ಬ್ರೇಕಿಂಗ್ ನ್ಯೂಸ್
11-02-21 03:10 pm Source: GIZBOT Manthesh ಡಿಜಿಟಲ್ ಟೆಕ್
ಸದ್ಯ ವ್ಯಾಲೆಂಟೈನ್ಸ್ ವೀಕ್ ಇದ್ದು, ಪ್ರೇಮಿಗಳ ಪಾಲಿಗೆ ಹಬ್ಬದ ವಾತಾವರಣ ಅನಿಸಿದೆ. ಈ ನಿಟ್ಟಿನಲ್ಲಿ ಬಹುತೇಕ ಜನರು ಪ್ರೇಮಿಗಳ ದಿನಾಚರಣೆಗಾಗಿ ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆಗಳನ್ನು ಹುಡುಕಲು ಇಂಟರ್ನೆಟ್ನಲ್ಲಿ ಸಮಯ ವ್ಯಯಸುತ್ತಿದ್ದಾರೆ. ಪ್ರಸ್ತುತ ವ್ಯಾಲೇಂಟನ್ಸ್ ಗಿಫ್ಟ್ಗೆ ಸಂಬಂಧಿಸಿದ ದುರುದ್ದೇಶಪೂರಿತ ಫಿಶಿಂಗ್ ಮೇಲ್ ಅಭಿಯಾನಗಳ ಸಂಖ್ಯೆಯಲ್ಲಿ ಗಮನಾರ್ಹ ಏರಿಕೆ ಕಂಡುಬಂದಿದೆ ಎಂದು ಸೈಬರ್ ಸೆಕ್ಯುರಿಟಿ ಸಂಸ್ಥೆ ಚೆಕ್ಪಾಯಿಂಟ್ ರಿಸರ್ಚ್ ತಿಳಿಸಿದೆ.
ಹೌದು, ಪ್ರೇಮಿಗಳ ದಿನದಂದು ಜನರು ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ನೀಡಲು ಇಂಟರ್ನೆಟ್ನಲ್ಲಿ ಜಾಲಾಡುತ್ತಿರುತ್ತಾರೆ. ಬಳಕೆದಾರರನ್ನು ಗುರಿಯಾಗಿಸಿಕೊಂಡು ವ್ಯಾಲೇಂಟನ್ಸ್ ಉಡುಗೊರೆ ನೆಪದಲ್ಲಿ ದುರುದ್ದೇಶಪೂರಿತ ಫಿಶಿಂಗ್ ಮೇಲ್ ಅಭಿಯಾನ ಹೆಚ್ಚಾಗಿ ಆಗಿದೆ. ಜನವರಿ ದ್ವಿತೀಯಾರ್ಧದಿಂದ ಪ್ರತಿ ವಾರ 400ಕ್ಕೂ ಹೆಚ್ಚು ಪ್ರೇಮಿಗಳ ದಿನದ ವಿಷಯದ ಫಿಶಿಂಗ್ ಮೇಲ್ಗಳನ್ನು ಗುರುತಿಸಲಾಗಿದೆ

ಇದಲ್ಲದೆ, ದುರುದ್ದೇಶಪೂರಿತ ಪ್ರೇಮಿಗಳ ದಿನದ ಡೊಮೇನ್ಗಳಲ್ಲಿ ಏರಿಕೆ ಆಗಿದೆ. ಜನವರಿಯುದ್ದಕ್ಕೂ, ವ್ಯಾಲೆಂಟೈನ್ಸ್ ಡೇ ವಿಷಯದ ಕುರಿತಾಗಿ ಹೊಸ ಡೊಮೇನ್ಗಳ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿದೆ. 23,000 ಹೊಸ ಡೊಮೇನ್ಗಳಲ್ಲಿ, 0.5 ಪ್ರತಿಶತ (115) ದುರುದ್ದೇಶಪೂರಿತವೆಂದು ಕಂಡುಬಂದಿದೆ ಮತ್ತು 1.8 ಪ್ರತಿಶತ (414) ಅನುಮಾನಾಸ್ಪದವೆಂದು ಕಂಡುಬಂದಿದೆ ಎಂದು ಚೆಕ್ ಪಾಯಿಂಟ್ ರಿಸರ್ಚ್ ಹೇಳಿದೆ.

ಈ ಫಿಶಿಂಗ್ ಇಮೇಲ್ಗಳಲ್ಲಿ ಹೆಚ್ಚಿನವು ಸಂಭಾವ್ಯ ಖರೀದಿದಾರರನ್ನು ಗುರಿಯಾಗಿಸುವುದರ ಮೇಲೆ ಕೇಂದ್ರೀಕರಿಸಿದೆ. ಅನೇಕ ಸಂದರ್ಭಗಳಲ್ಲಿ ಹಿಂದಿನ ಫಿಶಿಂಗ್ ಪ್ರಯತ್ನಗಳಿಂದ ಥೀಮ್ಗಳು ಮತ್ತು ವೆಬ್ಪುಟಗಳನ್ನು ಮರುಬಳಕೆ ಮಾಡಿವೆ. ವ್ಯಾಲೆಂಟೈನ್ಸ್ ವೀಕ್ನ ಈ ಸಂದರ್ಭದಲ್ಲಿ ಫಿಶಿಂಗ್ ಮೇಲ್ ಅಭಿಯಾನದ ಮೂಲಕ ಬಳಕೆದಾರರನ್ನು ವಂಚಿಸುವ ಸಾಧ್ಯತೆಗಳು ಅಧಿಕವಾಗಿವೆ ಎಂದು ಚೆಕ್ ಪಾಯಿಂಟ್ ವರದಿಯಲ್ಲಿ ಹೇಳಿದೆ.

ಹಲವಾರು ಬಳಕೆದಾರರು ಈ ಹಿಂದೆ ಫಿಶಿಂಗ್ ದಾಳಿಗೆ ಬಲಿಯಾಗಿ, ಮಹತ್ತರ ಡೇಟಾ, ಹಣ ಕಳೆದುಕೊಳ್ಳಲು ಕಾರಣವಾಗಿದೆ. ಹೀಗಾಗಿ ಬಳಕೆದಾರರು ಆನ್ಲೈನ್ನಲ್ಲಿ ಉಡುಗೊರೆಗಳಿಗಾಗಿ ಶಾಪಿಂಗ್ ಮಾಡುವಾಗ, ಶಾಪಿಂಗ್ ಮಾಡುತ್ತಿರುವ ಪ್ಲಾಟ್ಫಾರ್ಮ್ ಅನ್ನು ಯಾವಾಗಲೂ ದೃಢೀಕರಿಸಿಕೊಳ್ಳಿ. ಹಾಗೆಯೇ ಇಮೇಲ್ಗಳು ಮತ್ತು ವಾಟ್ಸಾಪ್ನಲ್ಲಿ ಸ್ವೀಕರಿಸುವ ರಿಯಾಯಿತಿ ಕೂಪನ್ಗಳು ಮತ್ತು ಉಡುಗೊರೆ ಲಿಂಕ್ಗಳ ಬಗ್ಗೆ ಜಾಗರೂಕರಾಗಿರಿ.
This News Article is a Copy of GIZBOT
11-09-26 02:59 pm
HK News Staffer
ಬರಗಾಲದ ಸಂಕಷ್ಟ ನಡುವೆ ನೂರು ದಿನಗಳ ವೈಭವೀಕರಣ ಬೇಕೇ?...
10-09-26 05:10 pm
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
11-09-26 03:51 pm
HK News Staffer
DC A B Ibrahim, SIR Notice: ಹೆಸರಿನಲ್ಲಿ ತಪ್ಪಿದ...
11-09-26 01:56 pm
ಮಂಗಳೂರು- ಬೆಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರ...
10-09-26 09:24 pm
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm