ಬ್ರೇಕಿಂಗ್ ನ್ಯೂಸ್
06-10-20 10:28 am Bangalore Correspondent ಕರ್ನಾಟಕ
ಬೆಂಗಳೂರು, ಅಕ್ಟೋಬರ್ 06: ಡ್ರಗ್ ಪೆಡ್ಲರ್ ನೀಡಿರುವ ಮಾಹಿತಿ ಬೆನ್ನತ್ತಿದ ಸಿಸಿಬಿ ಅಧಿಕಾರಿಗಳು ಮಾಜಿ ಡಾನ್, ಇತ್ತೀಚೆಗಷ್ಟೇ ನಿಧನರಾಗಿರುವ ಬಿಡದಿಯ ಮುತ್ತಪ್ಪ ರೈ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ.
ಬೆಳ್ಳಂಬೆಳಗ್ಗೆ ಏಳು ಕಾರುಗಳಲ್ಲಿ ಆಗಮಿಸಿರುವ ಸಿಸಿಬಿ ಅಧಿಕಾರಿಗಳು, ರಾಮನಗರದ ಬಿಡದಿ ಬಳಿ ಇರುವ ಮುತ್ತಪ್ಪ ರೈ ಮಗ ರಿಕ್ಕಿ ರೈ ನಿವಾಸಕ್ಕೆ ದಾಳಿ ನಡೆಸಿದ್ದಾರೆ. ಸರ್ಚ್ ವಾರೆಂಟ್ ಪಡೆದೇ ಬೆಳಗ್ಗೆ 6 ಗಂಟೆ ವೇಳೆಗೆ ಸಿಸಿಬಿ ಅಧಿಕಾರಿಗಳು ಮನೆಗೆ ಆಗಮಿಸಿದ್ದರು. ಈ ವೇಳೆ, ನಿವಾಸದ ಹೊರಗೆ ಕೇವಲ ಕೆಲಸಗಾರರು ಅಷ್ಟೇ ಇದ್ದರು. ನಾವು ಪೊಲೀಸರು, ಯಾರನ್ನು ಒಳಗೆ ಬಿಡಬೇಡಿ ಎಂದು ಸೆಕ್ಯುರಿಟಿ ಬಳಿ ಹೇಳಿ ಮನೆ ಒಳಗೆ ಹೋಗಿರುವ ಅಧಿಕಾರಿಗಳು, ಸರ್ಚ್ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗೆ ಬಂಧಿತನಾದ ಡ್ರಗ್ ಪೆಡ್ಲರ್ ನೀಡಿರುವ ಮಾಹಿತಿ ಮೇರೆಗೆ ರಿಕ್ಕಿ ರೈ ಮನೆ ಮೇಲೆ ದಾಳಿ ನಡೆದಿದೆ ಎನ್ನಲಾಗ್ತಿದೆ. ಇದಕ್ಕೂ ಮುನ್ನ ರಿಕ್ಕಿ ರೈಗೆ ಸಿಸಿಬಿ ಪೊಲೀಸರು ನೋಟಿಸ್ ನೀಡಿದ್ದರು ಎನ್ನಲಾಗುತ್ತಿದೆ.
ಮನೆಯಲ್ಲಿದ್ದ ರಿಕ್ಕಿ ರೈಯನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಡ್ರಗ್ ನಂಟಿನಲ್ಲಿ ತಲೆಮರೆಸಿಕೊಂಡಿರುವ ಆದಿತ್ಯ ಆಳ್ವಾ ಜೊತೆಗೆ ರಿಕ್ಕಿ ರೈ ನಂಟು ಹೊಂದಿರುವ ಹಿನ್ನೆಲೆಯಲ್ಲಿ ಪೊಲೀಸರು ಶೋಧ ನಡೆಸಿದ್ದಾರೆ. ಆದಿತ್ಯ ಆಳ್ವಾ ಎಸ್ಕೇಪ್ ಆಗಲು ರಿಕ್ಕಿ ರೈ ಸಹಾಯ ಮಾಡಿದ್ದ ಎನ್ನಲಾಗುತ್ತಿದೆ.
ಸಿಸಿಬಿಯ ಎಸಿಪಿ ವೇಣುಗೋಪಾಲ್ ನೇತೃತ್ವದಲ್ಲಿ ದಾಳಿ ನಡೆಸಲಾಗಿತ್ತು. ಡ್ರಗ್ಸ್ ಕೇಸ್ನಲ್ಲಿ ಮುತ್ತಪ್ಪ ರೈ ಪುತ್ರನನ್ನು ಫಿಕ್ಸ್ ಮಾಡುತ್ತಾರೆಯೇ ಅಥವಾ ಮನೆಯ ಒಳಗೆ ಡ್ರಗ್ ಪತ್ತೆಯಾಗಿದೆಯೇ ಅನ್ನೋದು ಗೊತ್ತಾಗಿಲ್ಲ. ಡ್ರಗ್ ಪೆಡ್ಲರ್ ಮುತ್ತಪ್ಪ ರೈ ನಿವಾಸಕ್ಕೆ ಡ್ರಗ್ ಪೂರೈಕೆ ಮಾಡುತ್ತಿದ್ದ ಬಗ್ಗೆ ಬಾಯಿಬಿಟ್ಟಿದ್ದು ಅದೇ ವಿಚಾರದಲ್ಲಿ ಪೊಲೀಸರು ರೈಗೆ ಸೇರಿದ ಬಿಡದಿಯ ತೋಟದ ಮನೆ ಮತ್ತು ಬೆಂಗಳೂರಿನ ವಯ್ಯಾಲಿಕಾವಲ್ ಮನೆಯನ್ನು ಸರ್ಚ್ ನಡೆಸಿದ್ದಾರೆ.
25-04-24 02:19 pm
HK News Desk
Mallikarjun Kharge speech at Kalaburgi: ಮತ ಹಾ...
24-04-24 11:14 pm
ಸಾವಿನ ಮನೆಯಲ್ಲಿ ರಾಜಕಾರಣ ಮಾಡೋದು ಸರಿಯಲ್ಲ ; ಆರೋಪಿ...
24-04-24 07:10 pm
Priyanka Gandhi, PM Modi, Chitradurga: ದೊಡ್ಡ...
23-04-24 10:46 pm
Eshwarappa slams Vijayendra, BJP: ಬಿಜೆಪಿ ಬಗ್ಗ...
23-04-24 09:24 pm
24-04-24 05:01 pm
HK News Desk
Pm Modi, Muslims: ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ...
22-04-24 10:37 pm
ಮದುವೆ ಮುಗಿಸಿ ವಾಪಾಸ್ ಆಗುವ ವೇಳೆ ಭೀಕರ ಅಪಘಾತ ; ಓ...
21-04-24 03:23 pm
Surya Tilak, Ram Lallas forehead in Ayodhya:...
17-04-24 08:42 pm
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
25-04-24 12:59 pm
Mangalore Correspondent
Subramanya Dhareshwara: ಯಕ್ಷಗಾನ ರಂಗದಲ್ಲಿ ಕ್ರಾ...
25-04-24 11:52 am
Brijesh Chowta, Mangalore: ಕಾಂಗ್ರೆಸಿಗೆ ಮತ ನೀಡ...
24-04-24 10:39 pm
Mangalore Brijesh Chowta, George Fernandes: ಕ...
24-04-24 10:00 pm
Congress candidate Padmaraj, Mangalore ಪಂಪ್'ವ...
24-04-24 08:31 pm
25-04-24 12:19 pm
Bangalore Correspondent
Glide touist bus, Mangalore, crime: ಬೆಂಗಳೂರು...
24-04-24 10:48 pm
ಗಿಫ್ಟ್ ವಿಚಾರದಲ್ಲಿ ಕಿರಿಕ್ ; ಅಣ್ಣ ತಂಗಿಯ ಮದುವೆಗೆ...
24-04-24 05:39 pm
Trading scam, Online fraud, Crime: ದುಪ್ಪಟ್ಟು...
24-04-24 03:41 pm
Bangalore crime, woman murder, sex: ಡ್ರೈವಿಂಗ್...
24-04-24 12:53 pm