ಬ್ರೇಕಿಂಗ್ ನ್ಯೂಸ್
21-07-25 10:17 pm Mangalore Correspondent ಕ್ರೈಂ
ಮಂಗಳೂರು, ಜುಲೈ 21 : ದೇಶಾದ್ಯಂತ ಉದ್ಯಮಿಗಳನ್ನು ಗುರಿಯಾಗಿಸಿ ಮೋಸದ ಜಾಲದಲ್ಲಿ ಸಿಲುಕಿಸುತ್ತಿದ್ದ ರೋಶನ್ ಸಲ್ಡಾನ ವಿರುದ್ಧ ಬಿಹಾರ ಮೂಲದ ಉದ್ಯಮಿಯೊಬ್ಬರು ಮಂಗಳೂರಿನಲ್ಲಿ ಕೇಸು ದಾಖಲಿಸಿದ್ದಾರೆ. ತನಗೆ ಹತ್ತು ಕೋಟಿಗೂ ಮಿಕ್ಕಿ ಮೋಸ ಮಾಡಿದ್ದಾಗಿ ದೂರು ನೀಡಿದ್ದಾರೆ. ಹತ್ತು ಕೋಟಿಯಷ್ಟು ಮೊತ್ತದ ವಂಚನೆ ಪ್ರಕರಣ ದಾಖಲಾದರೆ, ಸಿಐಡಿಗೆ ಕೊಡಬೇಕೆಂಬ ಕಾನೂನಿನಂತೆ ಸದ್ರಿ ಪ್ರಕರಣವನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ಮಹಾರಾಷ್ಟ್ರ, ಬೆಂಗಳೂರಿನ ಉದ್ಯಮಿಗಳು ಸೇರಿ ಒಟ್ಟು ಐದು ಮಂದಿ ರೋಶನ್ ಸಲ್ಡಾನ ವಿರುದ್ಧ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಸೋಮವಾರ ಬಿಹಾರ ಮೂಲದ ಉದ್ಯಮಿಯೊಬ್ಬರು ಹತ್ತು ಕೋಟಿ ವಂಚನೆ ಮಾಡಿರುವ ಬಗ್ಗೆ ದೂರು ನೀಡಿದ್ದಾರೆ. ಈವರೆಗೆ ಒಟ್ಟು 50 ಕೋಟಿಗೂ ಹೆಚ್ಚು ವಂಚನೆ ಎಸಗಿರುವ ಬಗ್ಗೆ ಪ್ರಕರಣ ದಾಖಲಾಗಿದ್ದು, ಬಿಹಾರ ಮೂಲದ ಉದ್ಯಮಿಯ ಪ್ರಕರಣ ಹೊರತುಪಡಿಸಿ ಉಳಿದವನ್ನು ಮಂಗಳೂರು ಪೊಲೀಸರೇ ತನಿಖೆ ನಡೆಸಲಿದ್ದಾರೆ.
ದೇಶದ ಪ್ರಮುಖ ನಗರಗಳಲ್ಲಿ 20ಕ್ಕೂ ಹೆಚ್ಚು ಏಜಂಟರನ್ನು ಇಟ್ಟುಕೊಂಡಿದ್ದ ರೋಶನ್ ಸಲ್ಡಾನ ಉದ್ಯಮಿಗಳನ್ನು ಪರಿಚಯಿಸಿ ಕೊಟ್ಟರೆ ಇಂತಿಷ್ಟು ಕಮಿಷನ್ ನೀಡುತ್ತಿದ್ದ. ಏಜಂಟರ ಮಾಹಿತಿ ಆಧರಿಸಿ ಉದ್ಯಮಿಗಳೇ ರೋಶನ್ ಸಲ್ಡಾನನ್ನು ಸಂಪರ್ಕಿಸುತ್ತಿದ್ದರು. ಆನಂತರ, ಬೆಂಗಳೂರಿನ ಐಷಾರಾಮಿ ಹೊಟೇಲ್ ಗಳಲ್ಲಿ ಕುಳಿತು ಅಥವಾ ಮಂಗಳೂರಿಗೆ ಬಂದರೆ ತನ್ನ ಮನೆಗೆ ಕರೆದೊಯ್ದು ವಿಶೇಷ ಆತಿಥ್ಯ ಕೊಡಿಸುತ್ತಿದ್ದ. ತನ್ನ ಮನೆಯ ಐಷಾರಾಮಿ ಬಂಗಲೆಯಲ್ಲಿ ಎಲ್ಲ ರೀತಿಯ ಆತಿಥ್ಯ ಕೊಟ್ಟು ಅವರನ್ನು ತೃಪ್ತಿಪಡಿಸುತ್ತಿದ್ದ. ಇದರಿಂದ ಉತ್ತೇಜಿತರಾಗುತ್ತಿದ್ದ ಉದ್ಯಮಿಗಳು ಈತನನ್ನು ನಂಬಿ ಸಾಲಕ್ಕಾಗಿ 3-4 ಪರ್ಸೆಂಟಿನಷ್ಟು ಸ್ಟಾಂಪ್ ಡ್ಯೂಟಿಗೆಂದು ನಗದು ರೂಪದಲ್ಲಿ ನೀಡಲು ಒಪ್ಪುತ್ತಿದ್ದರು. ಇದನ್ನೇ ದಾಳವನ್ನಾಗಿಸಿ ರೋಶನ್ ದೇಶಾದ್ಯಂತ ಉದ್ಯಮಿಗಳನ್ನು ಲೂಟಿ ಮಾಡಿದ್ದ ಎನ್ನೋದು ಪೊಲೀಸರ ತನಿಖೆಯಲ್ಲಿ ಪತ್ತೆಯಾಗಿದೆ.
ತಾನು ಆಗರ್ಭ ಶ್ರೀಮಂತ ಎಂದು ಪೋಸು ನೀಡುವುದಕ್ಕಾಗಿ ಮನೆಯ ಆವರಣದಲ್ಲಿ, ವೆರಾಂಡಾದಲ್ಲಿ ಅತಿ ಬೆಲೆಯ ಬೋನ್ಸಾಯ್ ಗಿಡಗಳನ್ನು ನೆಟ್ಟಿದ್ದ. ಅಲ್ಲದೆ, ವಿದೇಶಿ ಮದ್ಯದ ಬಾಟಲಿಗಳನ್ನು ಬಾರ್ ಅಂಡ್ ರೆಸ್ಟೋರೆಂಟ್ ರೀತಿಯಲ್ಲಿ ಶೇಖರಣೆ ಮಾಡಿಟ್ಟಿದ್ದ. ಹೊಂಬಣ್ಣದಿಂದ ಮಿಂಚುವ ಸೋಫಾ ಸೆಟ್, ಬೇರೆ ಬೇರೆ ಆಕಾರದ ಕೆತ್ತನೆಗಳು, ಬಂಗಾರ ಬಣ್ಣದ ಮೂರ್ತಿಗಳು ಬಂದ ಅತಿಥಿಗಳನ್ನು ಮೋಡಿ ಮಾಡುತ್ತಿದ್ದವು. ರೋಶನ್ ಸಲ್ದಾನ ಹೆಚ್ಚಿನ ಪ್ರಕರಣಗಳಲ್ಲಿ ನಗದು ರೂಪದಲ್ಲಿಯೇ ಪಡೆದಿದ್ದರಿಂದ ಉದ್ಯಮಿಗಳು ಐಟಿ, ಇಡಿಯ ಉಸಾಬರಿ ಬೇಡವೆಂದು ದೂರು ನೀಡುತ್ತಿರಲಿಲ್ಲ. ಈಗ ಅಸಲಿ ಬಣ್ಣ ಮಾಧ್ಯಮಗಳಲ್ಲಿ ಬರುತ್ತಿದ್ದಂತೆ ಇದನ್ನು ನೋಡಿ ದಿನದಿಂದ ದಿನಕ್ಕೆ ಬೇರೆ ಬೇರೆ ಕಡೆಯ ಉದ್ಯಮಿಗಳು ದೂರು ನೀಡಲು ಮುಂದೆ ಬರುತ್ತಿದ್ದಾರೆ.
ದೊಡ್ಡ ಮಟ್ಟದ ಆರ್ಥಿಕ ವಂಚನೆ ಆಗಿರುವುದರಿಂದ ಇಡಿ, ಐಟಿ ಇಲಾಖೆಯವರೂ ಈತನ ಬೆನ್ನು ಬೀಳುವ ಸಾಧ್ಯತೆಯಿದೆ. ಈತನ ಜೊತೆಗೆ ಸಂಪರ್ಕದಲ್ಲಿದ್ದ ಏಜಂಟರನ್ನೂ ಪೊಲೀಸರು ಪತ್ತೆ ಮಾಡುತ್ತಿದ್ದು, ಇನ್ನೊಂದು ವಾರದಲ್ಲಿ ಎಲ್ಲ ಚಿತ್ರಣ ಲಭಿಸಲಿದೆ ಎಂಬ ವಿಶ್ವಾಸದಲ್ಲಿ ಸೆನ್ ಕ್ರೈಮ್ ವಿಭಾಗದ ಪೊಲೀಸರಿದ್ದಾರೆ.
In a major financial fraud case unfolding in Mangaluru, a businessman from Bihar has lodged a complaint against Roshan Saldanha, accusing him of duping him of over ₹10 crore. Following legal protocol, since the amount exceeds ₹10 crore, the case has been officially handed over to the Criminal Investigation Department (CID) for a deeper probe, confirmed Police Commissioner Sudhir Reddy.
16-10-25 09:04 pm
Bangalore Correspondent
ನವೆಂಬರಲ್ಲಿ ಅಧಿಕಾರ ಬಿಡಲು ಹೈಕಮಾಂಡ್ ಹೇಳಿಲ್ಲ, ಸಿದ...
16-10-25 04:44 pm
ಆರೆಸ್ಸೆಸ್ ಚಟುವಟಿಕೆ ನಿಷೇಧ ; ಸಚಿವ ಪ್ರಿಯಾಂಕ ಖರ್ಗ...
16-10-25 04:40 pm
ರಾಜ್ಯದಲ್ಲಿ 800 ಸರಕಾರಿ ಶಾಲೆ ಕರ್ನಾಟಕ ಪಬ್ಲಿಕ್ ಶಾ...
15-10-25 10:59 pm
ದೀಪಾವಳಿಗೆ ಹೆಚ್ಚುವರಿ ರೈಲು ; ಮಂಗಳೂರು- ಬೆಂಗಳೂರು,...
15-10-25 03:35 pm
16-10-25 10:52 pm
HK News Desk
ಕಂದಹಾರ್ ಮೇಲೆ ಪಾಕ್ ವಾಯುಪಡೆ ಬಾಂಬ್ ದಾಳಿ ; ತಾಲಿಬಾ...
15-10-25 11:02 pm
ರಾಜಸ್ಥಾನದಲ್ಲಿ ಭೀಕರ ಬಸ್ ದುರಂತ ; ಮಕ್ಕಳು, ಮಹಿಳೆಯ...
15-10-25 12:09 pm
ಟ್ರಂಪ್ ಒತ್ತಡ ನಡುವೆಯೇ ಭಾರತದಲ್ಲಿ ಗೂಗಲ್ ಸಂಸ್ಥೆ ಭ...
14-10-25 10:33 pm
ಹಮಾಸ್ - ಇಸ್ರೇಲ್ ಶಾಂತಿ ಒಪ್ಪಂದ ; ಎರಡು ವರ್ಷಗಳ ಅಕ...
14-10-25 11:22 am
16-10-25 10:37 pm
Mangalore Correspondent
ತಲೆಮರೆಸಿಕೊಂಡ ಆರೋಪಿಗಳ ಬೆನ್ನುಬಿದ್ದ ಮಂಗಳೂರು ಪೊಲೀ...
16-10-25 08:26 pm
ಪ್ರಿಯಾಂಕ ಖರ್ಗೆ ಮಾತು ಸರಿಯಾಗಿಯೇ ಇದೆ, ಸಮಾಜದಲ್ಲಿ...
16-10-25 05:09 pm
ತೆಂಕುತಿಟ್ಟಿನ ಪ್ರಸಿದ್ಧ ಭಾಗವತ, ಗಾನ ಕೋಗಿಲೆ ದಿನೇಶ...
16-10-25 01:11 pm
Pumpwell Kankandy Road close: ಪಂಪ್ವೆಲ್ - ಕಂಕ...
15-10-25 05:36 pm
15-10-25 04:51 pm
Bangalore Correspondent
ನಿಡ್ಡೋಡಿ ಮನೆಯಲ್ಲಿ ಗ್ಯಾಂಗ್ ರೇಪ್ ಸಂಚು ; ನಾಲ್ವರು...
15-10-25 12:00 pm
ಅಮಲಿಗಾಗಿ ಯುವಕರಿಗೆ ಕಫ್ ಸಿರಪ್ ಮಾರಾಟ ದಂಧೆ ; ದಾವಣ...
14-10-25 04:44 pm
ರುಪಾಯಿಗೆ ನಾಲ್ಕು ಪಟ್ಟು ಯುಕೆ ಪೌಂಡ್ ಕರೆನ್ಸಿಯ ಆಮಿ...
14-10-25 11:19 am
Vitla, Honey Trap, Mangalore Crime: ಗಲ್ಫ್ ಉದ್...
13-10-25 10:04 pm