ಬ್ರೇಕಿಂಗ್ ನ್ಯೂಸ್
16-11-22 01:57 pm Bangalore Correspondent ಕರ್ನಾಟಕ
ಬೆಂಗಳೂರು, ನ.16: ವಿದ್ವತ್ ಮೇಲೆ ಮೊಹಮ್ಮದ್ ನಲಪಾಡ್ ಹಲ್ಲೆ ಮಾಡಿದ ಪ್ರಕರಣದಲ್ಲಿ ಹೈಕೋರ್ಟ್ ನೀಡಿದ್ದ ತಡೆಯಾಜ್ಞೆಯ ದಿನಾಂಕ ವಿಸ್ತರಣೆ ಆಗಿಲ್ಲ. ಹೀಗಾಗಿ ಪ್ರಕರಣದ ತನಿಖೆಯನ್ನು ಮುಂದುವರಿಸುವಂತೆ ಸೆಷನ್ಸ್ ಕೋರ್ಟ್ ಆದೇಶ ಹೊರಡಿಸಿದೆ.
ವಿಶೇಷ ಅಭಿಯೋಜಕರಾಗಿ ಹಿರಿಯ ನ್ಯಾಯವಾದಿ ಎಂ.ಎಸ್. ಶ್ಯಾಮ್ ಸುಂದರ್ ಅವರ ಮುಂದುವರಿಕೆಗೆ ಸೆಷನ್ಸ್ ಕೋರ್ಟ್ ಅನುಮತಿ ನೀಡಿದೆ. ಆದರೆ ಇದಕ್ಕೆ ಪ್ರತಿಕ್ರಿಯಿಸಿದ ನಲಪಾಡ್ ಪರ ವಕೀಲರು, ಶ್ಯಾಮ್ ಸುಂದರ್ ಈಗ ಹಿರಿಯ ವಕೀಲರಾಗಿರುವ ಹಿನ್ನೆಲೆಯಲ್ಲಿ ಅವರು ಎಸ್ಪಿಪಿಯಾಗಿ ಮುಂದುವರಿಯುವಂತಿಲ್ಲ ಎಂದು ನ್ಯಾ.ನಟರಾಜ್ ಅವರಿದ್ದ ನ್ಯಾಯಪೀಠದಲ್ಲಿ ಆಕ್ಷೇಪ ವ್ಯಕ್ತಪಡಿಸಿದರು. ನಲಪಾಡ್ ಪರ ವಕೀಲರ ಆಕ್ಷೇಪ ತಳ್ಳಿಹಾಕಿದ ಕೋರ್ಟ್, ಸಾಕ್ಷ್ಯ ವಿಚಾರಣೆ ಮುಂದುವರಿಸಲು ವಿಚಾರಣಾ ನ್ಯಾಯಾಲಯಕ್ಕೆ ಆದೇಶ ನೀಡಿತು. ಇದರಿಂದಾಗಿ ನಲಪಾಡ್ಗೆ ಹಿನ್ನಡೆಯಾಗಿದ್ದು, ತನಿಖೆ ಎದುರಿಸುವ ಸಂಕಷ್ಟ ಸೃಷ್ಟಿಯಾಗಿದೆ.
ಇದು ಚುನಾವಣಾ ವರ್ಷ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಶಿವಾಜಿನಗರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಕ್ಕೆ ಮೊಹಮ್ಮದ್ ನಲಪಾಡ್ ಸಿದ್ಧತೆ ಮಾಡಿದ್ದಾರೆ. ಈಗ ವಿದ್ವತ್ ಹಲ್ಲೆ ಪ್ರಕರಣದಲ್ಲಿ ತಡೆಯಾಜ್ಞೆ ಸಿಗದೇ ಇರುವುದು, ಸಾಕ್ಷ್ಯ ವಿಚಾರಣೆಗೆ ಸೆಷನ್ಸ್ ಕೋರ್ಟ್ ಅನುಮತಿ ನೀಡಿದ್ದು ನಲಪಾಡ್ಗೆ ರಾಜಕೀಯವಾಗಿ ಹಿನ್ನೆಡೆಯಾಗುವ ಸಾಧ್ಯತೆ ಇದೆ. ಕಾಂಗ್ರೆಸ್ ಪಕ್ಷ ಕೂಡ ಟಿಕೆಟ್ ನಿರಾಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಶಾಂತಿನಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಮೊಹಮ್ಮದ್ ಹ್ಯಾರಿಸ್ ನಲಪಾಡ್ ಅವರ ಪುತ್ರ ಮೊಹಮ್ಮದ್ ನಲಪಾಡ್. ಅವರು 4 ವರ್ಷ ಹಿಂದೆ 2018ರ ಫೆಬ್ರವರಿ 17ರಂದು ಯುಬಿ ಸಿಟಿಯ ರೆಸ್ಟೋರೆಂಟ್ ಒಂದಕ್ಕೆ ಹೋಗಿದ್ದರು. ಅಲ್ಲಿ, ರಾತ್ರಿ 11 ಗಂಟೆಗೆ ವಿದ್ವತ್ ಕೂಡ ಅದೇ ರೆಸ್ಟೋರೆಂಟ್ಗೆ ಊಟಕ್ಕೆಂದು ಹೋಗಿದ್ದರು. ಅಲ್ಲಿ ಇಬ್ಬರ ನಡುವೆ ವಾಕ್ಸಮರ ನಡೆದಿತ್ತು. ಇದು ತಾರಕಕ್ಕೇರಿ ನಲಪಾಡ್ ಮತ್ತು ಸ್ನೇಹಿತರು ವಿದ್ವತ್ ಮೇಲೆ ಹಲ್ಲೆ ನಡೆಸಿದ್ದರು.
ಇದಾಗಿ, ವಿದ್ವತ್ ಅವರನ್ನು ಮಲ್ಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಲಪಾಡ್ ಮತ್ತು ಗ್ಯಾಂಗ್ ಅಲ್ಲಿಗೂ ಹೋಗಿ ವಿದ್ವತ್ಗೆ ಬೆದರಿಕೆ ಹಾಕಿತ್ತು. ಈ ಪ್ರಕರಣದಲ್ಲಿ ಪೊಲೀಸರು ನಲಪಾಡ್ ಮತ್ತು ಆತನ ಆರು ಸಹಚರರನ್ನು ಬಂಧಿಸಿದ್ದರು. 116 ದಿನಗಳ ಜೈಲುವಾಸದ ಬಳಿಕ ಷರತ್ತುಬದ್ಧ ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರಗಿದ್ದಾರೆ.
ಇದಾದ ಬಳಿಕ, ಅಧೀನ ನ್ಯಾಯಾಲಯದ ವಿಚಾರಣೆಗೆ ತಡೆ ನೀಡುವಂತೆ ನಲಪಾಡ್ ಹೈಕೋರ್ಟ್ ಮೊರೆ ಹೋಗಿದ್ದರು. ಹೈಕೋರ್ಟ್ನ ಏಕಸದಸ್ಯ ಪೀಠದ ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಮಧ್ಯಂತರ ತಡೆಯಾಜ್ಞೆ ನೀಡಿದ್ದರು. ಅದರ ಅವಧಿ ಸದ್ಯ ಮುಗಿದಿದೆ. ವಿಸ್ತರಣೆ ಆಗಿಲ್ಲ.
The case of scholarly attack on Youth Congress President Mohammad Nalapad has started again. The Sessions Court of Bengaluru on Tuesday agreed to continue the investigation against Youth Congress leader Mohammad Nalapad, who is facing charges of assault on a businessman's son Vidwat.The date of injunction issued by the High Court in the case of Mohammed Nalapad assaulting a scholar has not been extended. Thus, the Sessions Court has issued an order to continue the investigation of the case.
10-09-24 12:52 pm
Bangalore Correspondent
Cm Muda case, Siddaramaiah: ಸೆ.12 ಸಿದ್ದರಾಮಯ್ಯ...
10-09-24 12:17 pm
DV in Kannada, Deepak Arrest: 'ರೌಡಿ ನಂಬರ್ ಬೇಕ...
09-09-24 10:55 pm
Bangalore Cafe Blast, BJP Office, NIA: ರಾಮೇಶ್...
09-09-24 10:12 pm
ಮುಂದಿನ ಸಿಎಂ ಪರಮೇಶ್ವರ್ ; ಸಿದ್ದರಾಮಯ್ಯ ಕುರಿತ ಕೋರ...
09-09-24 04:49 pm
09-09-24 01:00 pm
HK News Desk
ಅಮೆರಿಕದಲ್ಲೂ ಟ್ರಬಲ್ ಶೂಟರ್ ಆಗ್ತಾರಾ ಡಿಕೆಶಿ ; ಚುನ...
08-09-24 11:07 pm
TMC MP Jawhar Sircar resigns: ಕೊಲ್ಕತ್ತಾ ವೈದ್ಯ...
08-09-24 02:45 pm
Vinesh Phogat, Haryanas Julana: ಜಾಟ್ ಪ್ರಾಬಲ್ಯ...
08-09-24 01:47 pm
ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಸೇವೆಯಿಂ...
07-09-24 10:44 pm
09-09-24 11:12 pm
Mangalore Correspondent
Mangalore Tulu lipi Unicode fake, Akash Jain:...
09-09-24 10:08 pm
Mangalore Tulu, Unicode: ಯುನಿಕೋಡ್ ಕೀಲಿಮಣೆಗೆ ತ...
09-09-24 05:45 pm
Mangalore Catholics, Sanghaniketan Ganeshotsa...
09-09-24 05:17 pm
Mangalore, Kinnigoli auto accident: ಕಿನ್ನಿಗೋಳ...
08-09-24 10:16 pm
07-09-24 05:45 pm
HK News Desk
Serial Killers Of Andhra Pradesh: ಸೈನೈಡ್ ಬೆರೆ...
07-09-24 03:06 pm
Puttur online fraud, Mangalore: ಸಿಆರ್ ಪಿಎಫ್ ಯ...
05-09-24 02:55 pm
Mangalore crime, Court, Murder: ದಂಪತಿಯೆಂದು ಮನ...
05-09-24 11:49 am
Uppinangady, Mangalore Crime: ನಡುರಾತ್ರಿಯಲ್ಲಿ...
04-09-24 06:33 pm