ಬ್ರೇಕಿಂಗ್ ನ್ಯೂಸ್
08-10-21 04:07 pm Mangalore Reporter ಕ್ರೈಂ
ಮಂಗಳೂರು, ಅ.8 : ತಲವಾರು ತೋರಿಸಿ ಬಹಿರಂಗವಾಗಿ ಕೊಲೆ ನಡೆಸುವ ಬೆದರಿಕೆ ಹಾಕಿದ್ದಲ್ಲದೆ, ನಡುರಸ್ತೆಯಲ್ಲಿ ದಾಂಧಲೆ ನಡೆಸಿದ ರೌಡಿಗಳ ತಂಡವನ್ನು ಕಾವೂರು ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಕೊಲೆಯತ್ನ, ಬೆದರಿಕೆ, ಹಲ್ಲೆ ನಡೆಸಿದ ಬಗ್ಗೆ ಪ್ರತ್ಯೇಕ ಎಫ್ಐಆರ್ ದಾಖಲಾಗಿದೆ.
ಅ.7ರಂದು ಸಂಜೆ ಮೂಡುಶೆಡ್ಡೆಯಲ್ಲಿ ವಿವೇಕಾನಂದ ಎನ್ನುವ ಬಜರಂಗದಳದ ಕಾರ್ಯಕರ್ತನನ್ನು ಅಟ್ಟಿಸಿಕೊಂಡು ಬಂದಿದ್ದ ಏಳು ಮಂದಿಯ ತಂಡ ನಡುರಸ್ತೆಯಲ್ಲಿ ದಾಂಧಲೆಗೆ ಮುಂದಾಗಿತ್ತು. ಆನಂತರ ವಿವೇಕಾನಂದ ಅಲ್ಲಿನ ಅಂಗಡಿಯೊಂದಕ್ಕೆ ನುಗ್ಗಿ ಅಪಾಯದಿಂದ ಪಾರಾಗಿದ್ದ. ಅಟ್ಟಿಸಿಕೊಂಡು ಬಂದ ಏಳು ಮಂದಿಯಿದ್ದ ತಂಡದಲ್ಲಿ ರೌಡಿ ಶೀಟರ್ ಗಳಿದ್ದರು. ಬಹಿರಂಗವಾಗಿ ತಲವಾರು ತೋರಿಸಿ ಬೆದರಿಸಿದ್ದಲ್ಲದೆ, ಮಹಿಳೆಯರು, ಮಕ್ಕಳನ್ನು ಬೆದರಿಸಿ ತೆರಳಿದ್ದರು. ಈ ಘಟನೆಯ ವಿಡಿಯೋವನ್ನು ಸ್ಥಳೀಯರು ಮಾಡಿದ್ದು, ಅದು ವೈರಲ್ ಆಗಿತ್ತು. ವಿಡಿಯೋ ಆಧರಿಸಿ, ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
ಕಾಂಗ್ರೆಸ್ ಮುಖಂಡ ಮಿಥುನ್ ರೈ ಪರವಾಗಿ ಪೋಸ್ಟರ್ ಹಾಕುತ್ತಿದ್ದ ವೇಳೆ ಎರಡು ತಂಡಗಳ ನಡುವೆ ಗಲಾಟೆ ನಡೆದಿತ್ತು ಎನ್ನಲಾಗಿದೆ. ಹಿಂದು ಯುವಕರು ಪೋಸ್ಟರ್ ಹಾಕಿದ್ದನ್ನು ಮುಸ್ಲಿಮ್ ಯುವಕರು ಪ್ರಶ್ನೆ ಮಾಡಿದ್ದರು. ನೀವು ಬಿಜೆಪಿ ಅಲ್ವಾ ಎಂದು ಪ್ರಶ್ನೆ ಮಾಡಿದ್ದು ಆನಂತರ ವಾಗ್ಯುದ್ಧಕ್ಕೆ ಕಾರಣವಾಗಿತ್ತು. ಆನಂತರ, ಅಲ್ಲಿದ್ದ ಬಜರಂಗದಳದ ಯುವಕ ವಿವೇಕಾನಂದ ಎಂಬಾತನನ್ನು ಮುಸ್ಲಿಂ ಯುವಕರು ಅಟ್ಟಿಸಿಕೊಂಡು ಬಂದಿದ್ದರು ಎನ್ನಲಾಗಿದೆ. ಇಮ್ರಾನ್, ರಿಜ್ವಾನ್, ರಮೀಜ್, ಮುಸ್ತಾಫ್, ಶಾರುಖ್ ಮತ್ತು ಅಶ್ಪಾಕ್ ಎಂಬವರು ಅಟ್ಟಿಸಿಕೊಂಡು ಬಂದಿದ್ದು, ಅವರ ವಿರುದ್ಧ ಕೇಸು ದಾಖಲಾಗಿದೆ. ಈ ಪೈಕಿ ರಿಜ್ವಿನ್ ರೌಡಿ ಶೀಟರ್ ಆಗಿದ್ದು ಬಹಿರಂಗ ಬೆದರಿಕೆ ಹಾಕಿದ್ದು ವಿಡಿಯೋದಲ್ಲಿ ದಾಖಲಾಗಿತ್ತು.
ಮೂಡುಶೆಡ್ಡೆಯಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ಹಿಂದು ಸಂಘಟನೆಗೆ ಸೇರಿದ ಮನೋಜ್ ಮತ್ತು ವೀರೇಶ್ ಎಂಬವರನ್ನೂ ಪೊಲೀಸರು ಬಂಧಿಸಿದ್ದಾರೆ. ಇದಕ್ಕೂ ಮುನ್ನ ಅ.6ರಂದು ರಾತ್ರಿ ಅಶ್ಫಾಕ್ ಎಂಬ ಯುವಕನಿಗೆ ನಾಲ್ವರ ತಂಡವೊಂದು ಹಲ್ಲೆ ನಡೆಸಿತ್ತು. ಆಟೋ ರಿಕ್ಷಾದಲ್ಲಿ ಬಂದಿದ್ದ ತಂಡ ಹಲ್ಲೆ ನಡೆಸಿದ್ದು ಅಲ್ಲಿನ ಸಿಸಿಟಿವಿಯಲ್ಲಿ ದಾಖಲಾಗಿತ್ತು. ಈ ಘಟನೆಗೆ ಪ್ರತೀಕಾರ ರೂಪದಲ್ಲಿ ಮರುದಿನ ಗುರುವಾರ ಸಂಜೆ ರಿಜ್ವಾನ್ ಮತ್ತು ತಂಡ ತಲವಾರು ತೋರಿಸಿ ಬೆದರಿಕೆ ಹಾಕಿದೆ ಎನ್ನಲಾಗುತ್ತಿದೆ. ಇವೆರಡೂ ಘಟನೆಗೆ ಸಂಬಂಧಿಸಿ ಪೊಲೀಸರು ಏಳು ಮಂದಿಯನ್ನು ಬಂಧಿಸಿದ್ದಾರೆ.
Mangalore Seven arrested for assault and threatening of Bajarang dal activist in Moodushedde. A gang of rowdy sheeters reportedly brandished swords and posed death threat. The incident happened on the evening of Thursday October 7.
08-05-25 11:07 pm
Bangalore Correspondent
U T Khader, Dinesh Gundurao, Suhas Shetty Mur...
08-05-25 07:50 pm
Karwar high alert: ಕಾರವಾರದಲ್ಲಿ ಹೈ ಎಲರ್ಟ್ ; ಸಮ...
08-05-25 12:23 pm
Special Poojas, Indian Army, Minister Ramalin...
07-05-25 04:07 pm
ಭಾರತ - ಪಾಕ್ ಮಧ್ಯೆ ಉದ್ವಿಗ್ನ ಸ್ಥಿತಿ ; ಮೇ 7 ರಂದು...
06-05-25 11:23 pm
09-05-25 06:49 pm
HK News Desk
India Pak War: ಭಾರತ ವಾಯುಪಡೆಯಿಂದ ಭೀಕರ ಪ್ರತಿದಾಳ...
09-05-25 12:33 pm
India - Pak War update: ಪಾಕಿಸ್ತಾನದ ಎಫ್ -16, ಎ...
09-05-25 12:00 am
New Pope, Robert Francis Prevost;140 ಕೋಟಿ ಸದಸ...
08-05-25 11:44 pm
Pak drone-missile attack; ಚೈನಾ ಮೇಡ್ ಲಾಹೋರ್ ಏರ...
08-05-25 04:57 pm
09-05-25 06:22 pm
Giridhar Shetty, Mangaluru
Resham Bariga, Belthangady, Indo Pak War, Ant...
09-05-25 03:24 pm
Suhas Shetty Murder Case, Speaker UT Khader,...
09-05-25 01:32 pm
Ullal accident, Mangalore: ರಸ್ತೆ ದಾಟುತ್ತಿದ್ದ...
08-05-25 10:54 pm
Satish Kumapla, Mangalore, U T Khader: ಮೂಡಾ ಅ...
08-05-25 09:06 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm