ಬ್ರೇಕಿಂಗ್ ನ್ಯೂಸ್
14-05-26 01:41 pm HK News Staffer ಕ್ರೈಂ
ಉಳ್ಳಾಲ, ಮೇ 14: ಉಳ್ಳಾಲ ಬೈಲ್ ಮೂಲದ ಮಹಿಳೆಯೊಬ್ಬರ ದಾಖಲಾತಿಗಳನ್ನು ದುರುಪಯೋಗಪಡಿಸಿ ಬೇರೊಬ್ಬ ಮಹಿಳೆ ನಕಲಿ ಪಾಸ್ಪೋರ್ಟ್ ಪಡೆದು ವಿದೇಶಕ್ಕೆ ತೆರಳಿದ ಘಟನೆ ನಡೆದಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಾಗಿದೆ.
ಮಂಗಳೂರು ನಗರದ ಪೊಲೀಸ್ ನಿರೀಕ್ಷಕ ಗೋಪಾಲಕೃಷ್ಣ ಭಟ್ ಬಿ. ಅವರ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಯಶೋಧ ಕೇಶವ ಎಂಬವರ ಹೆಸರಿನಲ್ಲಿ ಅನ್ಯ ಮಹಿಳೆ ಪಾಸ್ಪೋರ್ಟ್ ಪಡೆದು ವಿದೇಶ ಪ್ರಯಾಣ ಮಾಡಿರುವ ಕುರಿತು ಮೇ 8ರಂದು ಪೊಲೀಸರಿಗೆ ಖಚಿತ ಮಾಹಿತಿ ದೊರಕಿತ್ತು.
ಪಾಸ್ಪೋರ್ಟ್ ಅಪ್ಲಿಕೇಶನ್ ಸಂಖ್ಯೆ BNX067061521924 ಪರಿಶೀಲಿಸಿದ ವೇಳೆ ಅರ್ಜಿಯಲ್ಲಿ ನಮೂದಿಸಿದ್ದ ಹೆಸರು, ವಿಳಾಸ ಹಾಗೂ ಭಾವಚಿತ್ರದಲ್ಲಿ ವ್ಯತ್ಯಾಸ ಕಂಡುಬಂದಿದೆ. ತನಿಖೆಯಲ್ಲಿ ಪಾಸ್ಪೋರ್ಟ್ನಲ್ಲಿ ಬಳಸಿದ್ದ ಭಾವಚಿತ್ರವು ಪ್ರೀತಾ ಡಿ’ಸೋಜಾ ಎಂಬವರದ್ದು ಎಂದು ತಿಳಿದುಬಂದಿದೆ. ಪಾಸ್ಪೋರ್ಟ್ ಸೇವಾ ಪೋರ್ಟಲ್ ದಾಖಲೆಗಳ ಪ್ರಕಾರ, ಅರ್ಜಿಯಲ್ಲಿ “ಯಶೋಧ ಕೇಶವ “ ಎಂದು ಕೈಬರಹದಲ್ಲಿ ನಮೂದಿಸಿ, ಅದರೊಂದಿಗೆ ಪ್ರೀತಾ ಡಿ’ಸೋಜಾ ಅವರ ಭಾವಚಿತ್ರ ಅಳವಡಿಸಲಾಗಿತ್ತು. ಯಶೋಧ ಎಂಬ ಹೆಸರಿನ ಸಹಿಯನ್ನೂ ಪ್ರೀತಾ ಡಿ’ಸೋಜ ಅವರೇ ಮಾಡಿರುವುದು ಪತ್ತೆಯಾಗಿದೆ.
ಇನ್ನಷ್ಟು ಪರಿಶೀಲನೆ ನಡೆಸಿದಾಗ, ಪ್ರೀತಾ ಡಿ’ಸೋಜಾ ಅವರು ಯಶೋಧ ಕೇಶವ ಅವರ ದಾಖಲೆಗಳಲ್ಲಿದ್ದ ವಿಳಾಸವನ್ನು ಬಳಸಿ ತಪ್ಪು ಮಾಹಿತಿ ನೀಡಿ ಅಕ್ರಮವಾಗಿ ಪಾಸ್ಪೋರ್ಟ್ ಪಡೆದು, 2025ರ ಮಾರ್ಚ್ 17ರಂದು ಮುಂಬೈ ವಿಮಾನ ನಿಲ್ದಾಣದ ಮೂಲಕ ವಿದೇಶಕ್ಕೆ ತೆರಳಿರುವುದು ತಿಳಿದುಬಂದಿದೆ.
ಅಕ್ರಮಕ್ಕೆ ಉಳ್ಳಾಲ ನಿವಾಸಿ ಪ್ರೇಮ್ ಡಿ’ಸೋಜಾ ಸಹಕಾರ ನೀಡಿದ್ದಾನೆ ಎನ್ನಲಾಗಿದ್ದು, ಪ್ರೀತಾ ಡಿ’ಸೋಜಾ ಅವರನ್ನು ಇಸ್ರೇಲ್ಗೆ ಕಳುಹಿಸುವ ಉದ್ದೇಶದಿಂದ ಯಶೋಧ ಕೇಶವ ಎಂಬವರ ದಾಖಲಾತಿಗಳನ್ನು ಬಳಸಿ ಪಾಸ್ಪೋರ್ಟ್ ಸಿದ್ಧಪಡಿಸಿದ್ದಾನೆ ಎಂದು ಆರೋಪಿಸಲಾಗಿದೆ. ಹಾಗೆಯೇ, ಯಶೋಧ ಕೇಶವ ಅವರು ತಮ್ಮ ದಾಖಲಾತಿಗಳನ್ನು ಪ್ರೀತಾ ಡಿ’ಸೋಜಾ ಅವರಿಗೆ ನೀಡಿ ನಕಲಿ ಪಾಸ್ಪೋರ್ಟ್ ಪಡೆಯಲು ಸಹಕರಿಸಿರುವ ಆರೋಪವೂ ಕೇಳಿಬಂದಿದೆ. ಪ್ರಕರಣದಲ್ಲಿ ಪ್ರೀತಾ ಡಿ’ಸೋಜಾ, ಪ್ರೇಮ್ ಡಿ’ಸೋಜಾ ಹಾಗೂ ಯಶೋಧ ಕೇಶವ ಸೇರಿದಂತೆ ಇತರರ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
14-05-26 10:19 am
HK News Staffer
ಬಿಜೆಪಿ ಸರ್ಕಾರ ನಿಷೇಧಿಸಿದ್ದ ಹಿಜಾಬ್ ನಿಷೇಧ ಹಿಂಪಡೆ...
13-05-26 10:18 pm
3 ಸಾವಿರ ರೂ. ಬಿಲ್ ಬಾಕಿ; 8 ತಿಂಗಳಿಂದ ಕತ್ತಲಲ್ಲಿ...
12-05-26 02:26 pm
ಶೃಂಗೇರಿ ಕ್ಷೇತ್ರದ ಅಂಚೆ ಮತ ಗೊಂದಲ; ಕಾಂಗ್ರೆಸಿನ ರಾ...
11-05-26 09:36 pm
D Sudhakar Death: ಚಿತ್ರದುರ್ಗದ ಜನಾನುರಾಗಿ ಶಾಸಕ,...
10-05-26 01:04 pm
14-05-26 12:36 pm
HK News Staffer
ಜ್ಯೋತಿಷಿಗೆ ಕೂಡದ ಜಾತಕ ; ಟೀಕೆಗಳ ಸುಳಿಯಲ್ಲಿ ವಿಜಯ್...
13-05-26 06:42 pm
ಅಗ್ನಿ ಪರೀಕ್ಷೆಯಲ್ಲಿ ಗೆದ್ದ ವಿಜಯ್; ನಿರೀಕ್ಷೆಗೂ ಮ...
13-05-26 02:26 pm
ಎಐಎಡಿಎಂಕೆ ಪಕ್ಷವೇ ಇಬ್ಭಾಗ ; 30 ಶಾಸಕರ ಬಣ ವಿಜಯ್ ಸ...
12-05-26 08:15 pm
ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ; ಮೇ 3ರಂದು ನಡೆದಿದ...
12-05-26 08:01 pm
13-05-26 11:02 pm
HK News Desk
Gruha Lakshmi Mangalore: ಸತ್ತವರ ಖಾತೆಗೂ ಗೃಹಲಕ್...
13-05-26 04:04 pm
NEET ಪರೀಕ್ಷೆ ರದ್ದು ; 22.5 ಲಕ್ಷ ವಿದ್ಯಾರ್ಥಿಗಳ ಭ...
12-05-26 06:26 pm
ಇಸ್ರೇಲ್ಗೆ ತೆರಳಲು ಸಿದ್ಧತೆಯಲ್ಲಿದ್ದ ಉಳ್ಳಾಲದ ವ್ಯ...
12-05-26 12:05 am
ಕುತ್ತಾರಿನಲ್ಲಿ ಕೊರಗಜ್ಜ ಸರ್ಕಲ್ ನಿರ್ಮಾಣ ; ಯಾರೋ ಹ...
09-05-26 11:51 pm
14-05-26 01:41 pm
HK News Staffer
ತುಮಕೂರಿನ ಮದರಸಾದಲ್ಲಿ ಸಿಬ್ಬಂದಿಗಳಿಂದ ಮಕ್ಕಳ ಮೇಲೆ...
14-05-26 10:49 am
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; 30 ಸಾವಿರದಿಂದ 28...
13-05-26 09:25 pm
ಹಾಸನದಲ್ಲಿ ಜಿಮ್ ಕಿರಿಕ್; ವರ್ಕೌಟ್ ವೇಳೆ ಭುಜ ಟಚ್ ಆ...
13-05-26 06:36 pm
ಚಾರ್ಜ್ಗೆ ಹಾಕಿದ್ದ ಎಲೆಕ್ಟ್ರಿಕಲ್ ಬೈಕ್ ಸ್ಫೋಟ; ಮ...
13-05-26 03:39 pm