ಬ್ರೇಕಿಂಗ್ ನ್ಯೂಸ್
13-07-25 05:23 pm Bangalore Correspondent ಕ್ರೈಂ
ಬೆಂಗಳೂರು, ಜುಲೈ 13 : ತನ್ನ ಬಾಳ ಸಂಗಾತಿಯನ್ನು ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಹುಡುಕಲು ಹೋದ ಯುವಕನೊಬ್ಬ ಅದರಲ್ಲಿ ಕನೆಕ್ಟ್ ಆದ ಯುವತಿಯನ್ನು ನಂಬಿ 44 ಲಕ್ಷ ರೂಪಾಯಿ ಮೊತ್ತವನ್ನು ನಕಲಿ ಕ್ರಿಪ್ಟೋಕರೆನ್ಸಿ ಮೇಲೆ ಹೂಡಿಕೆ ಮಾಡಿ ಪಂಗನಾಮ ಹಾಕಿಕೊಂಡಿದ್ದಾನೆ.
ಬೆಂಗಳೂರಿನಲ್ಲಿ ನೆಲೆಸಿರುವ ಉಳ್ಳಾಲ ಮೂಲದ ವ್ಯಕ್ತಿಯೊಬ್ಬ ಮೇ 5ರಂದು ಮ್ಯಾಟ್ರಿಮೋನಿಯಲ್ ಸೈಟ್ ತಡಕಾಡುತ್ತಿದ್ದಾಗ ಅರ್ಚನಾ ಎಂಬಾಕೆಯ ಪ್ರೊಫೈಲ್ ಕಣ್ಣಿಗೆ ಬಿದ್ದಿತ್ತು. ನೋಡಲು ಅಂದವಾಗಿದ್ದ ಆಕೆಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿದ್ದ. ಆಕೆ ರಿಕ್ವೆಸ್ಟ್ ಸ್ವೀಕರಿಸಿ ವಾಟ್ಸಪ್ ನಂಬರ್ ಕೇಳಿ ಚಾಟಿಂಗ್ ಆರಂಭಿಸಿದ್ದಳು. ಅರ್ಚನಾ ತನ್ನನ್ನು ಜರ್ಮನಿಯಲ್ಲಿ ವಾಸವಿದ್ದೇನೆಂದು ಹೇಳಿದ್ದಲ್ಲದೆ, ವಾಟ್ಸಪ್ ನಲ್ಲಿ ಚಾಟಿಂಗ್ ಮಾಡುತ್ತ ಆತ್ಮೀಯತೆ ಬೆಳೆಸಿದ್ದಳು.
ಕೆಲವು ದಿನಗಳ ನಂತರ ಇಬ್ಬರೂ ತಮ್ಮ ಆಸಕ್ತಿ, ಇನ್ನಿತರ ವಿಷಯಗಳನ್ನು ವಿನಿಮಯ ಮಾಡಿಕೊಂಡಿದ್ದರು. ಈ ನಡುವೆ, ಕ್ರಿಪ್ಟೋ ಕರೆನ್ಸಿ ಮೇಲೆ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಬರುತ್ತದೆ ಎಂದು ಹೇಳಿ ಆಕೆ ಲಿಂಕ್ ಒಂದನ್ನು ಷೇರ್ ಮಾಡಿದ್ದಳು. ಲಾಭದ ಬಗ್ಗೆ ವಿವರವನ್ನೂ ಹೇಳಿಕೊಂಡಿದ್ದಳು. ಹೇಗೂ ಮದುವೆಯಾಗಲು ಬಯಸಿದ್ದ ಹುಡುಗಿಯೇ ಆಫರ್ ಮಾಡಿದ್ದಾಳೆಂದ ಮೇಲೆ ತಾನು ಕಡಿಮೆಯಾಗುವುದು ಬೇಡ ಎಂದು ಕ್ರಿಪ್ಟೋ ಮೇಲೆ ಹೂಡಿಕೆಗೆ ಯುವಕನೂ ಒಪ್ಪಿಗೆ ನೀಡಿದ್ದ. ಆಕೆ ಕಳಿಸಿದ್ದ www.bitcoin.-az.com ಎನ್ನುವ ನಕಲಿ ವೆಬ್ ಸೈಟ್ ನಲ್ಲಿ ತನ್ನ ಖಾತೆಯನ್ನು ತೆರೆದಿದ್ದ ಯುವಕ ಮೊದಲಿಗೆ 1.50 ಲಕ್ಷ ಹೂಡಿಕೆ ಮಾಡಿದ್ದಾನೆ. ಜರ್ಮನಿ ದೇಶದ ಹೆಚ್ಚುವರಿ ಟ್ಯಾಕ್ಸ್ ಎಂದು ಪ್ರತಿ ಹೂಡಿಕೆಯ ಮೇಲೂ ಹತ್ತು ಸಾವಿರವನ್ನೂ ಪಡೆಯಲಾಗಿತ್ತು.
ಇದೇ ರೀತಿ ಮೇ 18ರಿಂದ ತೊಡಗಿ ಜೂನ್ 23ರ ವರೆಗೂ ಬೆಂಗಳೂರಿನ ವ್ಯಕ್ತಿ ನಕಲಿ ಕ್ರಿಪ್ಟೋ ವೆಬ್ ಸೈಟ್ ಮೇಲೆ ಹೂಡಿಕೆ ಮಾಡಿದ್ದು, ಶಂಕಿತ ಯುವತಿ ನೀಡಿದ್ದ ಏಳು ಬ್ಯಾಂಕ್ ಖಾತೆ ಮತ್ತು ಯುಪಿಐ ಐಡಿ ಮೇಲೆಯೂ ಹಣ ಸಂದಾಯ ಮಾಡಿದ್ದ. ಆನಂತರ ತನ್ನ ಹಣವನ್ನು ಮರಳಿ ಪಡೆಯಲು ಮುಂದಾಗಿದ್ದು ಇದರ ಬಗ್ಗೆ ಆಕೆಗೂ ತನ್ನ ವಹಿವಾಟು ದೊಡ್ಡ ಮೊತ್ತಕ್ಕೆ ಹೋಗಿರುವುದನ್ನೂ ತಿಳಿಸಿದ್ದ. ಹಣ ಹಾಕುತ್ತಿದ್ದಷ್ಟು ದಿನವೂ ನಿರಂತರ ಟಚ್ ನಲ್ಲಿದ್ದ ಯುವತಿ ಮತ್ತಷ್ಟು ಹಣ ಹಾಕುವಂತೆ ಪ್ರೋತ್ಸಾಹ ನೀಡುತ್ತಿದ್ದಳು. ಈ ವ್ಯಕ್ತಿ ತನ್ನ ಹಣ ಹಿಂತಿರುಗಿ ಪಡೆಯಲು ಯತ್ನಿಸಿದಾಗ, ಜರ್ಮನಿ ಆಗಿರುವುದರಿಂದ ಹೆಚ್ಚುವರಿ ತೆರಿಗೆ ಕಟ್ಟಬೇಕಾಗುತ್ತದೆ ಎಂದು ಹೇಳಿದ್ದಳು. ಆನಂತರ ತನ್ನ ಸಂಪರ್ಕವನ್ನೇ ಕಡಿತ ಮಾಡಿದ್ದು ಹಣ ಹೂಡಿದ್ದ ಯುವಕನನ್ನು ಮೋಸಗೊಳಿಸಿದ್ದಾಳೆ. ಮೋಸ ಅರಿವಾಗುತ್ತಲೇ ಯುವಕ ಬೆಂಗಳೂರಿನ ಪಶ್ಚಿಮ ಸಿಇಎನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
A young man from Bengaluru has allegedly lost ₹44 lakh after being tricked into investing in a fake cryptocurrency scheme by a woman he met through a matrimonial website.
21-09-25 01:28 pm
Bangalore Correspondent
ಕೆಮ್ಮಣ್ಣು ಗುಂಡಿ ಫಾಲ್ಸ್ ನಲ್ಲಿ ಸೆಲ್ಫಿ ತೆಗೆದುಕೊಳ...
20-09-25 10:57 pm
ಜಾತಿ ಗಣತಿಗೆ ಸರ್ವ ಸಿದ್ಧತೆ ; ಗಣತಿಗೆ 1.75 ಲಕ್ಷ ಶ...
20-09-25 10:26 pm
Hassan Instagram, Suicide: ಪಾರ್ಕ್ ನಲ್ಲಿ ಯುವತಿ...
20-09-25 02:59 pm
Cm Siddaramaiah, Caste Survey: ಜಾತಿ ಸಮೀಕ್ಷೆ ಮ...
19-09-25 10:04 pm
20-09-25 11:03 pm
HK News Desk
ಪಾಕಿಸ್ತಾನಕ್ಕೆ ಹೋದರೆ ನನ್ನ ಮನೆಗೆ ಹೋದ ಅನುಭವ ಆಗುತ...
20-09-25 11:42 am
ಸಿಂಗಾಪುರದಲ್ಲಿ ಸ್ಕ್ಯೂಬಾ ಡೈವಿಂಗ್ ಅವಘಡ: ಬಾಲಿವುಡ್...
19-09-25 05:45 pm
Yasin Malik: ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್ ಭೇ...
19-09-25 02:24 pm
ಕೇಂದ್ರೀಕೃತ ಸಾಫ್ಟ್ವೇರ್ ಬಳಸಿ ಬೂತ್ಗಳಿಂದಲೇ ಮತದಾ...
18-09-25 08:14 pm
20-09-25 10:39 pm
Mangalore Correspondent
Scdcc Bank, Mangalore: ಎಸ್ಸಿಡಿಸಿಸಿ ಬ್ಯಾಂಕ್ ನಿ...
20-09-25 09:37 pm
Indiana Hospital, Mangalore: ಇಂಡಿಯಾನ ಆಸ್ಪತ್ರೆ...
20-09-25 09:34 pm
Mangalore, Kumpala, Suicide: ಸೋಮೇಶ್ವರ ಕಡಲ ಕಿನ...
20-09-25 08:46 pm
ಜಾತಿ, ಶೈಕ್ಷಣಿಕ ಸಮೀಕ್ಷೆ ; 47 ಹಿಂದು ಉಪ ಜಾತಿಗಳಲ್...
20-09-25 08:29 pm
21-09-25 02:30 pm
Bangalore Correspondent
ತುಂಬೆ, ಉಪ್ಪಿನಂಗಡಿಯಲ್ಲಿ ಹಟ್ಟಿಯಿಂದ ದನ ಕದ್ದು ಮಾಂ...
20-09-25 05:11 pm
Kasaragod Sexual Abuse: ಅಪ್ರಾಪ್ತ ಬಾಲಕನಿಗೆ ಸಲಿ...
18-09-25 11:44 am
Vijayapura Bank Robbery: SBI ಬ್ಯಾಂಕ್ ದರೋಡೆ ;...
17-09-25 09:44 pm
Mangalore Crime, Cattle Theft: ಅಡ್ಯಾರ್ ನಲ್ಲಿ...
17-09-25 06:04 pm