ಬ್ರೇಕಿಂಗ್ ನ್ಯೂಸ್
05-05-26 11:23 pm HK News Desk ಕ್ರೈಂ
ಮಂಗಳೂರು, ಮೇ 5: ಫೇಸ್ಬುಕ್, ಇನ್ಸ್ ಟಾ ಗ್ರಾಮ್ ರೀತಿಯ ಜಾಲತಾಣದಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೆಸರಲ್ಲೇ ನಕಲಿ ಎಐ ವಿಡಿಯೋ ಬಳಸಿ ಜನರನ್ನು ಯಾಮಾರಿಸುವ ಯತ್ನ ರಾಜಾರೋಷ ನಡೆಯುತ್ತಿದೆ. ಈ ಮೋಸದ ಜಾಲಕ್ಕೀಗ ಬುದ್ಧಿವಂತರ ಜಿಲ್ಲೆಯೆಂದು ಹಣೆಪಟ್ಟಿ ಹೊತ್ತಿರುವ ಮಂಗಳೂರಿನ ವ್ಯಕ್ತಿಯೇ ಬಲಿಯಾಗಿದ್ದಾರೆ. ನಕಲಿ ಆನ್ಲೈನ್ ಟ್ರೇಡಿಂಗ್ ಮೋಸದಲ್ಲಿ ಸಿಲುಕಿ 75 ವರ್ಷದ ಹಿರಿಯ ನಾಗರಿಕರೊಬ್ಬರು 18.81 ಲಕ್ಷ ರು. ಕಳಕೊಂಡಿರುವುದು ಬೆಳಕಿಗೆ ಬಂದಿದೆ.
ಕಳೆದ ಡಿಸೆಂಬರ್ನಲ್ಲಿ ಸಂತ್ರಸ್ತರು ಫೇಸ್ಬುಕ್ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಅವರ ರೀತಿಯಲ್ಲೇ ಭಾಷಣವಿರುವ ಆನ್ಲೈನ್ ಟ್ರೇಡಿಂಗ್ ಕುರಿತ ವಿಡಿಯೋವೊಂದನ್ನು ನೋಡಿದ್ದರು. ಇದನ್ನು ನಿಜವೆಂದು ನಂಬಿದ ಅವರು ವಿಡಿಯೋ ಕೆಳಗಿದ್ದ ಲಿಂಕ್ ಕ್ಲಿಕ್ ಮಾಡಿ ತಮ್ಮ ವಿವರಗಳನ್ನು ನೋಂದಾಯಿಸಿದ್ದರು. ಇದಾದ ಬೆನ್ನಲ್ಲೇ ‘ಮೀನಾಕ್ಷಿ’ ಎಂಬ ಹೆಸರಿನ ವ್ಯಕ್ತಿಯಿಂದ ಕರೆ ಬಂದಿದ್ದು, ಹೆಚ್ಚಿನ ಲಾಭದ ಆಸೆ ತೋರಿಸಿ ಹಂತ ಹಂತವಾಗಿ ಹಣ ಹೂಡಿಕೆ ಮಾಡುವಂತೆ ಪ್ರೇರೇಪಿಸಿದ್ದಾರೆ. ಹಣ ಡಬಲ್ ಆಗುತ್ತೆ, ಇದಕ್ಕೆ ಕೇಂದ್ರ ಸರ್ಕಾರವೇ ಗ್ಯಾರಂಟಿ ಎಂದು ಹಣಕಾಸು ಸಚಿವರೇ ಹೇಳುತ್ತಿರುವ ಅಸಲಿ ರೀತಿಯಲ್ಲೇ ಇರುವ ವಿಡಿಯೋ ನಂಬಿ ವ್ಯಕ್ತಿ ತನ್ನ ನಿವೃತ್ತಿಯ ಹಣವನ್ನು ಹೂಡಿಕೆ ಮಾಡಿದ್ದರು.
ಆನಂತರ, ಅಕ್ಷರ ಗೌಡ ಎಂಬ ಹೆಸರಿನ ವ್ಯಕ್ತಿ ಆನಂದ ಉನ್ನಿಕೃಷ್ಣ ಅವರ ಅಸಿಸ್ಟೆಂಟ್ ಎಂದು ಪರಿಚಯಿಸಿಕೊಂಡು, ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿ ವಾಟ್ಸಪ್ ಮೂಲಕ ಹೂಡಿಕೆಗೆ ಪ್ರೇರೇಪಿಸಿದ್ದ. ಆರೋಪಿಗಳ ಮಾತು ನಂಬಿದ ವೃದ್ಧ ವ್ಯಕ್ತಿ ಡಿಸೆಂಬರ್ 18ರಂದು ₹3 ಲಕ್ಷ, ಡಿಸೆಂಬರ್ 26ರಂದು ₹7 ಲಕ್ಷ, ಜನವರಿ 6ರಂದು ₹3 ಲಕ್ಷ ಹಾಗೂ ಜನವರಿ 12ರಂದು ₹5.60 ಲಕ್ಷ ಹಣವನ್ನು ವಿವಿಧ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದರು.
ಒಟ್ಟು ₹18,81,000 ಹಣವನ್ನು ಹೂಡಿಕೆ ಮಾಡಿಸಿಕೊಂಡ ಆರೋಪಿಗಳು ₹1 ಕೋಟಿ ಲಾಭ ನೀಡುವುದಾಗಿ ನಂಬಿಸಿದ್ದರು. ಆದರೆ ಯಾವುದೇ ಲಾಭ ನೀಡದೆ ವಂಚಿಸಿದ್ದು ವಂಚನೆ ತಿಳಿಯುತ್ತಲೇ ಸಂತ್ರಸ್ತರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
12-09-26 09:40 pm
HK News Staffer
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
ಬಿಜೆಪಿ ಅಧಿಕಾರಕ್ಕೆ ಬರಲು ನನ್ನ ಸ್ಥಾನ ಬಿಟ್ಟುಕೊಟ್ಟ...
12-09-26 05:56 pm
ಐಎಎಸ್ ತೇರ್ಗಡೆಯಾಗಿದ್ದ ಕೇರಳದ ಮೊದಲ ಬುಡಕಟ್ಟು ಮಹಿಳ...
12-09-26 05:53 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
14-09-26 06:02 pm
HK News Staffer
100 ವರ್ಷಗಳ ಬಳಿಕವೂ ಸ್ವಂತ ಸೂರಿಗಾಗಿ ಕರಾವಳಿಯಲ್ಲಿ...
14-09-26 05:00 pm
Konkan Catholic Credit Society Inaugurated in...
14-09-26 04:18 pm
Konkan Catholic Credit Society Mangalore: ಹಣಕ...
13-09-26 10:11 pm
ಕುತ್ತಾರು ರಾಜರಾಜೇಶ್ವರಿ ಸಿದ್ಧಿವಿನಾಯಕ ಕ್ಷೇತ್ರದಲ್...
13-09-26 08:10 pm
12-09-26 07:41 pm
HK News Staffer
ಕ್ರಿಪ್ಟೊ ಕರೆನ್ಸಿ ಹೆಸ್ರಲ್ಲಿ ಡಾಕ್ಟರ್ ಗೆ ಮಹಿಳೆಯಿ...
11-09-26 06:38 pm
ಜಾಮೀನು ಪಡೆಯಲು ನಕಲಿ ಆಧಾರ್ ಕಾರ್ಡ್ ಹಾಜರು ; ಉಡು...
11-09-26 01:09 pm
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm