ಉಡುಪಿಯಲ್ಲಿ ಮಗು ಅಪಹರಣ ; ಮಗು ಎತ್ತಿಕೊಂಡು ಬಸ್ ಹತ್ತಿದ ಆಗಂತುಕ 

11-07-21 07:35 pm       Udupi Correspondent   ಕ್ರೈಂ

ಉಡುಪಿಯಲ್ಲಿ ಹಾಡಹಗಲೇ ಎರಡು ವರ್ಷದ ಮಗುವನ್ನು ಆಗಂತಕನೊಬ್ಬ ಅಪಹರಿಸಿದ್ದಾನೆ.

ಉಡುಪಿ, ಜುಲೈ 11: ಉಡುಪಿಯಲ್ಲಿ ಹಾಡಹಗಲೇ ಎರಡು ವರ್ಷದ ಮಗುವನ್ನು ಆಗಂತಕನೊಬ್ಬ ಅಪಹರಿಸಿದ್ದಾನೆ. ಉಡುಪಿ ಪೇಟೆಯ ಕರಾವಳಿ ಜಂಕ್ಷನ್ ನಲ್ಲಿ ಇಂದು ಬೆಳಗ್ಗೆ ಘಟನೆ ನಡೆದಿದೆ. 

ಮಗುವನ್ನ ಅಪಹರಿಸಿ ಖಾಸಗಿ ಬಸ್ಸು ಹತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಉಡುಪಿ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸಿದ್ದಾರೆ. 

ಉಡುಪಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಬಾಗಲಕೋಟೆ ಮೂಲದ ದಂಪತಿಯ ಎರಡು ವರ್ಷದ ಗಂಡು ಮಗು ಅಪಹರಣಕ್ಕೊಳಗಾಗಿರುವುದು. ಕೆಲವು‌ ದಿನದ ಹಿಂದೆ ವ್ಯಕ್ತಿಯೊಬ್ಬ ಈ ದಂಪತಿಯನ್ನ ಪರಿಚಯ ಮಾಡಿಕೊಂಡಿದ್ದು ದಂಪತಿ ವಾಸವಿದ್ದ ಪಕ್ಕದಲ್ಲೇ ಆತನೂ ಮಲಗುತ್ತಿದ್ದ. 

ಇಂದು ಬೆಳಗ್ಗೆ ಮಗುವಿಗೆ ತಿಂಡಿ ಮಾಡಿಸಿ ಬರುತ್ತೇನೆ ಎಂದು ಹೇಳಿ ಕರೆದುಕೊಂಡು ಹೋಗಿದ್ದು ಅಪಹರಿಸಿಕೊಂಡು ಹೋಗಿದ್ದಾನೆ.‌ ಮಗುವನ್ನ ಎತ್ತಿಕೊಂಡು ಬಸ್ಸು ಹತ್ತಿ ಪರಾರಿಯಾಗಿದ್ದು ಕರಾವಳಿ ಜಂಕ್ಷನ್ನಲ್ಲಿ ದಾಖಲಾಗಿದೆ.

A 2.5-year-old child of Arun and Bharathi, a Bagalkot based couple, has gone missing since the morning of Sunday, July 11. The couple were living in a shed near Karavali bypass here. A person who is known to the couple had taken the child in the morning for breakfast. Both have not returned since then. As per the CCTV footage available, the concerned person boarded a bus heading towards Santhekatte from Udupi at around 9.22 am from Karavali Junction bus stop with the child.