ಉಳ್ಳಾಲದ ಹರೇಕಳದಿಂದ ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಮಂಗಳೂರಿನ ತಣ್ಣೀರುಬಾವಿ ಬೀಚಿನಲ್ಲಿ ಪತ್ತೆ ; ಆತ್ಮಹತ್ಯೆ ಶಂಕೆ

02-07-26 10:09 pm       HK News Staffer   ಕ್ರೈಂ

ಮಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹರೇಕಳದಿಂದ‌ ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೋರ್ವರ ಮೃತದೇಹ ಮಂಗಳೂರಿನ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಗುರುವಾರ ಪತ್ತೆಯಾಗಿದೆ.

ಉಳ್ಳಾಲ, ಜು.02: ಮಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಹರೇಕಳದಿಂದ‌ ನಾಪತ್ತೆಯಾಗಿದ್ದ ವಿವಾಹಿತ ವ್ಯಕ್ತಿಯೋರ್ವರ ಮೃತದೇಹ ಮಂಗಳೂರಿನ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಗುರುವಾರ ಪತ್ತೆಯಾಗಿದೆ. 

ಉಳ್ಳಾಲ ತಾಲೂಕಿನ ಹರೇಕಳ ಗ್ರಾಮದ ಕಿಸಾನ್ ನಗರದ ನಿವಾಸಿ ಮಹಮ್ಮದ್ ಅಶ್ರಫ್ (40) ಮೃತ ವ್ಯಕ್ತಿ. ಅಶ್ರಫ್ ಮಂಗಳವಾರ ಬೆಳಗ್ಗೆ ಮಂಗಳೂರಿಗೆ ಹೋಗಿ ಬರುತ್ತೇನೆಂದು ಹೇಳಿ ಮನೆಯಿಂದ ತೆರಳಿದ್ದರು. ಬಳಿಕ ಅಶ್ರಫ್ ತನ್ನ ಎರಡೂ ಮೊಬೈಲ್ ಗಳನ್ನ ಆಫ್ ಮಾಡಿಟ್ಟು ಸಂಪರ್ಕಕ್ಕೆ ಸಿಗದೆ ಇದ್ದು ಮನೆ ಮಂದಿ ಗಾಬರಿಗೊಂಡಿದ್ದರು. ಅಶ್ರಫ್ ಅವರ ತಮ್ಮ ಮಹಮ್ಮದ್ ಆಸೀಫ್ ಕೊಣಾಜೆ ಠಾಣೆಯಲ್ಲಿ ಅಶ್ರಫ್ ನಾಪತ್ತೆಯಾಗಿರುವ ಕುರಿತು ದೂರು ದಾಖಲಿಸಿದ್ದರು.
ಗುರುವಾರ ಬೆಳಗ್ಗೆ ಮಂಗಳೂರಿನ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಶವ ಪತ್ತೆಯಾಗಿದ್ದು, ಪೊಲೀಸರು ಮಹಮ್ಮದ್ ಅಶ್ರಪ್ ಅವರ ಶವವೆಂದು ಗುರುತಿಸಿದ್ದಾರೆ.

ಮೇಸ್ತ್ರಿ ವೃತ್ತಿ ನಡೆಸುತ್ತಿದ್ದ ಅಶ್ರಫ್ ಅವರಿಗೆ ಮದುವೆಯಾಗಿ ಅನೇಕ‌ ವರ್ಷಗಳಾದರೂ ಮಕ್ಕಳಿರಲಿಲ್ಲವಂತೆ.‌ ಅವರು ತಾಯಿ, ಪತ್ನಿ, ಇಬ್ಬರು ಸಹೋದರರು ಹಾಗೂ ಸಹೋದರಿಯರನ್ನ ಅಗಲಿದ್ದಾರೆ.