ಬ್ರೇಕಿಂಗ್ ನ್ಯೂಸ್
01-03-26 04:56 pm HK News Desk ಕರ್ನಾಟಕ
ಹುಬ್ಬಳ್ಳಿ, ಮಾರ್ಚ್ 1: ರಾಜ್ಯದಲ್ಲಿ ಹಿಂದೂ ಸಮಾಜ ಅನಾಥವಾಗಿದೆ. ಮುಸಲ್ಮಾನರಿಗೆ ಕರ್ನಾಟಕ ರಾಜ್ಯ ಸ್ವರ್ಗ, ಹಿಂದುಗಳಿಗೆ ನರಕವಾಗಿದೆ. ಮುಂದಿನ ಚುನಾವಣೆ ಹಿಂದುತ್ವದ ಮೇಲೆ ಆಗುತ್ತೆ, ಕೇಸರಿ ಪಡೆ ಗೆಲ್ಲುತ್ತೆ ಎಂದು ಮಾಜಿ ಡಿಸಿಎಂ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.
ರಾಜ್ಯದಲ್ಲಿ ಸಿಎಂ, ಡಿಸಿಎಂ ಕುವೆಂಪು ಮಾತನ್ನ ಪ್ರಸ್ತಾಪ ಮಾಡ್ತಾರೆ. ಸರ್ವಜನಾಂಗ ಶಾಂತಿಯ ತೋಟ ಅಂತಾರೆ. ಆದರೆ ಮದ್ದೂರು, ನಾಗಮಂಗಲ, ಬೆಂಗಳೂರು, ದಾವಣಗೆರೆ, ಹುಬ್ಬಳ್ಳಿ, ಶಿವಮೊಗ್ಗಗಳಲ್ಲಿ ಗಲಾಟೆಗಳಾದವು. ಬಾಗಲಕೋಟೆಯಲ್ಲಿ ಶಿವಾಜಿ ಮೆರವಣಿಗೆಯಲ್ಲಿ ಕಲ್ಲು, ಚಪ್ಪಲಿಯಿಂದ ಹೊಡೀತಾರೆ. ಸಿಎಂ, ಡಿಸಿಎಂ ಹಾಗೂ ಗೃಹಮಂತ್ರಿಗಳು ಕಠಿಣ ಕ್ರಮ ಕೈಗೊಳ್ತೇವೆ ಅಂತ ಹೇಳ್ತಾರೆ. ಎಸ್ಪಿಗೆ ಮಸೀದಿಯಿಂದ ಬಂದ ಕಲ್ಲು ಬಿದ್ದು ರಕ್ತ ಬಂದಿದೆ. ಅವರನ್ನ ಕೂಡಲೇ ಬಂಧನ ಮಾಡಬಹುದಿತ್ತು. ಆದರೆ ಇವರಿಗೆ ಐಪಿಎಸ್ ಕಲಿತಿದ್ದೇನೆಂಬ ಸ್ವಾಭಿಮಾನ ಇರುತ್ತಿದ್ದರೆ ಅವರನ್ನು ಬಂಧಿಸಬೇಕಿತ್ತು. ಕಾಂಗ್ರೆಸ್ ಕಾರಣದಿಂದ ಮಾಡಿಲ್ಲ.
ಮಸೀದಿ ಇರೋದು ನಮಾಜ್ ಮಾಡೋಕೆ, ಅಲ್ಲಿ ಕಲ್ಲು-ಚಪ್ಪಲಿ ಹೇಗೆ ಬಂತು? ಅವತ್ತೇ ಮಸೀದಿಯನ್ನ ಸೀಜ್ ಮಾಡಿ ಮುಲ್ಲಾನನ್ನ ಅರೆಸ್ಟ್ ಮಾಡಬೇಕಿತ್ತು. ಮಸೀದಿಯಲ್ಲಿ ಆಯುಧಗಳಿರೋದು ಗೊತ್ತಿದ್ದೂ ಪೊಲೀಸರು ಸುಮ್ಮನಿದ್ರಾ.. ರಾಷ್ಟ್ರ ದ್ರೋಹಿ ಚಟುವಟಿಕೆ ಮಾಡುವ ಕೆಲವು ಮುಸಲ್ಮಾನರ ಮೇಲೆ ಕ್ರಮ ಕೈಗೊಂಡ್ರೆ ಇಂತಹ ಕೆಲಸ ಆಗೋದಿಲ್ಲ. ನಾವೇನೆ ಮಾಡಿದ್ರು ಕಾಂಗ್ರೆಸ್ ಸರ್ಕಾರದಿಂದ ರಕ್ಷಣೆ ಸಿಗುತ್ತದೆ ಎಂದು ಇಂತಹ ಘಟನೆಗಳು ನಡೀತಿವೆ. ಘಟನೆ ನಡೆದಾಗ 7-8 ಜನರನ್ನ ಅರೆಸ್ಟ್ ಮಾಡಿದ್ದಾರೆ. ಅವರು ಮತ್ತೆ ಜಾಮೀನು ಪಡೆದು ಹೊರಬಂದು ಅದನ್ನೇ ಮಾಡ್ತಾರೆ.
ಪಾಕಿಸ್ತಾನ್ ಜಿಂದಾಬಾದ್ ಅಂತ ಎಷ್ಟು ಜನ ಕೂಗಿದ್ದಾರೆ. ಒಬ್ಬರಾದ್ರೂ ಜೈಲಲ್ಲಿದ್ದಾರಾ...ಮುಂದಿನ ಚುನಾವಣೆ ಹಿಂದುತ್ವ, ರಾಷ್ಟ್ರೀಯತೆ ಮೇಲೆ ಆಗುತ್ತೆ. ಹಿಂದುತ್ವವನ್ನು ಉಳಿಸಿದವರು ಚುನಾವಣೆಯಲ್ಲಿ ಗೆಲ್ಲುತ್ತಾರೆ. ಹಿಂದುಗಳು ಏನು ತಪ್ಪು ಮಾಡಿದ್ದಾರೆ? ಶಾಂತಿಯಿಂದ ಇರೋದೆ ತಪ್ಪಾ? ರಾಜ್ಯ ಸರ್ಕಾರ ತನ್ನ ಮನಸ್ಥಿತಿಯನ್ನು ಬದಲಾವಣೆ ಮಾಡಿಕೊಳ್ಳಬೇಕು. ರಾಷ್ಟ್ರದ್ರೋಹಿ, ಗೂಂಡಾಗಳನ್ನು ಬಿಗಿ ಮಾಡಬೇಕು. ಪೊಲೀಸ್ ಇಲಾಖೆಯ ಮನಸ್ಥಿತಿಯೂ ಬದಲಾವಣೆ ಆಗಬೇಕು.
ಬಾಗಲಕೋಟೆಯಲ್ಲಿ ಎಸ್ಪಿ ಭಯಪಟ್ಟು ಮೇಲಿಂದ ಸಣ್ಣ ಎರಡು ಕಲ್ಲು ಬಿಸಾಕಿದ್ರು ಅಂತ ಹೇಳ್ತಾರೆ. ರಾಜ್ಯ ಸರ್ಕಾರದ ಮನಸ್ಥಿತಿಯೇ, ಪೊಲೀಸರದ್ದೂ ಮನಸ್ಥಿತಿಯಾಗಿದೆ. ಕಾಂಗ್ರೆಸ್ ಸರ್ಕಾರ, ಪೊಲೀಸ್ ಇಲಾಖೆ, ಮುಸ್ಲಿಮರ ಮನಸ್ಥಿತಿ ಬದಲಾವಣೆ ಆಗಬೇಕು. ರಾಜ್ಯದಲ್ಲಿ ಕಾಂಗ್ರೆಸಿನ ಕೊನೆಯ ಸರ್ಕಾರ ಆಗುವಂತೆ ಅವರೇ ಮಾಡಿಕೊಳ್ಳುತ್ತಿದ್ದಾರೆ. ಮುಸಲ್ಮಾನರು ನೆಮ್ಮದಿಯಿಂದ ಇರಬೇಕು, ಹಿಂದುಗಳು ದುಃಖದಲ್ಲಿರಬೇಕು. ಇದು ನಿಮ್ಮ ಪಾಲಿಸಿನಾ? ಎಂದು ಈಶ್ವರಪ್ಪ ಪ್ರಶ್ನಿಸಿದ್ದಾರೆ.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 02:07 pm
HK News Staffer
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
Mangalore Railway, Train: ಕಾಲು ಜಾರಿ ರೈಲಿನಡಿ ಬ...
11-08-26 10:23 pm
14-08-26 09:09 pm
HK News Staffer
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am
Vasanth Bernard, Fraud, Priyadarshini Society...
13-08-26 04:29 pm
ನಿರ್ಮಾಣ ಹಂತದ ಕಟ್ಟಡದಿಂದ ಕೆಳಕ್ಕೆ ಬಿದ್ದ ವಲಸೆ ಕಾರ...
13-08-26 03:22 pm