಸಲೀಂನನ್ನು ಪೊಲೀಸರ ಅರೆಸ್ಟ್ ಮಾಡಿದ್ದು ಕಂಬಿ ಹಿಂದೆ ನಿಲ್ಲಿಸಿದ್ದಾರೆ. ತಲಾಖ್ ತಲಾಖ್ ಎಂದು ಮುಸ್ಲಿಂ ಮಹಿಳೆಯರನ್ನು ಶೋಷಣೆ ಮಾಡುವ ಧೋರಣೆ ಇನ್ನು ನಡೆಯಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಪತ್ನಿ ಸಫ್ನಾಝ್ ಸೌದಿಯಲ್ಲಿದ್ದೇ ಈ ಕೆಲಸ ಮಾಡಿದ್ದು ನಿಜಕ್ಕೂ ಗಟ್ಟಿಗಿತ್ತಿಯ ಕೆಲಸವೇ ಸರಿ..
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
15-08-26 10:08 pm
HK News Staffer
Mangalore City Centre KFC raided: Six-month-o...
15-08-26 09:30 pm
ಗುಟ್ಕಾ, ಪಾನ್ ಮಸಾಲ ಪ್ರತ್ಯೇಕ ಕೊಟ್ಟರೆ ನಿರ್ಬಂಧ ಇಲ...
15-08-26 04:52 pm
Infosys Mangalore, News: ಕೊಟ್ಟಾರದ ಇನ್ಫೋಸಿಸ್ ಕ...
14-08-26 10:23 pm
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
15-08-26 09:06 pm
HK News Staffer
ಸ್ವಾತಂತ್ರ್ಯ ದಿನದಂದೇ ಚಾಮರಾಜನಗರದಲ್ಲಿ ಗುಂಡಿನ ಸದ್...
15-08-26 06:11 pm
David Dsouza Murder, Arrest: ಡೇವಿಡ್ ಹತ್ಯೆ ಪ್ರ...
15-08-26 05:09 pm
ಅಪ್ರಾಪ್ತ ಬಾಲಕಿಯನ್ನು ಕಾರಿನಲ್ಲಿ ಕರೆದೊಯ್ದಿದ್ದಕ್ಕ...
15-08-26 04:19 pm
ಕೆಲಸ ಮಾಡಿಕೊಡುವ ನೆಪದಲ್ಲಿ ಪದೇಪದೇ ಹಣಕ್ಕಾಗಿ ಒತ್ತಾ...
15-08-26 02:06 pm