Mannagudda Petrol Pump Fight: ಮಣ್ಣಗುಡ್ಡ ಪೆಟ್ರೋಲ್ ಪಂಪ್ ನಲ್ಲಿ ಯುವಕರ ಹೊಡೆದಾಟ ; ಗ್ರಾಹಕ ಮತ್ತು ಸಿಬಂದಿ ನಡುವೆ ಯರ್ರಾಬಿರ್ರಿ ಜಗಳ, ಹಲ್ಲೆ ಕೃತ್ಯ ಸಿಸಿಟಿವಿಯಲ್ಲಿ ಸೆರೆ 

19-03-26 10:38 pm       Mangaluru Staffer   ಕ್ರೈಂ

ನಗರದ ಮಣ್ಣಗುಡ್ಡದ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕ ಮತ್ತು ಅಲ್ಲಿನ ಸಿಬಂದಿ ಯುವಕನೊಬ್ಬನ ನಡುವೆ ಮಾರಾಮಾರಿ ಜಗಳ ನಡೆದಿದ್ದು ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ‌. 

ಮಂಗಳೂರು, ಮಾರ್ಚ್ 19: ನಗರದ ಮಣ್ಣಗುಡ್ಡದ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕ ಮತ್ತು ಅಲ್ಲಿನ ಸಿಬಂದಿ ಯುವಕನೊಬ್ಬನ ನಡುವೆ ಮಾರಾಮಾರಿ ಜಗಳ ನಡೆದಿದ್ದು ಇದರ ವಿಡಿಯೋ ಸಿಸಿಟಿವಿಯಲ್ಲಿ ಸೆರೆಯಾಗಿದೆ‌. 

ಮಾರ್ಚ್ 13ರಂದು ಘಟನೆ ನಡೆದಿದ್ದು ಬೈಕಿನಲ್ಲಿ ಬಂದಿದ್ದ ಯುವಕನೊಬ್ಬ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕುವಂತೆ ಹೇಳಿದ್ದ. ಆದರೆ ಶಿವರಾಜ್ ಎಂಬ ರಾಯಚೂರು ಮೂಲದ ಪೆಟ್ರೋಲ್ ಹಾಕುವ ಕಾರ್ಮಿಕ 500 ರೂ. ಪೆಟ್ರೋಲ್ ಹಾಕಿದ್ದ‌. ಈ ವಿಚಾರದಲ್ಲಿ ಇಬ್ಬರ ಮಧ್ಯೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ. ಅಲ್ಲಿನ ಇತರ ಸಿಬಂದಿ ಇಬ್ಬರನ್ನೂ ಸಮಾಧಾನಿಸುತ್ತಿದ್ದರೂ ಇಬ್ಬರು ಯುವಕರು ಹೊಡೆದಾಟ ಮಾಡಿದ್ದಾರೆ. 

ಸಿಬಂದಿ ಶಿವರಾಜ್ ಮೊದಲು ಮೈಗೆ ಕೈಮಾಡಿದ್ದು ಇದರ ಸಿಟ್ಟಿನಲ್ಲಿ ಗ್ರಾಹಕ ಯುವಕನೂ ತನ್ನ ಗೆಳೆಯರನ್ನು ಕರೆದು ತಿರುಗಿ ಹೊಡೆದಿದ್ದಾನೆ. ಅಲ್ಲಿದ್ದ ಎಲ್ಲ ಸಿಬಂದಿ ಗಲಾಟೆ ನಿಲ್ಲಿಸಲು ಯತ್ನಿಸಿದರೂ ಇಬ್ಬರೂ ರೊಚ್ಚಿಗೆದ್ದವರ ರೀತಿ ಬೈದಾಡುತ್ತ ಹೊಡೆದಾಟ ನಡೆಸಿದ್ದಾರೆ. ಒಳಗಡೆ ಕುಳಿತ ನಂತರವೂ ಸಿಬಂದಿ ಯುವಕನಿಗೆ ಹಲ್ಲೆ ನಡೆಸಲಾಗಿದೆ. ಬಳಿಕ ಬರ್ಕೆ ಠಾಣೆಯಲ್ಲಿ ದೂರು ದಾಖಲಾಗಿದ್ದು ಶಿವರಾಜ್ ನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಸಂಜೆಯ ವೇಳೆಗೆ ಪೆಟ್ರೋಲ್ ಪಂಪ್ ಮ್ಯಾನೇಜರ್ ಠಾಣೆಗೆ ತೆರಳಿ ಸಿಬಂದಿ ಯುವಕನನ್ನು ಬಿಡಿಸಿ ತಂದಿದ್ದಾರೆ. ಆದರೆ ಈ ರೀತಿ ದುರ್ವರ್ತನೆ ತೋರಿದ್ದಕ್ಕಾಗಿ ಆತನನ್ನು ಕೆಲಸದಿಂದ ತೆಗೆದು ಹಾಕಿದ್ದಾರೆ.

A violent altercation broke out between a customer and a petrol pump staff member at a fuel station in Mannagudda, Mangaluru, with the entire incident captured on CCTV.