ಬ್ರೇಕಿಂಗ್ ನ್ಯೂಸ್
18-06-21 04:38 pm Headline Karnataka News Network ಕ್ರೈಂ
ಬೆಂಗಳೂರು, ಜೂನ್ 18: ಹನಿಟ್ರ್ಯಾಪ್ ಮಾಡಿ ಹಣ ಪೀಕಿಸೋಕೆ ಕೆಲವರು ಏನೆಲ್ಲ ಕಸರತ್ತು ಮಾಡುತ್ತಾರೆ ಅನ್ನುವುದನ್ನು ಪೊಲೀಸರು ಕೂಡ ಊಹಿಸಿಕೊಳ್ಳಲು ಸಾಧ್ಯವಾಗಲ್ಲ. ಇಲ್ಲೊಂದು ಯುವ ಜೋಡಿ, ಫೇಸ್ಬುಕ್ ನಲ್ಲಿ ಫ್ರೆಂಡ್ ರೀತಿ ನಾಟಕವಾಡಿ ಬಳಿಕ ಅವರನ್ನೇ ತಮ್ಮ ದಾಳಕ್ಕೆ ಬೀಳಿಸಿ ಬೋಳಿಸುವ ಕೆಲಸ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
ಯುವತಿಯೊಬ್ಬಳು ನೀಡಿದ ದೂರು ಆಧರಿಸಿ, ಬೆನ್ನು ಬಿದ್ದ ಚಂದ್ರಾ ಲೇಔಟ್ ಠಾಣೆಯ ಪೊಲೀಸರು ಕಾವ್ಯ ಮತ್ತು ಕೃಷ್ಣ ಎಂಬ ಹರಾಮಿ ಯುವಜೋಡಿಯನ್ನು ಬಂಧಿಸಿದ್ದಾರೆ. ಕಾವ್ಯಾ ಫೇಸ್ಬುಕ್ ನಲ್ಲಿ ಆಕ್ಟಿವ್ ಆಗಿದ್ದು, ಸುಂದರಿ ಯುವತಿಯರಿಗೆ ಫ್ರೆಂಡ್ ರಿಕ್ವೆಸ್ಟ್ ಕಳಿಸಿ ಹೊಸತಾಗಿ ಪರಿಚಯ ಮಾಡಿಕೊಳ್ಳುತ್ತಿದ್ದಳು. ಬಳಿಕ ಪರಿಚಯ, ಸ್ನೇಹಕ್ಕೆ ತಿರುಗಿ ಮನೆಗೇ ಕರೆಯುತ್ತಾಳೆ. ಮನೆಗೆ ಕರೆಸಿ, ಮತ್ತು ಬರಿಸುವ ಜ್ಯೂಸ್ ಕೊಟ್ಟು ತನ್ನ ಗಂಡನಿಂದಲೇ ಕಿರಾತಕ ಕೆಲಸ ಮಾಡಿಸುತ್ತಾಳೆ.

ದೂರು ನೀಡಿದ್ದ ಯುವತಿಗೂ ಆರು ತಿಂಗಳ ಹಿಂದೆ ಫೇಸ್ಬುಕ್ ನಲ್ಲಿ ಕಾವ್ಯಾ ಪರಿಚಯ ಆಗಿತ್ತು. ಸ್ನೇಹ ಬೆಳೆಸಿ ಮನೆಗೆ ಬರುವಂತೆ ಕರೆದಿದ್ದು, ಅಲ್ಲಿ ತೆರಳಿದ್ದಾಗ ಜ್ಯೂಸ್ ಕುಡಿಸಿ ಮಂಪರಿನ ಸ್ಥಿತಿಗೆ ಹೋಗಿದ್ದಳು. ಏನಾಗುತ್ತಿದೆ ಅನ್ನುವ ಪರಿವೆ ಇಲ್ಲದಾಗ, ಆಕೆಯನ್ನು ವಿವಸ್ತ್ರ ಮಾಡಿ ಕಾವ್ಯಾಳ ಗಂಡ ಕೃಷ್ಣ ಮತ್ತು ಸಾಗರ್ ಎಂಬ ಮತ್ತೊಬ್ಬ ಯುವಕ ಜೊತೆಗೆ ನಿಂತು ಫೋಟೋ ತೆಗೆಸಿಕೊಂಡಿದ್ದಾರೆ. ಬಳಿಕ ಯುವತಿ ಬಳಿಯಿದ್ದ ಚಿನ್ನದ ಉಂಗುರ, ಸರ, ಎಟಿಎಂ ಕಾರ್ಡ್ ಅನ್ನು ಆರೋಪಿಗಳು ಕಸಿದಿದ್ದು ಫೋಟೋ ತೋರಿಸಿ ಬೆದರಿಸಿದ್ದಾರೆ. ಬಳಿಕ ಖಾಸಗಿ ಫೋಟೊ ಮತ್ತು ವಿಡಿಯೋವನ್ನು ಪೊಷಕರಿಗೆ ಕಳಿಸ್ತೀವಿ, ಫೇಸ್ಬುಕ್ ನಲ್ಲಿ ಹರಿಯಬಿಡುತ್ತೇವೆ ಎಂದು ಹೇಳಿಕ ಆರು ತಿಂಗಳಿಂದ 4 ಲಕ್ಷಕ್ಕೂ ಅಧಿಕ ಹಣ ವಸೂಲಿ ಮಾಡಿದ್ದಾರೆ.

ಕಳೆದ ಜನವರಿಯಲ್ಲಿ ಚಂದ್ರಾ ಲೇಔಟ್ ನಲ್ಲಿ ಘಟನೆ ನಡೆದಿತ್ತು. ಆನಂತರ ಬ್ಲಾಕ್ಮೇಲ್ ಮಾಡುತ್ತಾ ಯುವತಿಯಿಂದಲೇ ಯುವಜೋಡಿ ಸೇರಿ ಹಣ ಪೀಕಿಸಿದ್ದಾರೆ. ಕಳೆದ ಮೇ ತಿಂಗಳಲ್ಲಿ ಹಳೆ ವಿಡಿಯೋ ತೋರಿಸಿ ಯುವತಿ ಮೇಲೆ ಕೃಷ್ಣ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ದೂರಿನಲ್ಲಿ ತಿಳಿಸಿದ್ದಳು. ಪೊಲೀಸರು ಈಗ ಯುವಜೋಡಿ ಮತ್ತು ಅವರಿಗೆ ಸಹಾಯ ನೀಡಿದ್ದ ಸಾಗರ್ ನನ್ನು ಬಂಧಿಸಿದ್ದಾರೆ.
Bangalore Young Couple arrested for making Honey Trap big-time business. Their target is on Facebook users by making friendship and then blackmailing. The couple have been arrested by Chandra Layout police station.
04-11-25 04:38 pm
Bangalore Correspondent
ಸಚಿವ ಸತೀಶ್ ಜಾರಕಿಹೊಳಿ ದಿಢೀರ್ ದೆಹಲಿಗೆ ; ಕೆಪಿಸಿಸ...
03-11-25 05:17 pm
ಕಣ್ಣೂರಿನ ಪಯ್ಯಂಬಲಂ ಬೀಚ್ ನಲ್ಲಿ ಸಮುದ್ರಕ್ಕಿಳಿದ ಬೆ...
02-11-25 11:09 pm
ಆರೆಸ್ಸೆಸ್ನವರಷ್ಟು ಹೇಡಿಗಳು ಯಾರೂ ಇಲ್ಲ, ಅವರ್ಯಾಕೆ...
01-11-25 09:33 pm
ನಮ್ಮ ಕ್ಷೇತ್ರದಲ್ಲಿ ಪಥಸಂಚಲನ ಮಾಡೋದನ್ನು ಆರೆಸ್ಸೆಸ್...
31-10-25 08:10 pm
03-11-25 01:13 pm
HK News Desk
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
ಕೇರಳದಲ್ಲಿ ಮುಸ್ಲಿಮ್ ಮತ್ತು ಕ್ರಿಶ್ಚಿಯನ್ನರಿಗೆ ಒಬಿ...
02-11-25 05:13 pm
ಜೆಡ್ಡಾದಿಂದ ಹೈದರಾಬಾದ್ ಬರುತ್ತಿದ್ದ ವಿಮಾನದಲ್ಲಿ ಬ...
01-11-25 07:27 pm
ಭಾರತದಲ್ಲಿ ಸ್ವತಂತ್ರವಾಗಿದ್ದೇನೆ, ಮತ್ತೆ ಬಾಂಗ್ಲಾದೇ...
30-10-25 03:20 pm
04-11-25 10:51 pm
Mangalore Correspondent
Mangalore Police, Panambur Beach: ಗಂಡ - ಹೆಂಡತ...
04-11-25 08:37 pm
ಅಬಕಾರಿ ಇಲಾಖೆಯಲ್ಲಿ ವ್ಯಾಪಕ ಭ್ರಷ್ಟಾಚಾರ, ಹಣಕ್ಕಾಗಿ...
04-11-25 06:15 pm
ವ್ಯಾಟಿಕನ್ ಸಿಟಿಯ ಭಾರತದ ರಾಯಭಾರಿ ಆ್ಯಂಡ್ರಿಯಾ ಫಾನ್...
04-11-25 05:06 pm
ಧರ್ಮಸ್ಥಳ ಪ್ರಕರಣ ; ಎಸ್ಐಟಿ ತನಿಖಾ ಪ್ರಕ್ರಿಯೆಗೆ ಮಹ...
04-11-25 05:03 pm
04-11-25 02:11 pm
Mangalore Correspondent
ಟೋಪಿ ನೌಫಾಲ್ ಕೊಲೆಯಲ್ಲ, ರೈಲು ಡಿಕ್ಕಿ ಹೊಡೆದು ಸಾವು...
03-11-25 12:33 pm
ಶಬರಿಮಲೆ ಅಯ್ಯಪ್ಪ ದೇವಸ್ಥಾನದಲ್ಲಿ ಚಿನ್ನ ಕಳವು ಪ್ರಕ...
01-11-25 07:25 pm
Rowdy Topi Naufal Murder, Mangalore: ಮಂಗಳೂರಿನ...
01-11-25 03:31 pm
ವೃದ್ಧ ಮಹಿಳೆಗೆ ಡಿಜಿಟಲ್ ಅರೆಸ್ಟ್ ಬಲೆ ; ಐದು ಗಂಟೆಯ...
01-11-25 01:31 pm