ಬ್ರೇಕಿಂಗ್ ನ್ಯೂಸ್
21-08-21 05:23 pm Headline Karnataka News Network ಕ್ರೈಂ
ಗುವಾಹಟಿ, ಆಗಸ್ಟ್ 21: ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ಪರವಾಗಿ ಪೋಸ್ಟ್ ಮಾಡಿದ ಕಾರಣದಿಂದಾಗಿ ಅಸ್ಸಾಂನ ಹನ್ನೊಂದು ಜಿಲ್ಲೆಗಳಿಂದ 14 ಜನರನ್ನು ಬಂಧಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿದೆ.
ಸುಮಾರು 20 ವರ್ಷಗಳ ಬಳಿಕ ಅಮೆರಿಕವು ಅಫ್ಘಾನಿಸ್ತಾನದಿಂದ ತನ್ನ ಸೇನೆಯನ್ನು ಹಿಂದಕ್ಕೆ ಪಡೆಯುತ್ತಿದ್ದಂತೆ ತಾಲಿಬಾನ್ ಅಪ್ಘಾನಿಸ್ತಾವನ್ನು ವಶಕ್ಕೆ ಪಡೆದಿದೆ. ಈ ತಾಲಿಬಾನ್ ಉಗ್ರರ ಪರವಾಗಿ ಈ ಬಂಧಿತ 14 ಜನರು ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿದ ಹಿರಿಯ ಪೊಲೀಸ್ ಅಧಿಕಾರಿ, "ಅಸ್ಸಾಂನಲ್ಲಿ ಒಟ್ಟು 14 ಜನರನ್ನು ತಾಲಿಬಾನ್ ಪರ ಪೋಸ್ಟ್ ಹಾಕಿದ ಕಾರಣ ಬಂಧನ ಮಾಡಲಾಗಿದೆ. ಈ 14 ಮಂದಿ ಅಸ್ಸಾಂನ 11 ಜಿಲ್ಲೆಗಳಿಗೆ ಸೇರಿದವರು ಆಗಿದ್ದಾರೆ. ಈ ಬಂಧಿತ ವ್ಯಕ್ತಿಗಳ ಪೈಕಿ ಹೈಲಕಂಡಿಯ ಎಮ್ಬಿಬಿಎಸ್ ವಿದ್ಯಾರ್ಥಿಯೂ ಸೇರಿದ್ದಾನೆ. ಈ ವಿದ್ಯಾರ್ಥಿಯು ತೇಜ್ಪುರ ವೈದ್ಯಕೀಯ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾನೆ. ಇನ್ನೂ ಬೇರೆ ಇಬ್ಬರು ವಿದ್ಯಾರ್ಥಿಗಳನ್ನು ಕೂಡಾ ಬಂಧನ ಮಾಡಲಾಗಿದೆ," ಎಂದು ಮಾಹಿತಿ ನೀಡಿದ್ದಾರೆ.

"ಇನ್ನು ಈ ಪೈಕಿ ಕೆಲವರು ನೇರವಾಗಿ ತಾಲಿಬಾನ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದರೆ, ಇನ್ನೂ ಕೆಲವರು ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ದಾಳಿ ವಿಚಾರದಲ್ಲಿ ಭಾರತವನ್ನು ಟೀಕೆ ಮಾಡಿದ್ದಾರೆ. ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ತಾಲಿಬಾನ್ ಪರವಾಗಿ ಮಾತನಾಡದ ಭಾರತ ಹಾಗೂ ಭಾರತದ ಮಾಧ್ಯಮಗಳ ವಿರುದ್ದ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಬಂಧನಕ್ಕೆ ಒಳಪಟ್ಟಿದ್ದಾರೆ," ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಸ್ಸಾಂನ ಸೈಬರ್ ಸೆಲ್ನ ಮುಖಾಂತರ ಸಾಮಾಜಿಕ ಜಾಲತಾಣದಲ್ಲಿ ತಾಲಿಬಾನ್ ಪರವಾಗಿ, ಭಾರತದ ವಿರುದ್ದವಾಗಿ ಪೋಸ್ಟ್ ಮಾಡಿದ ಜನರನ್ನು ಪತ್ತೆ ಹಚ್ಚಲಾಗಿದ್ದು, ಬಳಿಕ ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ. ಇನ್ನು ಕೂಡಾ ಹಲವು ಮಂದಿ ಆರೋಪಿಗಳಿಗಾಗಿ ವಿಶೇಷ ಪೊಲೀಸ್ ಅಧಿಕಾರಿಗಳು ಬಲೆ ಬೀಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿದ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ವೈಲೆಟ್ ಬರೂವಾ, "ತಾಲಿಬಾನ್ ಪರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದವರ ವಿರುದ್ದವಾಗಿ ಅಸ್ಸಾಂ ಪೊಲೀಸರು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ. ಈ ತಾಲಿಬಾನ್ ಪರವಾಗಿ ಮಾಡಲಾದ ಪೋಸ್ಟ್ಗಳು ಭಾರತದ ಭದ್ರತೆಗೆ ಅಪಾಯವಾಗಿದೆ," ಎಂದು ಅಭಿಪ್ರಾಯಿಸಿದ್ದಾರೆ.

ಇನ್ನು "ಈ ತಾಲಿಬಾನ್ ಪರವಾಗಿ ಮಾತನಾಡುವ ಜನರ ವಿರುದ್ದ ನಾವು ಕ್ರಿಮಿನಲ್ ಪ್ರಕರಣಗಳನ್ನು ದಾಖಲು ಮಾಡುತ್ತಿದ್ದೇವೆ. ಇಂತಹ ತಾಲಿಬಾನ್ ಪರವಾದ ಹೇಳಿಕೆ ಅಥವಾ ಪೋಸ್ಟ್ಗಳ ಬಗ್ಗೆ ಗಮನಕ್ಕೆ ಬಂದರೆ ದಯವಿಟ್ಟು ಪೊಲೀಸರಿಗೆ ಮಾಹಿತಿ ನೀಡಿ," ಎಂದು ಟ್ವೀಟ್ ಮೂಲಕ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ವೈಲೆಟ್ ಬರೂವಾ ಮನವಿ ಮಾಡಿದ್ದಾರೆ.
ತಾಲಿಬಾನ್ ಪರವಾಗಿ ಅಥವಾ ಭಯೋತ್ಪಾದನೆ ಪರವಾಗಿ ಮಾಡಲಾದ ಸುಮಾರು 17 ರಿಂದ 20 ಪೋಸ್ಟ್ಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಮಾಡಿರುವುದು ಈವರಗೆ ಗಮನಕ್ಕೆ ಬಂದಿದೆ. ಈ ಪೋಸ್ಟ್ಗಳನ್ನು ಮಾಡಲಾಗಿರುವ ಖಾತೆಗಳ ಬಗ್ಗೆ ಮಾಹಿತಿಯನ್ನು ಅಸ್ಸಾಂನ ಸೈಬರ್ ಸೆಲ್ನ ಮುಖಾಂತರ ಪತ್ತೆ ಹಚ್ಚಲಾಗಿದೆ. ಈವರೆಗೆ 14 ಮಂದಿಯನ್ನು ಬಂಧಿಸಲಾಗಿದ್ದು, ಇನ್ನು ಹಲವಾರು ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮಾಹಿತಿ ಲಭಿಸಿದೆ.
ಅಸ್ಸಾಂ ರಾಜ್ಯದ 11 ಜಿಲ್ಲೆಗಳಿಂದ ತಾಲಿಬಾನ್ ಪರವಾಗಿ ಪೋಸ್ಟ್ಗಳನ್ನು ಮಾಡಲಾಗಿದೆ. ಈ ಜನರು ಅಸ್ಸಾಂನಲ್ಲೇ ಇರುವವರು ಆಗಿದ್ದಾರೆ. ಇನ್ನುಳಿದಂತೆ ಸೌದಿ ಅರೇಬಿಯಾ, ದುಬೈ ಹಾಗೂ ಮುಂಬೈನಿಂದ ಮಾಡಲಾಗಿದೆ. ಈ ಜನರು ಕೂಡಾ ಅಸ್ಸಾಂನವರೇ ಆಗಿದ್ದಾರೆ. ಪ್ರಸ್ತುತ ಅಲ್ಲಿ ನೆಲೆಸಿದ್ದು ಅಲ್ಲಿಂದ ಪೋಸ್ಟ್ ಮಾಡಿದ್ದಾರೆ ಎಂದು ಹೇಳಲಾಗಿದೆ. ಅಸ್ಸಾಂನಿಂದ ಹೊರಗೆ ನೆಲೆಸಿರುವ ಈ ಮೂರು ಜನರ ಬಗ್ಗೆ ಅಧಿಕ ಮಾಹಿತಿಯನ್ನು ಅಸ್ಸಾಂನ ಸೈಬರ್ ಸೆಲ್ನ ಪೊಲೀಸರು ಕಲೆ ಹಾಕುತ್ತಿದ್ದಾರೆ. ಈ ಬಗ್ಗೆ ಮಾಹಿತಿ ಲಭಿಸಿದ ಬಳಿಕ ಅಸ್ಸಾಂನ ಸೈಬರ್ ಸೆಲ್ನ ಪೋಲಿಸರು ಮಾಹಿತಿಯನ್ನು ಗುಪ್ತಚರ ಸಿಬ್ಬಂದಿಗಳಿಗೆ ನೀಡಲಿದ್ದಾರೆ ಎಂದು ಹೇಳಲಾಗಿದೆ.
Police in Assam have arrested 14 people for allegedly making pro-Taliban posts on social media. These posts expressed support for the hardline Islamic militant outfit’s takeover of Afghanistan.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am