ಬ್ರೇಕಿಂಗ್ ನ್ಯೂಸ್
08-10-20 01:46 pm Bangalore Correspondent ಕರ್ನಾಟಕ
ಬೆಂಗಳೂರು, ಅಕ್ಟೋಬರ್ 08: ದೆಹಲಿಯಿಂದ ಬೆಂಗಳೂರಿಗೆ ಬರುತ್ತಿದ್ದ ಇಂಡಿಗೋ ವಿಮಾನದಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದಾರೆ. ನಿನ್ನೆ ರಾತ್ರಿ 7.40ರ ಸುಮಾರಿಗೆ ಘಟನೆ ನಡೆದಿದ್ದು, ಹೆರಿಗೆ ನೋವು ಕಾಣಿಸಿಕೊಂಡ ಮಹಿಳೆಯನ್ನು ಸಹ ಪ್ರಯಾಣಿಕರಾಗಿದ್ದ ಗೈನಕಾಲಜಿಸ್ಟ್ ವೈದ್ಯರೊಬ್ಬರು ಮತ್ತು ಜೊತೆಗಿದ್ದ ಮಹಿಳೆಯರು ಸೇರಿ ಹೆರಿಗೆ ಮಾಡಿಸಿದ್ದಾರೆ.
ಮಹಿಳೆಗೆ 9 ತಿಂಗಳು ಪೂರ್ತಿಯಾಗಿರಲಿಲ್ಲ. ಆದರೆ, ಹೆರಿಗೆ ಹತ್ತಿರ ಬಂದಿರುವ ವೇಳೆ ಗರ್ಭಿಣಿಯರನ್ನು ವಿಮಾನದಲ್ಲಿ ಪ್ರಯಾಣಿಸಲು ಅನುಮತಿ ನೀಡುವುದಿಲ್ಲ. ವಿಮಾನ ನಿಲ್ದಾಣದ ಅಧಿಕಾರಿಗಳು ಇಲ್ಲಿ ಹೇಗೆ ಅವಕಾಶ ನೀಡಿದ್ದಾರೆ ಎಂದು ವೈದ್ಯರು ಪ್ರಶ್ನೆ ಮಾಡಿದ್ದಾರೆ. ಮಗು ಮತ್ತು ತಾಯಿ ಆರೋಗ್ಯದಲ್ಲಿದ್ದು, 8 ಗಂಟೆ ಸುಮಾರಿಗೆ ವಿಮಾನ ಬೆಂಗಳೂರು ನಿಲ್ದಾಣದಲ್ಲಿ ಲ್ಯಾಂಡ್ ಆಗುತ್ತಿದ್ದಂತೆ ತಾಯಿ, ಮಗುವನ್ನು ಆಂಬುಲೆನ್ಸ್ ಕರೆಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ವಿಮಾನ ಪ್ರಯಾಣ ಸಂದರ್ಭದಲ್ಲಿನ ಏರಿಳಿತದಿಂದಾಗಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು.
ವಿಮಾನದಲ್ಲಿ ಹೆರಿಗೆಯಾಗಿದ್ದರಿಂದ ಮಗುವಿಗೆ ಉಚಿತ ಪ್ರಯಾಣದ ಸೌಲಭ್ಯ ಸಿಕ್ಕಿದೆ. ಹೀಗಾಗಿ ಆ ಮಗುವಿಗೆ ಜೀವಮಾನ ಪೂರ್ತಿ ಉಚಿತ ವಿಮಾನ ಪ್ರಯಾಣದ ಅವಕಾಶ ನೀಡಬೇಕೆಂದು ಜಾಲತಾಣದಲ್ಲಿ ಕೆಲವರು ಟ್ವೀಟ್ ಮಾಡಿದ್ದಾರೆ. ಹಿಂದೊಮ್ಮೆ ಎರಡು ಬಾರಿ ಇಂತಹ ನಿದರ್ಶನ ಆಗಿತ್ತು. 2017ರಲ್ಲಿ ಸೌದಿ ಅರೇಬಿಯಾದಿಂದ ಭಾರತಕ್ಕೆ ಬರುತ್ತಿದ್ದ ಜೆಟ್ ಏರ್ವೇಸ್ ವಿಮಾನದಲ್ಲಿ ಮಹಿಳೆಗೆ ಹೆರಿಗೆ ಆಗಿತ್ತು. ಆ ಸಂದರ್ಭದಲ್ಲಿ ಜೆಟ್ ಏರ್ವೇಸ್ ವಿಮಾನ ಕಂಪೆನಿ, ಮಗುವಿನ ಜೀವಮಾನ ಪೂರ್ತಿ ಉಚಿತ ಪ್ರಯಾಣದ ಆಫರ್ ನೀಡಿತ್ತು. 20009ರಲ್ಲಿ ಏರ್ ಏಶ್ಯಾ ವಿಮಾನ ಕಂಪೆನಿ, ಮಲೇಶ್ಯಾದ ಮಹಿಳೆಯೊಬ್ಬಳು ಹೆರಿಗೆಯಾದ ಸಂದರ್ಭದಲ್ಲಿ ಮಗುವಿಗೆ ಇಂಥದ್ದೇ ಆಫರ್ ನೀಡಿತ್ತು.
29-05-25 10:21 pm
Bangalore Correspondent
Hassan Heart Attack, Death: ಹಾಸನದಲ್ಲಿ ಹೃದಯಾಘಾ...
29-05-25 03:34 pm
CM Siddaramaiah, B K Hariprasad, Mangalore Mu...
29-05-25 02:43 pm
COVID, African Swine Fever Bagalkote: ಕೊರೋನಾ...
29-05-25 02:19 pm
Ma Saleem, DG, IGP, Court: ಡಿಜಿ ಎಂ.ಎ.ಸಲೀಂ ಪ್ರ...
28-05-25 07:06 pm
26-05-25 11:34 pm
HK News Desk
ಭಯೋತ್ಪಾದನೆ ವಿರುದ್ಧ ಭಾರತದ ರಾಜತಾಂತ್ರಿಕ ಬಲವರ್ಧನೆ...
26-05-25 10:13 pm
Gujrath, ATS: ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ...
26-05-25 09:50 pm
ಪಾಕ್ ಐಎಸ್ಐಗೆ ದೇಶದ ಭದ್ರತೆ ಬಗ್ಗೆ ಸೂಕ್ಷ್ಮ ಮಾಹಿತಿ...
26-05-25 08:33 pm
Trump, Europe: ಟ್ರಂಪ್ ತೆರಿಗೆಯ ‘ಕದನ ವಿರಾಮ’ ; ಅ...
26-05-25 06:14 pm
29-05-25 10:51 pm
Mangalore Correspondent
Mangalore, Congress: ಕಾರ್ಯಕರ್ತರ ಸಭೆಯಲ್ಲಿ ಹೈಡ್...
29-05-25 10:40 pm
Anupam Agrawal IPS, CH Sudheer Kumar Reddy, M...
29-05-25 08:52 pm
Moodbidri Suicide, Mangalore: ಮೂಡುಬಿದ್ರೆ ; ವಿ...
28-05-25 11:16 pm
Mangalore Bantwal Murder, SDPI, Congress resi...
28-05-25 10:41 pm
29-05-25 11:04 pm
Mangalore Correspondent
Mangalore Crime, Konaje: ಮೊಂಟೆಪದವು ಕೆರೆಯಲ್ಲಿ...
29-05-25 07:59 pm
Mangalore Bantwal Abdul Rehman Murder, Arrest...
29-05-25 06:38 pm
Uppinangady, Blackmail, Goat Purchase, Puttur...
29-05-25 02:16 pm
Karkala, Chikkamagaluru: ನವಜಾತ ಶಿಶುವನ್ನು ಕಾರ್...
29-05-25 01:13 pm