ಬ್ರೇಕಿಂಗ್ ನ್ಯೂಸ್
04-06-26 09:41 pm HK News Staffer ಕ್ರೈಂ
ಮಂಗಳೂರು, ಜೂ.4 : ಅಕ್ರಮ ಗೋಹತ್ಯೆ ವಿಚಾರದಲ್ಲಿ ಹಿಂದು ಪರ ಹೋರಾಟಗಾರ ಪುನೀತ್ ಕೆರೆಹಳ್ಳಿ ಮತ್ತು ಮಂಗಳೂರಿನ ಫರಂಗಿಪೇಟೆಯ ವ್ಯಕ್ತಿಯೊಬ್ಬನ ನಡುವೆ ಪರಸ್ಪರ ಬೈಗುಳ, ಬೆದರಿಕೆಯ ವಾಗ್ವಾದ ನಡೆದಿದ್ದು ಇದರ ಆಡಿಯೋ ಸಂಭಾಷಣೆ ವೈರಲ್ ಆಗಿ ಜಾಲತಾಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪುನೀತ್ ಕೆರೆಹಳ್ಳಿ ಹಾಗೂ ಪರಂಗಿಪೇಟೆ ಮೂಲದ ಮುಸ್ಲಿಂ ಯುವಕನ ನಡುವೆ ತೀವ್ರ ವಾಗ್ವಾದ ನಡೆದಿದ್ದು ಇಬ್ಬರೂ ಪರಸ್ಪರ ಸವಾಲು ಹಾಕುತ್ತಾ ಪ್ರಚೋದನಾತ್ಮಕ ಹಾಗೂ ಬೆದರಿಕೆ ಮಾತುಗಳನ್ನು ಆಡಿದ್ದಾರೆ.
ಆಡಿಯೋದಲ್ಲಿ ಫರಂಗಿಪೇಟೆಯ ವ್ಯಕ್ತಿ, "50 ಲಕ್ಷ ರೂಪಾಯಿಗೆ ನಿನ್ನ ಮರ್ಡರ್ ಮಾಡ್ತೀನಿ", "ನಿನಗೆ ತುಂಬಾ ದಿನ ಆಯಸ್ಸಿಲ್ಲ", "ಬೆಂಗಳೂರಿನಲ್ಲೇ ನಿನ್ನನ್ನು ಕೊಲೆ ಮಾಡುತ್ತೇನೆ", "ಓಪನ್ ಚಾಲೆಂಜ್ ಮಾಡ್ತೀನಿ" ಎಂದು ಪುನೀತ್ ಕೆರೆಹಳ್ಳಿಗೆ ಬೆದರಿಕೆ ಹಾಕಿದ್ದಾನೆ. ಅಲ್ಲದೆ, "ನಿನ್ನನ್ನು ಯಾರೂ ಗುರುತಿಸಲಾಗದ ರೀತಿಯಲ್ಲಿ ಕೊಲೆ ಮಾಡಿ ಮುಗಿಸ್ತೀವಿ" ಎಂಬ ಗಂಭೀರ ಬೆದರಿಕೆಯನ್ನೂ ಹಾಕಿರುವುದು ಆಡಿಯೋದಲ್ಲಿದೆ.
ಇದಕ್ಕೆ ಪ್ರತಿಕ್ರಿಯಿಸಿದ ಪುನೀತ್, "ಎಷ್ಟು ಲಕ್ಷಕ್ಕೆ ಬೇಕಾದರೂ ಕೊಲೆ ಮಾಡು", "ಗಂಡಸಾಗಿದ್ರೆ ಬೆಂಗಳೂರಿಗೆ ಬಾ", "ನಿಮ್ಮ ತಾಕತ್ತು ಸೋಶಿಯಲ್ ಮೀಡಿಯಾ ಮತ್ತು ಮೊಬೈಲ್ನಲ್ಲಿ ಬೇಡ" ಎಂದು ಸವಾಲು ಹಾಕಿರುವುದು ಆಡಿಯೋದಲ್ಲಿ ಇದೆ. ಸಂಭಾಷಣೆಯ ವೇಳೆ ಧಾರ್ಮಿಕ ಭಾವನೆಗಳಿಗೆ ಸಂಬಂಧಿಸಿದ ಉಲ್ಲೇಖಗಳೂ ಕೇಳಿಬಂದಿದ್ದು, " ಮುಸ್ಲಿಮರ ಜೊತೆ ಆಟವಾಡಿದ್ದೀಯಾ? ನಿಂಗೆ ಬೀಫ್ ಸುಕ್ಕ ಬೇಕಾ? ಎಂಬ ಪ್ರಶ್ನೆಗೆ "ಹಂದಿ ಕಬಾಬ್ ಮಾಡಿಕೊಡ್ತೀನಿ ತಿನ್ನುತ್ತೀಯಾ", "ಹಂದಿ ಪಾರ್ಸೆಲ್ ಕಳಿಸ್ತೀನಿ ಬೇಕಾ? ಎಂದು ಇಬ್ಬರ ಪ್ರಚೋದನಾತ್ಮಕ ಮಾತುಗಳು ವಿವಾದಕ್ಕೆ ಕಾರಣವಾಗಿವೆ.
ಮಂಗಳೂರಿಗೆ ಬಂದು ಒಂದೇ ಒಂದು ದನ ಸಾಗಿಸುವ ಗಾಡಿ ಮುಟ್ಟಿ ನೋಡು ಎಂದು ಹೇಳಿದ್ದಕ್ಕೆ, ಹೇಯ್, ಕೇರಳದ ಲಾಡ್ಜ್ನಲ್ಲಿ ಕುಳಿತು ಮಾತನಾಡಬೇಡ, ಮುಂದೆ ಬಾ, ತಾಕತ್ತಿದ್ದರೆ ಎದುರಿಗೆ ಬಾ" ಎಂಬ ನೇರಾನೇರ ಸವಾಲುಗಳು ಆಡಿಯೋದಲ್ಲಿ ಕೇಳಿಬಂದಿವೆ.
ಇತ್ತೀಚೆಗೆ ಪುನೀತ್ ಕೆರೆಹಳ್ಳಿ ಹಾಗೂ ಕಾರ್ಯಕರ್ತರು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಾಸ್ತಿ ಎಂಬಲ್ಲಿ ಅಕ್ರಮ ಗೋಹತ್ಯೆ ನಡೆಯುತ್ತಿದ್ದ ಕೇಂದ್ರವೊಂದನ್ನು ಪತ್ತೆಹಚ್ಚಿ ದಾಳಿ ಮಾಡಿದ್ದರು. ಇದರ ಬಳಿಕ ಪುನೀತ್ ಗೆ ನಿರಂತ ಬೆದರಿಕೆ ಕರೆಗಳು ಬರುತ್ತಿವೆ ಎನ್ನಲಾಗಿದೆ. ಪುನೀತ್ ವಿರುದ್ಧ ಕೊಲೆ ಸಂಚು ರೂಪಿಸಲಾಗುತ್ತಿದೆ ಎಂಬ ಆರೋಪಗಳೂ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಯಾಗುತ್ತಿವೆ.
26-06-26 08:30 pm
HK News Staffer
ಬಿಡದಿಯಲ್ಲಿ ರೈತರ ವಿರುದ್ಧವಾಗಿ ಟೌನ್ಶಿಪ್ ಕಟ್ಟುವ...
26-06-26 05:10 pm
ಇಷ್ಟೆಲ್ಲಾ ಅಲ್ಲೋಲ ಕಲ್ಲೋಲಕ್ಕೆ ಶೋಭಾ ಕರಂದ್ಲಾಜೆ ನೇ...
25-06-26 09:10 pm
ಗೃಹಲಕ್ಷ್ಮಿ ಯೋಜನೆಯಲ್ಲಿ ಭಾರೀ ಕಳ್ಳಾಟ ! 19 ಸಾವಿರ...
24-06-26 05:55 pm
ಅಡ್ಡ ಮತದಾನ ; ರಾಜ್ಯ ನಾಯಕತ್ವದ ನಿರ್ಲಕ್ಷ್ಯವೇ ಕಾರಣ...
23-06-26 05:58 pm
25-06-26 12:13 pm
HK News Staffer
ಕೂಲ್ ಸಿಟಿ ಯುರೋಪಿನಲ್ಲೀಗ ಬಿಸಿಲ ಹೊಡೆತ ; ಫ್ರಾನ್ಸ್...
24-06-26 01:51 pm
ಮಾಹಿತಿ ಹಕ್ಕು ನಿಯಮಗಳಿಗೆ ಮಹಾರಾಷ್ಟ್ರ ಸರ್ಕಾರ ತಿದ್...
23-06-26 10:47 pm
ಟಿಎಂಸಿಯಲ್ಲಿ ರಾಜಕೀಯ ಭೂಕಂಪ ; ಮಮತಾ ಬ್ಯಾನರ್ಜಿ ಅಧ...
23-06-26 12:21 pm
ಕತಾರ್ ಕೈಗಾರಿಕಾ ಪ್ರದೇಶದಲ್ಲಿ ಭಾರೀ ಸ್ಫೋಟ ; 54 ಜನ...
22-06-26 12:55 pm
26-06-26 09:42 pm
HK News Staffer
ಸಾಂಪ್ರದಾಯಿಕ ಕನ್ನಡ ಎಂಎ ಪದವಿಗೆ ಆಧುನಿಕ ಟಚ್; ಸಂತ...
26-06-26 08:33 pm
ಡಿಕೆಶಿ ಜೊತೆ ಯಾವುದೇ ವ್ಯಾವಹಾರಿಕ ಸಂಬಂಧವಿಲ್ಲ, ಅಪಪ...
26-06-26 02:14 pm
ಮಂಗಳೂರು, ಮೈಸೂರು ಸೇರಿ ರಾಜ್ಯದ 10 ನಗರಗಳಿಗೆ ಇಲೆಕ್...
25-06-26 10:56 pm
Mangalore Drugs, Police: ಒಂದು ವರ್ಷದಲ್ಲಿ 400 ಡ...
25-06-26 10:48 pm
26-06-26 07:35 pm
HK News Staffer
ಕುಳಾಯಿಗುಡ್ಡೆಯ ಮನೆ ಮೇಲೆ ಸಿಸಿಬಿ ದಾಳಿ, 2.10 ಲಕ್ಷ...
26-06-26 04:26 pm
ಕ್ರಿಪ್ಟೊ ಕರೆನ್ಸಿ ಬಗ್ಗೆ ವಿಚಾರಿಸಿದಕ್ಕೆ ₹17.64 ಲ...
25-06-26 09:40 pm
ಮಂಡ್ಯದಲ್ಲಿ ಸೆಲ್ಫಿ ಹುಚ್ಚಿಗೆ ಐವರ ಬಲಿ ; ಕಾವೇರಿ ನ...
25-06-26 01:00 pm
ಹಸೆಮಣೆ ಏರಬೇಕಿದ್ದವಳೇ ಭಾವಿ ಪತಿಯನ್ನು ಫೋಟೊ ಶೂಟ್ ನ...
24-06-26 09:28 pm