ಬ್ರೇಕಿಂಗ್ ನ್ಯೂಸ್
11-12-21 12:57 pm HK Desk news ಕ್ರೈಂ
Photo credits : Headline Karnataka
ಮಂಗಳೂರು, ಡಿ.11 : ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ ಪ್ರಕರಣದಲ್ಲಿ ಮತಾಂತರ ಯತ್ನವೇ ಘಟನೆಗೆ ಕಾರಣವಾಗಿತ್ತು ಅನ್ನೋ ಅಂಶ ಪೊಲೀಸರ ತನಿಖೆಯಲ್ಲಿ ಕಂಡುಬಂದಿದೆ.
ಘಟನೆ ಹಿನ್ನೆಲೆಯಲ್ಲಿ ವಶಕ್ಕೆ ಪಡೆದಿದ್ದ ಮಹಿಳೆ ನೂರ್ ಜಹಾನ್, ಮೃತ ವಿಜಯಲಕ್ಷ್ಮಿಯನ್ನ ಇಸ್ಲಾಂಗೆ ಮತಾಂತರಕ್ಕೆ ಯತ್ನಿಸಿದ್ದಳು ಎನ್ನುವುದನ್ನು ತನಿಖೆಯಲ್ಲಿ ಪತ್ತೆ ಮಾಡಲಾಗಿದೆ.
ಮದುವೆ ಬ್ರೋಕರ್ ಕೂಡ ಆಗಿದ್ದ ಬಿಜೈ ನಿವಾಸಿ ನೂರ್ ಜಹಾನ್ ಮನೆಯಲ್ಲಿ ವಿಜಯಲಕ್ಷ್ಮಿ ಮನೆ ಕೆಲಸಕ್ಕೆ ಬರುತ್ತಿದ್ದಳು. ಗಂಡ- ಹೆಂಡತಿ ನಡುವಿನ ಜಗಳವನ್ನ ಎನ್ ಕ್ಯಾಶ್ ಮಾಡಿಕೊಂಡಿದ್ದ ನೂರ್ ಜಹಾನ್, ಆಕೆಯನ್ನು ಮತಾಂತರಿಸಿ ಬೇರೊಬ್ಬ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಲು ಯತ್ನಿಸಿದ್ದಳು.
ಆತ್ಮಹತ್ಯೆ ಮಾಡಿಕೊಂಡ ನಾಗೇಶ್ ಮತ್ತು ಪತ್ನಿ ವಿಜಯಲಕ್ಷ್ಮಿ ಮಧ್ಯೆ ಜಗಳ ನಡೆಯುತ್ತಿತ್ತು. ಮನೆಯಲ್ಲಿ ಪ್ರತಿನಿತ್ಯ ಕುಡಿದು ಬಂದು ಜಗಳ ಮಾಡುತ್ತಿದ್ದ ಪತಿ ನಾಗೇಶ್ ಬಗ್ಗೆ ಸಿಟ್ಟು ಮಾಡಿಕೊಂಡಿದ್ದ ವಿಜಯಲಕ್ಷ್ಮಿ, ಆ ಬಗ್ಗೆ ನೂರ್ ಜಹಾನ್ ಬಳಿ ಹೇಳಿಕೊಂಡಿದ್ದಳು. ಇದನ್ನೇ ನೆಪವಾಗಿಸಿದ ನೂರ್ ಜಹಾನ್, ವಿಜಯಲಕ್ಷ್ಮಿಯನ್ನು ಪತಿ ನಾಗೇಶ್ ಗೆ ಡೈವೋರ್ಸ್ ಕೊಡುವಂತೆ ಹೇಳಿದ್ದಳು.
ಡೈವೋರ್ಸ್ ನೀಡಿದ ಬಳಿಕ ಮುಸ್ಲಿಂ ಯುವಕನಿಗೆ ಮದುವೆ ಮಾಡಿಸಿಕೊಡುವುದಾಗಿ ಹೇಳಿದ್ದ ನೂರ್ ಜಹಾನ್, ಅದಕ್ಕಾಗಿ ಆಕೆಯ ಫೋಟೊ ಪಡೆದು ಹುಡುಗನಿಗಾಗಿ ಹುಡುಕಾಟ ನಡೆಸಿದ್ದಳು. ಆದರೆ ಬೇರೆ ಮದುವೆಯಾಗೋಕು ಮುನ್ನ ಇಸ್ಲಾಂಗೆ ಮತಾಂತರ ಆಗಬೇಕೆಂದು ಷರತ್ತು ವಿಧಿಸಿದ್ದಳು.
ವಿಜಯಲಕ್ಷ್ಮಿ ಡೈವೋರ್ಸ್ ಕೇಳುತ್ತಿರುವುದು ಮತ್ತು ಆಕೆ ನೂರ್ ಜಹಾನ್ ಪಿತೂರಿಗೆ ಒಳಗಾಗಿ ಮುಸ್ಲಿಂ ಆಗಿ ಮತಾಂತರ ಆಗಿದ್ದಾಳೆ ಎಂಬ ವಿಚಾರದಲ್ಲಿ ಪತಿ - ಪತ್ನಿಯ ಮಧ್ಯೆ ಜಗಳ ಆಗುತ್ತಿತ್ತು. ಇವರ ಮಧ್ಯೆ ಇದೇ ವಿಚಾರದಲ್ಲಿ ಗಲಾಟೆ ನಡೆದಿದ್ದು ಡಿ.7 ರಂದು ರಾತ್ರಿ ಮಕ್ಕಳು ಮತ್ತು ಪತ್ನಿಗೆ ವಿಷ ಕೊಟ್ಟು ಕೊಂದು ಪತಿ ನಾಗೇಶ್, ನೇಣಿಗೆ ಶರಣಾಗಿದ್ದ.
ಅಲ್ಲದೆ, ನೂರ್ ಜಹಾನ್ ಮತಾಂತರಕ್ಕೆ ಯತ್ನಿಸಿದ್ದೇ ಸಾವಿಗೆ ಕಾರಣ ಎಂದು ನಾಗೇಶ್ ಡೆತ್ ನೋಟ್ ಬರೆದಿಟ್ಟಿದ್ದ. ಪೊಲೀಸರು ಇದೇ ಆಧಾರದಲ್ಲಿ ನೂರ್ ಜಹಾನ್ ಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಸದ್ಯ ಐಪಿಸಿ 306 ಅಡಿಯಲ್ಲಿ ಪ್ರಕರಣ ದಾಖಲಿಸಿ ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಲಕೋಟೆ ಮೂಲದ ನಾಗೇಶ್ ಶೇರಿಗುಪ್ಪಿ(30) ಮಂಗಳೂರಿನಲ್ಲಿ ಟ್ರಕ್ ಚಾಲಕನಾಗಿ ಕೆಲಸ ಮಾಡುತ್ತಿದ್ದು ಪತ್ನಿ ವಿಜಯಲಕ್ಷ್ಮಿ(26), ಮಕ್ಕಳಾದ ಸಪ್ನಾ(8) ಮತ್ತು ಸಮರ್ಥ್(4) ಜೊತೆಗೆ ಮೋರ್ಗನ್ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದ. ಮತಾಂತರ ವಿಚಾರದಿಂದ ಬೇಸತ್ತು ಸಾವಿಗೆ ಶರಣಾಗಿದ್ದಾನೆ ಎನ್ನುವುದು ತನಿಖೆಯಲ್ಲಿ ದೃಢಪಟ್ಟಿದೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.
ಪತ್ನಿ ಮಕ್ಕಳಿಗೆ ವಿಷವುಣಿಸಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ ; ಬಾಗಲಕೋಟೆ ಮೂಲದ ಕುಟುಂಬದ ದುರಂತ ಅಂತ್ಯ !
ನಾಲ್ವರ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ; ಮುಸ್ಲಿಂ ಮತಾಂತರದ ಬಗ್ಗೆ ಶಂಕೆ, ಆರೋಪಿ ಮಹಿಳೆ ಪೊಲೀಸ್ ವಶಕ್ಕೆ !!
Four members of family suicide in Mangalore case, Muslim woman tried to convert wife to Islam says Police Commisioner. Four members of a family were found dead in a house near Jeppu Market in Mangaluru on December 8. The police gave their names as Nagesh Shiraguppi, 30, his wife Vijayalakshmi, 26, and their children Sapna, 8, and Samarth, 4. The family hails from Sunag village in Bilagi taluk of Bagalkot district.
11-05-24 11:20 pm
Bangalore Correspondent
SP Dinesh, Ayanur Manjunath, Congress: ನೈರುತ್...
11-05-24 09:46 pm
KAS officer shivakumar wife Chaitra suicide:...
11-05-24 07:25 pm
Chikkaballapur, Police constable protest, SP...
11-05-24 06:57 pm
Belagavi accident, three killed: ಬೆಳಗಾವಿ ; ಕ್...
11-05-24 05:25 pm
11-05-24 09:43 pm
HK News Desk
Kareena Kapoor, Bible Book, court: “ಪ್ರೆಗ್ನೆನ...
11-05-24 03:13 pm
Ram Mandir, Nana Patole, Nrendra modi: ಮೋದಿಯಿ...
10-05-24 10:05 pm
Arvind Kejriwal, Supreme court: ಸಿಎಂ ಕೇಜ್ರಿವಾ...
10-05-24 03:46 pm
Kerala Arali Flower death: ಮೊಬೈಲ್ ನಲ್ಲಿ ಮಾತನಾ...
10-05-24 10:06 am
11-05-24 10:54 pm
Mangalore Correspondent
Mangalore Alvas pragathi job fair: ಜೂನ್ 7-8 ;...
11-05-24 06:48 pm
Udupi news, body in car: ಟೂರಿಸ್ಟ್ ಕಾರು ಇರೋದು...
11-05-24 01:33 pm
Thumbe reservoir, Mangalore: ತುಂಬೆ ಡ್ಯಾಮಿನಲ್ಲ...
11-05-24 12:25 pm
Praveen Nettaru, NIA arrest: ಸಕಲೇಶಪುರದಲ್ಲಿ ಶು...
10-05-24 10:45 pm
11-05-24 10:18 pm
Mangaluru Correspondent
Bangalore Crime, Cyber, Roopa Iyer: ಸೆಲೆಬ್ರಿಟ...
10-05-24 05:04 pm
Kalaburgi youth murdered: ಕಲಬುರಗಿ ; ಕಾಂಗ್ರೆಸ್...
10-05-24 02:04 pm
Cyber fraud Kodagu, Kerala, Sim card: ಸೈಬರ್ ವ...
10-05-24 12:44 pm
NIA arrests Mustafa Paichar, Praveen Nettaru...
10-05-24 11:53 am