ಕ್ಷುಲ್ಲಕ ಕಾರಣಕ್ಕೆ ಯುವಕನ ಕೊಲೆ ; ಆರೋಪಿ ಪೊಲೀಸ್ ಬಲೆಗೆ, ಗಾಂಜಾ ನಶೆಯಲ್ಲಿ ನಡೆದಿತ್ತೇ ಕೃತ್ಯ !?

14-09-21 01:36 pm       Mangaluru Correspondent   ಕ್ರೈಂ

ಪಾಂಡವರಕಲ್ಲು ನಿವಾಸಿ ರಫೀಕ್(20) ಎಂಬಾತನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಿದ್ದೀಕ್ ನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. 

ಬಂಟ್ವಾಳ, ಸೆ.14: ಪಾಂಡವರಕಲ್ಲು ನಿವಾಸಿ ರಫೀಕ್(20) ಎಂಬಾತನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಸಿದ್ದೀಕ್ ನನ್ನು ಪುಂಜಾಲಕಟ್ಟೆ ಪೊಲೀಸರು ಬಂಧಿಸಿದ್ದಾರೆ. 

ಆರೋಪಿ ಸಿದ್ದೀಕ್ ಜೊತೆಗೆ ರಫೀಕ್ ಕ್ಷುಲ್ಲಕ ಕಾರಣಗಳಿಗಾಗಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದ್ದು ಇದರಿಂದ ಬೇಸತ್ತಿದ್ದ ಸಿದ್ದೀಕ್ ಈತನಿಗೆ ಬುದ್ದಿ ಕಲಿಸಬೇಕೆಂದು ಪ್ಲಾನ್ ಹಾಕಿದ್ದ. ಭಾನುವಾರ ಸಂಜೆ 6 ಗಂಟೆ ವೇಳೆಗೆ ಮನೆಯ ಬಳಿ ಶಟ್ಲ್ ಆಡುತ್ತಿದ್ದ ಸಮಯ ರಫೀಕ್‌ನನ್ನು ಅಲ್ಲಿನ ಸಮೀಪದ ಗುಡ್ಡ ಪ್ರದೇಶಕ್ಕೆ ಸಿಗರೇಟು ಸೇದುವ ನೆಪದಲ್ಲಿ ಕರೆದುಕೊಂಡು ಹೋಗಿದ್ದ. ಅಲ್ಲಿ ಸಿದ್ದೀಕ್ ತಾನು ತಂದಿದ್ದ ಚಾಕುವಿನಿಂದ ರಫೀಕ್ ಕುತ್ತಿಗೆ, ಎದೆ ಮತ್ತು ಹೊಟ್ಟೆಗೆ ತಿವಿದು ಕೊಲೆ ಮಾಡಿದ್ದಾನೆ.

ತೀವ್ರ ರಕ್ರಸ್ರಾವದಿಂದ ನೆಲಕ್ಕೆ ಬಿದ್ದವನ ಮೇಲೆ ಕಲ್ಲು ಎತ್ತಿ ಹಾಕಿ, ಕೊಲೆ ಮಾಡಿದ್ದ. ರಫೀಕ್ ಮೃತಪಟ್ಟಿರುವುದನ್ನು ಖಚಿತಪಡಿಸಿ, ಬಳಿಕ ತನ್ನ ಗೆಳೆಯ ಪಯಾಝ್ ಎಂಬಾತನ ನೆರವು ಪಡೆದು ಕಾರಿನಲ್ಲಿ ಮೃತದೇಹವನ್ನು ಇಟ್ಟುಕೊಂಡು ಕೊಡ್ಯಮಲೆ ಕಾಡು ಪ್ರದೇಶದ ಮೋರಿಯಲ್ಲಿ ಹರಿಯುತ್ತಿರುವ ನೀರಿಗೆ ಬಿಸಾಕಿದ್ದ. ಈ ಬಗ್ಗೆ ಶಂಕೆಯ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಕೃತ್ಯ ಬೆಳಕಿಗೆ ಬಂದಿದೆ.‌ 

ಆರೋಪಿ ಕೃತ್ಯಕ್ಕೆ ಬಳಸಿದ ಮಾರುತಿ ಆಲ್ಟೋ ಕಾರು, ಚಾಕು, ಕೃತ್ಯದ ವೇಳೆ ಆತ ತೊಟ್ಟಿದ್ದ ವಸ್ತ್ರಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಗಾಂಜಾ ಸೇವನೆಯ ನಶೆಯಲ್ಲಿ ಈ ಕೃತ್ಯ ಎಸಗಿದ್ದಾನೆ ಎನ್ನಲಾಗುತ್ತಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Read: ಪುಂಜಾಲಕಟ್ಟೆ ; ಯುವಕನ ಹೊಡೆದು ಕೊಲೆ, ಸ್ವಂತ ಅತ್ತೆ ಮಗನಿಂದಲೇ ಕೃತ್ಯ!

Police arrested one accused for murder case youth in Bantwal.