ಬ್ರೇಕಿಂಗ್ ನ್ಯೂಸ್
19-06-21 02:12 pm Headline Karnataka News Network ಕ್ರೈಂ
ಮಂಡ್ಯ, ಜೂನ್ 19: ಮುಖ್ಯಮಂತ್ರಿ ಯಡ್ಡಿಯೂರಪ್ಪ ಅವರ ಪಿಎ ಅಂತ ಹೇಳಿಕೊಂಡು ಯುವಕನೊಬ್ಬ ಧರ್ಮಸ್ಥಳದ ಕೆಎಸ್ಆರ್ಟಿಸಿ ಚಾಲಕನಿಂದ ಹಣ ಪಡೆದು ವಂಚಿಸಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಧರ್ಮಸ್ಥಳ ಕೆಎಸ್ಸಾರ್ಟಿಸಿ ಡಿಪೋದಲ್ಲಿ ಬಸ್ ಚಾಲಕನಾಗಿರುವ, ಮಂಡ್ಯ ಜಿಲ್ಲೆಯ ಕೀಲಾರ ಗ್ರಾಮದ ಪುರುಷೋತ್ತಮ್ ಎಂಬಾತ ವಂಚನೆಗೊಳಗಾದ ವ್ಯಕ್ತಿ. ಧರ್ಮಸ್ಥಳ ಡಿಪೋದಲ್ಲಿ ಚಾಲಕನಾಗಿದ್ದ ವೇಳೆ ಶೈಲೇಶ್ ಎಂಬ ಯುವಕ ಪರಿಚಯವಾಗಿದ್ದ. ಧರ್ಮಸ್ಥಳದ ಹೋಟೆಲ್ ಒಂದರಲ್ಲಿ ಪರಿಚಯವಾಗಿದ್ದು ಸಿಎಂ ಯಡ್ಡಿಯೂರಪ್ಪ ನನಗೆ ತುಂಬಾ ಹತ್ತಿರದವರು ಅಂತ ತನ್ನ ಮೊಬೈಲಿನಲ್ಲಿ ಫೋಟೋ ತೋರಿಸಿ ನಂಬಿಸಿದ್ದಾನೆ. ಅಲ್ಲದೆ, ಯಡ್ಡಿಯೂರಪ್ಪ ಚುನಾವಣೆ ಸಂದರ್ಭ ಹಣ ಹಂಚಲು ನನಗೇ ಹಣ ಕೊಟ್ಟಿದ್ದರು ಅಂತ ಕಂತೆ ಕಂತೆ ನೋಟಿನ ಫೋಟೋವನ್ನೂ ತೋರಿಸಿ ಶೈಲೇಶ್ ನಂಬಿಕೆ ಹುಟ್ಟಿಸಿದ್ದಾನೆ. ಮುಖ್ಯಮಂತ್ರಿ ಬಳಿ ಹೇಳಿಸಿ ಏನು ಬೇಕಾದ್ರೂ ಕೆಲಸ ಮಾಡಿಸ್ತೀನಿ ಅಂತ ಹೇಳಿದ್ದಾನೆ.
ಇದನ್ನು ನಂಬಿದ ಚಾಲಕ ಪುರುಷೋತ್ತಮ್, ತನ್ನನ್ನು ಧರ್ಮಸ್ಥಳ ಡಿಪೋದಿಂದ ಮಂಡ್ಯಕ್ಕೆ ವರ್ಗಾವಣೆ ಮಾಡಿಸಲು ಹೇಳಿದ್ದಾನೆ. ನಿನ್ನ ಕೆಲಸ ಮಾಡಿಕೊಡುವುದಾಗಿ ಹೇಳಿದ ಶೈಲೇಶ್, ಅದಕ್ಕೆ ಅಧಿಕಾರಿಗಳಿಗೆ ಒಂದಿಷ್ಟು ಕೊಡಬೇಕಾಗುತ್ತೆ ಅಂತ ಹೇಳಿ ಹಣದ ಬೇಡಿಕೆ ಇಟ್ಟಿದ್ದಾನೆ. ಆತನ ಮಾತನ್ನು ನಂಬಿದ ಚಾಲಕ ಪುರುಷೋತ್ತಮ್, 98 ಸಾವಿರ ರೂ. ಹಣವನ್ನು ನೀಡಿದ್ದಾನೆ. ಆದರೆ, ಶೈಲೇಶ್ ಹಣ ಪಡೆದ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದಾನೆ.
ಹಣ ಕಳೆದುಕೊಂಡ ಚಾಲಕ ಪುರುಷೋತ್ತಮ್ ಈ ಬಗ್ಗೆ ಮಂಡ್ಯದಲ್ಲಿ ದೂರು ದಾಖಲಿಸಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದ್ದು ಆರೋಪಿಯ ಹುಡುಕಾಟ ನಡೆದಿದೆ.
Mandya Man poses himself as CM Yediyurappas PA cheats KSRTC Driver telling him that he would make his transfer from Dharmasthala Depo to Mandya and flees with Rs. 98,000. A case has been registered at the Mandya Police Station.
19-04-24 11:17 pm
HK NEWS
Actress Priya Savadi, Hubballi Neha Murder: ಅ...
19-04-24 07:58 pm
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 10:11 pm
Mangalore Correspondent
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm