ಬ್ರೇಕಿಂಗ್ ನ್ಯೂಸ್
28-07-21 08:26 pm Mangaluru correspondent ಕ್ರೈಂ
ಮಂಗಳೂರು, ಜುಲೈ 28: ಆಟೋ ರಿಕ್ಷಾ ಚಾಲಕನಿಂದ ಕಿರುಕುಳ ಆಗ್ತಿದೆ ಎಂದು ಅಪ್ರಾಪ್ತ ಬಾಲಕಿಯೊಬ್ಬಳು ತಾಯಿ ಜೊತೆಗೆ ಪೊಲೀಸರಿಗೆ ದೂರು ನೀಡಲು ಬಂದಿದ್ದಳು. ದೂರು ಪಡೆದ ಪೊಲೀಸ್ ಪೇದೆ ಆಟೋ ಚಾಲಕನನ್ನು ಗದರಿಸಿ, ಹುಡುಗಿಯ ನಂಬರ್ ಪಡೆದಿದ್ದ. ಆನಂತರ ಕಿರುಕುಳಕ್ಕೆ ಒಳಗಾದ ಹುಡುಗಿಯ ಜೊತೆ ತಾನೇ ಚಾಟ್ ಮಾಡಲು ಆರಂಭಿಸಿದ್ದ. ನ್ಯಾಯ ಕೇಳಿಕೊಂಡು ಬಂದ ಹುಡುಗಿಗೆ ತಾನೇ ಕಿರುಕುಳ ಕೊಡಲು ಆರಂಭಿಸಿದ್ದ.
ಸಿನಿಮಾಗಳಲ್ಲಿ ಸ್ಲಂ ಹುಡುಗಿಯರನ್ನು ಯಾಮಾರಿಸಿದ ಆಟೋ ಚಾಲಕನನ್ನು ದೂರಕ್ಕೆ ತಳ್ಳಿ ಪೊಲೀಸರೇ ಕಾಮತೃಷೆ ತೀರಿಸಿಕೊಳ್ಳುವ ಕತೆಯಿರುತ್ತೆ. ಆದರೆ, ಈಗ ನಾವು ಹೇಳ್ತಿರೋದು ಯಾವ ಸಿನಿಮಾ ಕತೆಯೂ ಅಲ್ಲ. ಬುದ್ಧಿವಂತರು ಎಂದು ಕರೆಸಿಕೊಳ್ಳುವ ಮಂಗಳೂರು ನಗರದಲ್ಲೇ ಆಗಿರುವ ರಿಯಲ್ ಕತೆ.
ಅಪ್ರಾಪ್ತ ಹುಡುಗಿ ಕಳೆದ ಜನವರಿಯಲ್ಲಿ ಆಟೋ ಚಾಲಕನ ಕಿರುಕುಳ ತಾಳಲಾರದೆ ದೂರು ಹಿಡಿದು ಬಂದಿದ್ದಳು. ಈ ಬಗ್ಗೆ ಆಟೋ ಚಾಲಕನನ್ನು ಗದರಿಸುತ್ತೇನೆಂದು ಹುಡುಗಿಯ ನಂಬರ್ ಪಡೆದಿದ್ದ ಪೊಲೀಸಪ್ಪ ತಾನು ಹೇಳಿದ ಕೆಲಸವನ್ನು ಮಾಡಿದ್ದಾನೆ. ಆದರೆ, ಸದಾ ಕಳ್ಳರು, ದರೋಡೆಕೋರರು, ಪಾಪಿಗಳ ಜೊತೆಗೆ ಇದ್ದುಕೊಂಡಿದ್ದ ಕಾರಣಕ್ಕೋ ಏನೋ, ಆ ಪೊಲೀಸಪ್ಪನಿಗೂ ಅದೇ ವರ್ತನೆ ಬಂದಿದೆ. ಪಾಪದ ಹುಡುಗಿಗೆ ವಿಕೃತ ಕಿರುಕುಳ ನೀಡಲು ಮುಂದಾಗಿದ್ದ. ಸೆಕ್ಸ್ ವಿಚಾರದಲ್ಲಿ ಚಾಟಿಂಗ್ ಮಾಡುತ್ತಾ ಕಿರುಕುಳ ಕೊಟ್ಟಿದ್ದಾನೆ. ತಾನು ಪೊಲೀಸ್, ತನ್ನದೇನೂ ಹೊರಗೆ ಬರುವುದಿಲ್ಲ. ಪಾಪದ ಹುಡುಗಿ ಏನು ಮಾಡುತ್ತಾಳೆಂಬ ದರ್ಪದಲ್ಲಿ ಇಂಥ ಕೃತ್ಯಕ್ಕೆ ಇಳಿದಿದ್ದನೋ ಏನೋ..
ಹುಡುಗಿಯ ಮನೆಯವರು ಪೊಲೀಸ್ ಪೇದೆಯ ಕಿರುಕುಳ ತಾಳಲಾರದೆ, ವಿಧಿ ಕಾಣದೆ ಯಾರೋ ಹೇಳಿದರೆಂದು ಚೈಲ್ಡ್ ಲೈನ್ ಸಂಸ್ಥೆಯವರಲ್ಲಿ ವಿಷಯ ಹೇಳಿಕೊಂಡಿದ್ದಾರೆ. ಮೊಬೈಲಿನಲ್ಲಿ ವಿಕೃತವಾಗಿದ್ದ ಚಾಟಿಂಗ್ ರೆಕಾರ್ಡನ್ನು ನೋಡಿದ ಅಲ್ಲಿನ ಸಿಬಂದಿ ಮಂಗಳೂರಿನ ಮಹಿಳಾ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿ ಕಂಕನಾಡಿ ನಗರ ಠಾಣೆಯ ಪೇದೆ ಬೆಂಗ್ರೆ ನಿವಾಸಿ ವಿನೋದ್ ನನ್ನು ಬಂಧಿಸಿದ್ದಾರೆ. ಅಲ್ಲದೆ, ಅಪ್ರಾಪ್ತ ಹುಡುಗಿಗೆ ಕಿರುಕುಳ ನೀಡಿದ್ದ ಕಾರಣಕ್ಕೆ ಆತನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸು ದಾಖಲಿಸಿದ್ದಾರೆ.
ಪೊಲೀಸ್ ಕರ್ತವ್ಯದಲ್ಲಿದ್ದುಕೊಂಡು ಈ ರೀತಿಯ ಕೃತ್ಯ ಮಾಡಬಾರದು ಎಂದು ಖುದ್ದು ಪೊಲೀಸ್ ಕಮಿಷನರ್ ಸಾಹೇಬ್ರೇ ವಿಷಯ ಗೊತ್ತಾಗುತ್ತಲೇ ಖಡಕ್ಕಾಗಿ ಕ್ರಮ ಜರುಗಿಸಲು ಸೂಚಿಸಿದ್ದಾರೆ.
POCSO case is filed against a police constable of Kankandy Town Police. The police constable has been arrested. The arrested has been identified as Vinod.
14-07-25 10:44 pm
Bangalore Correspondent
Shiradi Ghat Accident, Car: ಶಿರಾಡಿ ಘಾಟ್ ; ರಸ್...
14-07-25 01:43 pm
Dr B Saroja Devi Death: 17ನೇ ವಯಸ್ಸಲ್ಲೇ ಚಿತ್ರರ...
14-07-25 12:50 pm
Mantralaya, Tungabhadra River, drowning: ತುಂಬ...
13-07-25 08:37 pm
ಆಧ್ಯಾತ್ಮಿಕ ಸಾಧನೆಯತ್ತ ಚಿತ್ತ ; ಗೋಕರ್ಣ ಬಳಿಯ ದಟ್ಟ...
13-07-25 04:03 pm
14-07-25 03:24 pm
HK News Desk
ಅಹ್ಮದಾಬಾದ್ ವಿಮಾನ ದುರಂತ ; ಭಾರೀ ಅನುಮಾನ ಹುಟ್ಟಿಸಿ...
12-07-25 09:25 pm
Apples New COO, Sabih Khan: ಟೆಕ್ ದೈತ್ಯ ಏಪಲ್ ಸ...
12-07-25 04:21 pm
ಸಾಮೂಹಿಕ ಮತಾಂತರ ; ಮೂರೇ ವರ್ಷಕ್ಕೆ ಚಾಂಗೂರ್ ಬಾಬಾನಿ...
12-07-25 02:15 pm
Coimbatore Serial Blasts, 'Tailor Raja' Arres...
11-07-25 12:08 pm
14-07-25 09:55 pm
Mangalore Correspondent
Mrpl leakgae, Death, Fight: ಅನಿಲ ಸೋರಿಕೆಯಿಂದ ಇ...
14-07-25 07:56 pm
Mangalore, Help: ಅಪಘಾತದಲ್ಲಿ ಬಡ ಮಹಿಳೆಯ ತಲೆಗೆ ತ...
13-07-25 11:13 pm
Mangalore News: ಸಾರಿಗೆ ಕಚೇರಿಗಳಿಗೆ ಸ್ವಂತ ಕಟ್ಟಡ...
13-07-25 11:11 pm
Mangalore, E Bus, MP Chowta: ಕೇಂದ್ರ ಸರ್ಕಾರದಿಂ...
13-07-25 10:12 pm
13-07-25 05:23 pm
Bangalore Correspondent
ಅಪ್ರಾಪ್ತ ಬಾಲಕಿಯನ್ನು ಶಾಲೆಗೆ ಕರೆದೊಯ್ಯುವ ನೆಪದಲ್ಲ...
12-07-25 11:10 pm
Dowry Harassment, Mysuru: ಮದುವೆಯಾದ ಎರಡೇ ತಿಂಗಳ...
12-07-25 01:32 pm
Mangalore Job Fraud, KCOCA, Police: ಫಾರಿನ್ ಉದ...
12-07-25 11:59 am
Robbery, Gold Workshop in Kalaburagi: ಕಲಬುರಗಿ...
11-07-25 10:10 pm