ಬ್ರೇಕಿಂಗ್ ನ್ಯೂಸ್
11-02-21 02:18 pm Source: GIZBOT Mutthuraju H M ಡಿಜಿಟಲ್ ಟೆಕ್
ಭಾರತ ಸರ್ಕಾರ ಮತ್ತು ಟ್ವಿಟರ್ ನಡುವಿನ ತಿಕ್ಕಾಟ ಇದೀಗ ಮತ್ತೊಂದು ಹಂತಕ್ಕೆ ತಲುಪಿದೆ. ದೆಹಲಿ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆ ವೇಳೆ ನಿಯಮ ಮೀರಿ ಪ್ರಚೋದನಕಾರಿ ಟ್ವೀಟ್ ಮಾಡಿದ್ದ,ಹೆಚ್ಚುವರಿ 1,178 ಟ್ವೀಟ್ ಖಾತೆಗಳನ್ನು ನಿಷೇದ ಮಾಡುವಂತೆ ಕೇಂದ್ರ ಸರ್ಕಾರ ಈ ದೇಶದ ಕಾನೂನಿನ ಪ್ರಕಾರ ನಿರ್ದೇಶನ ಮಾಡಿತ್ತು. ಆದರೆ ಇದರ ಬಗ್ಗೆ ಟ್ವಿಟರ್ ಅಭಿವ್ಯಕ್ತಿ ಸ್ವಾತಂತ್ರದ ಹೆಸರಿನಲ್ಲಿ ಅಸಮಾಧಾನ ವ್ಯಕ್ತಪಡಿಸಿತ್ತು. ಇದಕ್ಕೆ ಭಾರತ ಸರ್ಕಾರ ತನ್ನ ಸ್ವದೇಶಿ ಸೊಶೀಯಲ್ ಮೀಡಿಯಾ ಆಪ್ ಕೂ, ಮೂಲಕ ಟಕ್ಕರ್ ನೀಡಿದೆ.
ಹೌದು, ಭಾರತ ಸರ್ಕಾರದ ನಿರ್ದೇಶನ ಪಾಳಿಸಲು ಹಿಂದೇಟು ಹಾಕಿದ ಟ್ವಿಟರ್ಗೆ ಸ್ವದೇಶಿ ಕೂ ಆಪ್ ಮೂಲಕ ತಿರುಗೇಟು ನೀಡಿದೆ. ಟ್ವಿಟ್ಟರ್ ಅಪ್ಲಿಕೇಶನ್ಗೆ ಭಾರತೀಯ ಪರ್ಯಾಯವಾದ ಕೂ, ಟ್ವಿಟ್ಟರ್ ತರಹದ ಅನುಭವವನ್ನು ನೀಡಲಿದೆ. ಸದ್ಯ ದೇಶದಲ್ಲಿ ಆತ್ಮನಿರ್ಭರ್ ಭಾರತ್ ಅಭಿಯಾನವನ್ನು ನಡೆಸುತ್ತಿರುವ ಭಾರತ ಸರ್ಕಾರ ಕೂ ಆಪ್ ಮೂಲಕ ಟ್ವಿಟರ್ಗೆ ಸೆಡ್ಡು ಹೊಡೆದಿರೋದು ಸಾಕಷ್ಟು ಗಮನ ಸೆಳೆದಿದೆ. ಇನ್ನು ಕೂ ಅಪ್ಲಿಕೇಶನ್ ಕಳೆದ ವರ್ಷ ಮಾರ್ಚ್ನಲ್ಲಿ ಆತ್ಮಾ ನಿರ್ಭರ್ ಭಾರತ್ ಅಭಿಯಾನದಲ್ಲಿ ಬಿಡುಗಡೆ ಆಗಿತ್ತು. ಅಷ್ಟೇ ಅಲ್ಲ ಡಿಜಿಟಲ್ ಇಂಡಿಯಾ ಆತ್ಮಾ ನಿರ್ಭರ್ ಭಾರತ್ ಇನ್ನೋವೇಟ್ ಚಾಲೆಂಜ್ ಅನ್ನು ಗೆದ್ದುಕೊಂಡಿದೆ.

ಕೂ ಎಂದರೇನು?
ಕೂ ಎಂಬುದು ಟ್ವಿಟರ್ನಂತೆಯೇ ಮೈಕ್ರೋಬ್ಲಾಗಿಂಗ್ ಸೇವೆಯಾಗಿದ್ದು, ಇದರಲ್ಲಿ ಬಳಕೆದಾರರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಬಹುದು. ಇದನ್ನು ಕೂ ಸಹ ಸಂಸ್ಥಾಪಕ ಮತ್ತು ಸಿಇಒ ಆಗಿರುವ ಅಪ್ರಮೇಯ ರಾಧಾಕೃಷ್ಣ ಅಭಿವೃದ್ಧಿಪಡಿಸಿದ್ದಾರೆ. ಕಳೆದ ವರ್ಷ ಮಾರ್ಚ್ನಲ್ಲಿ ಕೂ ಅನ್ನು ಪ್ರಾರಂಭಿಸಲಾಗಿತ್ತು. ಜೊತೆಗೆ ಇದು ಡಿಜಿಟಲ್ ಇಂಡಿಯಾ ಆತ್ಮಾ ನಿರ್ಭರ್ ಭಾರತ್ ಇನ್ನೋವೇಟ್ ಚಾಲೆಂಜ್ ಅನ್ನು ಗೆದ್ದುಕೊಂಡಿದೆ. ಇದು ವಿಶ್ವ ದರ್ಜೆಯ ಅಪ್ಲಿಕೇಶನ್ಗಳಾಗುವ ಸಾಮರ್ಥ್ಯವನ್ನು ಹೊಂದಿರುವ ಅತ್ಯುತ್ತಮ ಭಾರತೀಯ ಅಪ್ಲಿಕೇಶನ್ಗಳಲ್ಲಿ ಒಂದಾಗಿದೆ. ಕೂ ವೆಬ್ಸೈಟ್ನ ‘ಕುರಿತು' ವಿಭಾಗದ ಪ್ರಕಾರ ಭಾರತೀಯ ಬಳಕೆದಾರರಿಗೆ ಸ್ಥಳೀಯ ಭಾಷೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಅವಕಾಶ ನೀಡುವುದು ಈ ಅಪ್ಲಿಕೇಶನ್ನ ಮುಖ್ಯ ಉದ್ದೇಶವಾಗಿದೆ.
ಇನ್ನು ಭಾರತದ ಕೇವಲ 10% ಜನರು ಇಂಗ್ಲಿಷ್ ಮಾತನಾಡುತ್ತಾರೆ. ಭಾರತದಲ್ಲಿ ಸುಮಾರು 1 ಬಿಲಿಯನ್ ಜನರಿಗೆ ಇಂಗ್ಲಿಷ್ ಗೊತ್ತಿಲ್ಲ. ಬದಲಾಗಿ ಅವರು ಭಾರತದ 100 ರ ಭಾಷೆಗಳಲ್ಲಿ ಒಂದನ್ನು ಮಾತನಾಡುತ್ತಾರೆ. ಅವರು ಈಗ ಸ್ಮಾರ್ಟ್ಫೋನ್ಗಳಿಗೆ ಪ್ರವೇಶವನ್ನು ಪಡೆಯುತ್ತಿದ್ದಾರೆ ಮತ್ತು ಅವರ ಭಾಷೆಯಲ್ಲಿ ಇಂಟರ್ನೆಟ್ ಅನ್ನು ಇಷ್ಟಪಡುತ್ತಾರೆ. ಇದು ರಾಜ್ಯದಿಂದ ರಾಜ್ಯಕ್ಕೆ ಬದಲಾಗುತ್ತಿದೆ. ಇದರಿಂದ ಹೆಚ್ಚಿನ ಜನರು ಟ್ವಿಟರ್ ಬಳಸಲು ಭಾಷೆಯ ಸಮಸ್ಯೆ ಎದುರಾಗಬಹುದು. ಇದನ್ನು ನಿವಾರಿಸುವ ಹಾಗೂ ಭಾರತೀಯರ ಧ್ವನಿಯನ್ನು ಕೇಳುವ ಪ್ರಯತ್ನವೇ ಕೂ ಅಪ್ಲಿಕೇಶನ್ ಉದ್ದೇಶವಾಗಿದೆ. ಇನ್ನು ಈ ಅಪ್ಲಿಕೇಶನ್ ಆಂಡ್ರಾಯ್ಡ್ ಮತ್ತು ಐಒಎಸ್ನಲ್ಲಿ ಉಚಿತವಾಗಿ ಲಭ್ಯವಿದೆ, ಮತ್ತು ವೆಬ್ಸೈಟ್ ಇದೆ ಮತ್ತು ಇಲ್ಲಿ ನೀವು ಫೀಡ್ ಅನ್ನು ಪರಿಶೀಲಿಸಬಹುದು.

''ಕೂ'' ಏಕೆ ಏಕಾಏಕಿ ಸುದ್ದಿಯಲ್ಲಿದೆ?
ಭಾರತ ಸರ್ಕಾರ ಮತ್ತು ಟ್ವಿಟರ್ ನಡುವೆ ನಡೆಯುತ್ತಿರುವ ಭಿನ್ನಾಭಿಪ್ರಾಯದ ಸಂದರ್ಭದಲ್ಲಿ ಕೂ ಅಪ್ಲಿಕೇಶನ್ ಸದ್ದು ಮಾಡುತ್ತಿದೆ. ಅದರಲ್ಲೂ ಹೋಂಗ್ರೋನ್ ಮೈಕ್ರೋಬ್ಲಾಗಿಂಗ್ ಪ್ಲಾಟ್ಫಾರ್ಮ್ಗೆ ಸೇರುವ ಬಗ್ಗೆ ಕೇಂದ್ರ ಸಚಿವ ಪಿಯೂಷ್ ಗೋಯಲ್ ಟ್ವೀಟ್ ಮಾಡಿದ ನಂತರ ಕೂ ಅಪ್ಲಿಕೇಶನ್ ಮುನ್ನಲೆಗೆ ಬಂದಿದೆ. ಸದ್ಯ ದೆಹಲಿ ಗಡಿಯಲ್ಲಿ ಪ್ರತಿಭಟನೆಗಳ ಬಗ್ಗೆ ತಪ್ಪು ಮಾಹಿತಿ ಮತ್ತು ಪ್ರಚೋದನಕಾರಿ ವಿಷಯವನ್ನು ಹರಡುತ್ತಿದೆ ಎಂದು ಹೇಳಿರುವ 1,000 ಕ್ಕೂ ಹೆಚ್ಚು ಖಾತೆಗಳನ್ನು ತೆಗೆದುಹಾಕುವಂತೆ ಕೇಂದ್ರ ಸರ್ಕಾರ ಟ್ವಿಟರ್ಗೆ ತಿಳಿಸಿದೆ. ಟ್ವಿಟರ್ ಇದಕ್ಕೆ ಒಪ್ಪಿಕೊಂಡಿಲ್ಲ, ಮಾಧ್ಯಮ ಸಂಸ್ಥೆಗಳು, ಪತ್ರಕರ್ತರು, ಕಾರ್ಯಕರ್ತರು ಮತ್ತು ರಾಜಕಾರಣಿಗಳಿಗೆ ಸಂಬಂಧಿಸಿದ ಖಾತೆಗಳ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿತ್ತು. ಇದು ಇದೀಗ ಕೂ ಅಪ್ಲಿಕೇಶನ್ ಅನ್ನು ಮುನ್ನಲೆಗೆ ತಂದಿದೆ.

ಕೂ ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡುವುದು ಹೇಗೆ?
ಕೂ ಎಂಬುದು ಆಂಡ್ರಾಯ್ಡ್ ಮತ್ತು ಐಒಎಸ್ ಎರಡರಲ್ಲೂ ಲಭ್ಯವಿರುವ ಉಚಿತ ಅಪ್ಲಿಕೇಶನ್ ಆಗಿದೆ. ಪರ್ಯಾಯವಾಗಿ, ಬಳಕೆದಾರರು Google Play ಗೆ ತೆರಳಿ "ಕೂ" ಅಪ್ಲಿಕೇಶನ್ಗಾಗಿ ಹುಡುಕಬಹುದು. ಅಪ್ಲಿಕೇಶನ್ಗೆ ಗೂಗಲ್ ಪ್ಲೇನಲ್ಲಿ ""Koo: Connect with Indians in Indian Languages" ಎಂದು ಹೆಸರಿಸಲಾಗಿದೆ. ಇದನ್ನು ಆಪ್ ಸ್ಟೋರ್ನಲ್ಲಿ ಬೊಂಬಿನೇಟ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್ನೊಂದಿಗೆ ಒದಗಿಸುವವರಾಗಿ "ಕೂ" ಎಂದು ಹೆಸರಿಸಲಾಗಿದೆ. ನೀವು ವೆಬ್ಸೈಟ್ಗೆ ಹೋಗಬಹುದು ಮತ್ತು ಡೌನ್ಲೋಡ್ ಲಿಂಕ್ಗೆ ಮರುನಿರ್ದೇಶಿಸಲು ಗೂಗಲ್ ಪ್ಲೇ ಅಥವಾ ಆಪ್ ಸ್ಟೋರ್ ಡೌನ್ಲೋಡ್ ಆಯ್ಕೆಗಳ ಮೇಲೆ ಕ್ಲಿಕ್ ಮಾಡಬಹುದು.

ಕೂ ಅಪ್ಲಿಕೇಶನ್ ವಿಶೇಷತೆ ಏನು?
ಕೂ ಟ್ವಿಟರ್ಗೆ ಹೋಲುವ ಫೀಚರ್ಸ್ಗಳನ್ನು ಹೊಂದಿದೆ. ಇದು ಬಳಕೆದಾರರನ್ನು ವ್ಯಕ್ತಿಗಳನ್ನು ಅನುಸರಿಸಲು ಮತ್ತು ಫೀಡ್ ಮೂಲಕ ಬ್ರೌಸ್ ಮಾಡಲು ಅನುಮತಿಸುತ್ತದೆ. ಬಳಕೆದಾರರು ಪಠ್ಯದಲ್ಲಿ ಸಂದೇಶಗಳನ್ನು ಬರೆಯಬಹುದು ಅಥವಾ ಅವುಗಳನ್ನು ಆಡಿಯೋ ಅಥವಾ ವಿಡಿಯೋ ಸ್ವರೂಪಗಳಲ್ಲಿ ಹಂಚಿಕೊಳ್ಳಬಹುದು. ಇದು ಕನ್ನಡ, ತಮಿಳು, ತೆಲುಗು, ತಮಿಳು ಮತ್ತು ಇಂಗ್ಲಿಷ್ ಭಾಷೆಯ ಆಯ್ಕೆಗಳನ್ನು ಹೊಂದಿದೆ, ಇತರ ಭಾಷೆಗಳಲ್ಲಿಯೂ ಸಹ ಶೀಘ್ರದಲ್ಲೇ ಬರಲಿದೆ. ಜನರು ತಮ್ಮ ಸ್ಥಳೀಯ ಭಾಷೆಗಳಲ್ಲಿ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಸಹ ಇದು ಅನುಮತಿಸುತ್ತದೆ. ಅಲ್ಲದೆ ಇದರಲ್ಲಿ ಸಂದೇಶಗಳನ್ನು 400 ಅಕ್ಷರಗಳನ್ನು ಬರೆಯಬಹುದು ಮತ್ತು ಅವುಗಳನ್ನು "ಕೂ" ಎಂದು ಕರೆಯಲಾಗುತ್ತದೆ. ಒಂದು ನಿರ್ದಿಷ್ಟ ಭಾಷೆಯಲ್ಲಿ ಎಲ್ಲಾ ವಿಷಯವನ್ನು ತೋರಿಸುವ ಭಾಷಾ ಸಮುದಾಯಗಳಿವೆ.
This News Article is a Copy of GIZBOT
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm