ಬ್ರೇಕಿಂಗ್ ನ್ಯೂಸ್
08-06-25 10:29 pm HK News Desk ಕ್ರೈಂ
ಫರೀದಾಬಾದ್, ಜೂನ್.8: ಎಂಬಿಬಿಎಸ್ ಡಿಗ್ರಿ ಪೂರೈಸಿದ್ದ ಡಾಕ್ಟರ್ ಒಬ್ಬ ತನ್ನನ್ನು ಕಾರ್ಡಿಯೋಲಜಿಸ್ಟ್ ಎಂದು ನಕಲಿ ಸರ್ಟಿಫಿಕೇಟ್ ರೆಡಿ ಹೇಳಿಕೊಂಡು ಖಾಸಗಿ ಆಸ್ಪತ್ರೆಗೆ ಸೇರಿಕೊಂಡಿದ್ದಲ್ಲದೆ, ಕೇವಲ ಎಂಟು ತಿಂಗಳಲ್ಲಿ 50ಕ್ಕೂ ಹೆಚ್ಚು ಹಾರ್ಟ್ ಆಪರೇಶನ್ ಮಾಡಿರುವ ಪ್ರಸಂಗ ಉತ್ತರ ಪ್ರದೇಶದ ಫರೀದಾಬಾದ್ ನಲ್ಲಿ ಬೆಳಕಿಗೆ ಬಂದಿದೆ.
ಪಂಕಜ್ ಮೋಹನ್ ಶರ್ಮಾ ಎಂಬಾತ ಈ ರೀತಿ ನಕಲಿ ಸರ್ಟಿಫಿಕೇಟ್ ಮಾಡಿಕೊಂಡು ಪೋಸು ಕೊಟ್ಟಾತ. ಕಳೆದ ಎಪ್ರಿಲ್ 11ರಂದು ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತ ಸಂಜಯ್ ಗುಪ್ತಾ ಪೊಲೀಸರಿಗೆ ದೂರು ನೀಡಿ, ಪಂಕಜ್ ಶರ್ಮಾನ ವೈದ್ಯಕೀಯ ದಾಖಲೆ ಬಗ್ಗೆ ತನಿಖೆ ಮಾಡುವಂತೆ ಆಗ್ರಹ ಮಾಡಿದ್ದರು. ಇದರಂತೆ ಪೊಲೀಸರು ತನಿಖೆ ನಡೆಸಿದಾಗ, ವೈದ್ಯನ ನಕಲಿತನ ಬಯಲಾಗಿದೆ.
ತನಿಖೆಯ ಸಂದರ್ಭದಲ್ಲಿ ಪಂಕಜ್ ಶರ್ಮಾ ತನ್ನ ನೋಂದಣಿ ಸಂಖ್ಯೆ 2456 ಎಂದು ತಿಳಿಸಿದ್ದ. ಅದರ ಬಗ್ಗೆ ಶೋಧ ನಡೆಸಿದಾಗ, ಡಾ.ಪಂಕಜ್ ಮೋಹನ್ ಎಂಬ ಹೆಸರನ್ನು ಹೊಂದಿದ್ದ ಬೇರೆಯದ್ದೇ ಕಾರ್ಡಿಯೋಲಜಿಸ್ಟ್ ಒಬ್ಬರ ನೋಂದಣಿ ಸಂಖ್ಯೆಯಾಗಿತ್ತು. ಪಂಕಜ್ ಶರ್ಮಾ ಕೇವಲ ಜನರಲ್ ಫಿಸೀಶಿಯನ್ ಮಾತ್ರ ಆಗಿದ್ದು, ಆತನ ನೋಂದಣಿ ಸಂಖ್ಯೆ 28482 ಎಂಬುದಾಗಿತ್ತು. ಪಂಕಜ್ ಶರ್ಮಾ 2024ರ ಜುಲೈ ತಿಂಗಳಲ್ಲಿ ಮೆಡಿಟರ್ನಿಯಾ ಹಾಸ್ಪಿಟಲ್ ಅಧೀನದ ಫರೀದಾಬಾದ್ ನಲ್ಲಿರುವ ಬಾದ್ ಶಾ ಖಾನ್ ಸಿವಿಲ್ ಆಸ್ಪತ್ರೆಯಲ್ಲಿ ಕಾರ್ಡಿಯೋಲಜಿಸ್ಟ್ ಆಗಿ ಸೇರ್ಪಡೆಯಾಗಿದ್ದ. ಕಾರ್ಡಿಯೋಲಜಿ ಬಗ್ಗೆ ಕಲಿತಿರದಿದ್ದರೂ, ಕಾರ್ಡಿಯೋಲಜಿ ಎಂಡಿ ಮತ್ತು ಡಿಎನ್ ಬಿ ಎಂದು ತನ್ನ ಹೆಸರಿನೊಂದಿಗೆ ನಮೂದಿಸಿಕೊಂಡಿದ್ದ.
ನಕಲಿ ಡಾಕ್ಟರ್ ಬಗ್ಗೆ ಸುದ್ದಿಯಾಗುತ್ತಿದ್ದಂತೆ ರಿಯಲ್ ಡಾಕ್ಟರ್ ಡಾ.ಪಂಕಜ್ ಮೋಹನ್ ತನ್ನ ನೋದಣಿ ಸಂಖ್ಯೆಯನ್ನು ದುರುಪಯೋಗ ಮಾಡಿದ್ದಾಗಿ ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ನಿಗೆ ದೂರು ನೀಡಿದ್ದಾರೆ. ಅಲ್ಲದೆ, ಆರೋಪಿತ ಪಂಕಜ್ ಶರ್ಮಾಗೆ ಲೀಗಲ್ ನೋಟೀಸ್ ಕೂಡ ನೀಡಿದ್ದಾರೆ. ಆಬಳಿಕ ಆಸ್ಪತ್ರೆಗೆ ಬರುತ್ತಿದ್ದ ರೋಗಿ ಮತ್ತು ಸಂಬಂಧಿಕರು ಕೂಡ ಪಂಕಜ್ ಶರ್ಮಾ ಸರ್ಟಿಫಿಕೇಟ್ ಬಗ್ಗೆ ಪ್ರಶ್ನೆ ಮಾಡುತ್ತಿದ್ದರು. ಪೊಲೀಸರು ಪ್ರಕರಣ ದಾಖಲಿಸಿದ ಬಳಿಕ ಆಸ್ಪತ್ರೆ ಆಡಳಿತ ಮಂಡಳಿಯೇ ಪಂಕಜ್ ಶರ್ಮಾನನ್ನು ತೆಗೆದು ಹಾಕಿತ್ತು.
A doctor with only an MBBS degree allegedly posed as a cardiologist and conducted over 50 heart procedures in eight months at Badshah Khan Civil Hospital in Faridabad.
25-08-26 03:39 pm
HK News Staffer
ಕರ್ನಾಟಕದಲ್ಲಿ H1N1 ಆತಂಕ ; 8 ತಿಂಗಳಲ್ಲಿ 4,212 ಪ...
24-08-26 03:16 pm
ಕರ್ನಾಟಕದಲ್ಲಿ ‘ಅನಲಾಗ್ ಪನ್ನೀರ್’ಗೆ ಒಂದು ವರ್ಷ ನಿಷ...
22-08-26 10:15 pm
ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್ ನಾಪತ್ತೆ ; ಏ...
22-08-26 03:01 pm
500 ಕೆಪಿಎಸ್ ಶಾಲೆಗಳ ಸಮಗ್ರ ಅಭಿವೃದ್ಧಿಗೆ ₹2500 ಕೋ...
22-08-26 11:10 am
24-08-26 04:55 pm
HK News Staffer
ಪಾಲ್ಘಾಟ್ ರೈಲ್ವೇ ವಿಭಾಗದಿಂದ ಮಂಗಳೂರು ಹೊರಕ್ಕೆ ; ವ...
22-08-26 08:37 pm
ದೇಹದಲ್ಲಿಡೀ ಉರಿ ಉರಿ! ಕೆರೆಯಲ್ಲೇ ವಾಸ, ಅಲ್ಲೇ ಆಹಾ...
20-08-26 10:55 am
ತಮಿಳುನಾಡು ಮಹಿಳಾ ಸರ್ಕಾರಿ ನೌಕರರಿಗೆ ಸರ್ಕಾರದ ಬಂಪರ...
19-08-26 02:13 pm
ಲಷ್ಕರ್ ಸ್ಥಾಪಕ ಹಫೀಜ್ ಸಯೀದ್ 10,000 ಯುವಕರನ್ನು ಕಾ...
19-08-26 01:06 pm
25-08-26 09:37 pm
HK News Staffer
'ಕಿಂಗ್ಸ್ ಬಜಾರ್' ಹೆಸರಲ್ಲಿ ದುಪ್ಪಟ್ಟು ಲಾಭದ ಹೂಡಿಕ...
25-08-26 09:00 pm
ಪುತ್ತೂರು ಪೇಟೆಯಲ್ಲಿ ಸ್ವಯಂಪ್ರೇರಿತ ಬಂದ್ ; ವಾಹನ ಸ...
25-08-26 02:55 pm
ಕೆಎಸ್ ಹೆಗ್ಡೆ ಮೆಡಿಕಲ್ ಕಾಲೇಜಿನ ಪ್ರೊಫೆಸರ್, ಮಂಗಳೂ...
24-08-26 06:25 pm
ಈದ್ ಮಿಲಾದ್ ; ಬೆಳಗ್ಗೆ ಕೋಟೆಪುರದಿಂದ ಉಳ್ಳಾಲ ದರ್ಗಾ...
24-08-26 04:14 pm
25-08-26 10:39 pm
HK News Staffer
ಉಡುಪಿಯ ದೇವಸ್ಥಾನದ ಕೆರೆಯಲ್ಲಿ ಮುಳುಗಿ 15 ವರ್ಷದ ವಿ...
25-08-26 07:27 pm
ವಿಟ್ಲ ; ಈಜಲು ತೆರಳಿದ್ದ ಎಸ್ಸಿಡಿಸಿಸಿ ಬ್ಯಾಂಕ್...
25-08-26 12:46 pm
ಮಲ್ಪೆ ಬಂದರಿನಲ್ಲಿ ಮೀನುಗಾರರಿಬ್ಬರ ಗಲಾಟೆ ಕೊಲೆಯಲ್ಲ...
25-08-26 12:45 pm
ಡೇವಿಡ್ ಡಿಸೋಜ ಹತ್ಯೆ ಪ್ರಕರಣದಲ್ಲಿ ಮಹತ್ತರ ತಿರುವು...
25-08-26 11:38 am