ಬ್ರೇಕಿಂಗ್ ನ್ಯೂಸ್
23-03-21 12:39 pm Mangalore Correspondent ಕ್ರೈಂ
ಮಂಗಳೂರು, ಮಾ.23: ಮನೆ ಬಾಡಿಗೆ ಕೇಳುವ ನೆಪದಲ್ಲಿ ಬಂದಿದ್ದ ವ್ಯಕ್ತಿಯೊಬ್ಬ ಮನೆಯಲ್ಲಿದ್ದ ಚಿನ್ನದ ಸರ ಎಗರಿಸಿದ ಪ್ರಕರಣ ನಡೆದಿದ್ದು, ಆರೋಪಿಯನ್ನು ಕೋಣಾಜೆ ಪೊಲೀಸರು ಬಂಧಿಸಿದ್ದಾರೆ.
ಮುಜೀಬ್ ರೆಹಮಾನ್ (30) ಬಂಧಿತ ಆರೋಪಿ. ಮೂಲತಃ ಮಂಜೇಶ್ವರದ ಉಪ್ಪಳ ನಿವಾಸಿಯಾಗಿರುವ ಈತ ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ವಾಸವಿದ್ದ. ಮಾ.16ರಂದು ಬೆಳ್ಮ ಗ್ರಾಮದ ನಿತ್ಯಾನಂದ ನಗರದಲ್ಲಿ ಮನೆ ಬಾಡಿಗೆ ಕೇಳುವ ನೆಪದಲ್ಲಿ ಮೂರು ಮನೆಗೆ ಹೋಗಿದ್ದಾನೆ. ಅಜ್ಜಿ ಮಾತ್ರ ಇದ್ದ ಮನೆಗೆ ಬಂದಿದ್ದ ಯುವಕ ಮುಜೀಬ್, ಮನೆ ಬಾಡಿಗೆ ಕೊಡುತ್ತೀರಾ ಎಂದು ಕೇಳಿದ್ದಾನೆ. ಇಲ್ಲಪ್ಪಾ ನಾವೇ ಬಾಡಿಗೆ ಮನೆಯಲ್ಲಿದ್ದೇವೆ. ನಾವು ಖಾಲಿ ಮಾಡಿದಾಗ ಹೇಳುತ್ತೀವಿ ಎಂದಿದ್ದಾರೆ. ಅಲ್ಲದೆ, ಆತನ ನಂಬರ್ ಬರೆದಿಡುವಂತೆ ಹೇಳಿದ್ದಾರೆ. ಇದೇ ವೇಳೆ, ನಾನೊಮ್ಮೆ ಮನೆ ಒಳಗೆ ನೋಡುತ್ತೇನೆ ಎಂದು ಒಳಗೆ ಬಂದು ಕೋಣೆ ಒಳಗೆಲ್ಲ ಸುತ್ತಾಡಿದ್ದಾನೆ.
ಇದೇ ವೇಳೆ, ಮನೆಯ ಒಳಗಿಟ್ಟಿದ್ದ ಬ್ಯಾಗಿನಲ್ಲಿದ್ದ ಎರಡು ಚಿನ್ನದ ಸರವನ್ನು ಕಳವು ಮಾಡಿದ್ದಾನೆ. ಬಳಿಕ ಅಜ್ಜಿಯಲ್ಲಿ ಮತ್ತೆ ಬರುತ್ತೇನೆ ಎಂದು ಹೇಳಿ ಅಲ್ಲಿಂದ ಕಾಲ್ಕಿತ್ತಿದ್ದ. ಮನೆಗೆ ಮರಳಿದ್ದ ಸೋದರಿಯರು, ತಪಾಸಣೆ ನಡೆಸಿದಾಗ ಮನೆಯಲ್ಲಿದ್ದ ಚಿನ್ನದ ಸರ ನಾಪತ್ತೆಯಾಗಿರುವುದು ಕಂಡುಬಂದಿದೆ. ಕೋಣಾಜೆ ಠಾಣೆಗೆ ವೀಣಾ ಎಂಬವರು ದೂರು ನೀಡಿದ್ದರು.
ಪೊಲೀಸರು ಸಿಸಿಟಿವಿ ಆಧರಿಸಿ ತನಿಖೆ ನಡೆಸಿದಾಗ, ಯುವಕನೊಬ್ಬ ಅಲ್ಲಿನ ಮೂರ್ನಾಲ್ಕು ಮನೆಗಳಿಗೆ ತೆರಳಿದ್ದು ಕಂಡುಬಂದಿದೆ. ಅಲ್ಲದೆ, ಮಾಡೂರಿನಲ್ಲೂ ಇದೇ ರೀತಿ ಕೆಲವು ಮನೆಗಳಿಗೆ ತೆರಳಿದ್ದು ಕಂಡುಬಂದಿತ್ತು. ಚಹರೆ ಆಧರಿಸಿ, ಆತನನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಕಳವು ಕೃತ್ಯ ಬೆಳಕಿಗೆ ಬಂದಿದೆ. ಮೂರುವರೆ ಪವನ್ ತೂಕದ ಕರಿಮಣಿ ಸರ ಮತ್ತು ಒಂದು ಪವನ್ ತೂಕದ ಸರ ಕಳವಾಗಿತ್ತು. ಅದನ್ನು ಪೊಲೀಸರು ಆರೋಪಿಯಿಂದ ವಶಕ್ಕೆ ಪಡೆದಿದ್ದಾರೆ. ಅಲ್ಲದೆ, ಆತನ ಬಳಿಯಿದ್ದ ಏಕ್ಟಿವಾ ಹೊಂಡಾ ವಶಕ್ಕೆ ಪಡೆದಿದ್ದಾರೆ.
police arrest thief who flee with gold from a house in Ullal at Mangalore. The arrested has been identified as Majib.
13-05-25 09:50 pm
HK News Desk
Davangere Accident, police constable death: ಲ...
13-05-25 09:37 pm
ಅರ್ಧದಲ್ಲಿ ಕದನ ನಿಲ್ಲಿಸಿದ್ದು ಯಾಕೆ? ಇಷ್ಟಕ್ಕೆ ನಮ್...
13-05-25 01:14 pm
Dr Subbanna Ayyappan Dead, Mandya: ಪದ್ಮಶ್ರೀ ಪ...
11-05-25 01:21 pm
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
13-05-25 08:47 pm
HK News Desk
ಪಾಕ್ ಅಣ್ವಸ್ತ್ರ ಗೋದಾಮಿನಲ್ಲಿ ವಿಕಿರಣ ಸೋರಿಕೆ ; ಅಮ...
13-05-25 06:46 pm
ಪಂಜಾಬ್ನಲ್ಲಿ ವಿಷಪೂರಿತ ಮದ್ಯ ಸೇವಿಸಿ 17 ಮಂದಿ ಬಲಿ...
13-05-25 04:39 pm
ಪಾಕಿಸ್ತಾನದಲ್ಲಿ ಬೆನ್ನು ಬೆನ್ನಿಗೆ ಭೂಕಂಪನ ; ಪರಮಾಣ...
13-05-25 02:51 pm
ಮೋದಿ ಎಚ್ಚರಿಕೆ ಬೆನ್ನಲ್ಲೇ ಮತ್ತೆ ಡ್ರೋಣ್ ದಾಳಿ ; ಕ...
12-05-25 11:21 pm
13-05-25 10:33 pm
Mangalore Correspondent
ಹೆದ್ದಾರಿ ಬದಿಯಲ್ಲಿ ಕಸ ಎಸೆಯುವವರ ಮೇಲೆ ನಿಗಾ ವಹಿಸಿ...
13-05-25 07:33 pm
ಕರಾವಳಿಗೆ ಮತ್ತೊಂದು ಸುಸಜ್ಜಿತ ವಿಮಾನ ನಿಲ್ದಾಣ ; ಕಾ...
12-05-25 08:22 pm
Comedy Khiladigalu Rakesh Poojary Death: 'ಕಾಮ...
12-05-25 11:26 am
Mangalore, Pilikula, Dr Suryaprakash Shenoy:...
11-05-25 05:01 pm
13-05-25 07:55 pm
HK News Desk
Abdul Rauf Azhar; ಕಂದಹಾರ್ ವಿಮಾನ ಹೈಜಾಕ್ ಮಾಸ್ಟರ...
08-05-25 05:32 pm
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm