ಬ್ರೇಕಿಂಗ್ ನ್ಯೂಸ್
24-11-22 04:06 pm Bangalore Correspondent ಕರ್ನಾಟಕ
ಬೆಂಗಳೂರು, ನ.24: ತುಳುವರ ಆಚರಣೆ, ದೈವಾರಾಧನೆಯ ಎಳೆಯನ್ನು ಮುಂದಿಟ್ಟು ಕನ್ನಡದಲ್ಲಿ ಹೊರತಂದಿದ್ದ ಕಾಂತಾರ ಸಿನಿಮಾ ತುಳು ಭಾಷೆಯಲ್ಲೇ ಬಿಡುಗಡೆಯಾಗಲು ಸಜ್ಜಾಗಿದೆ. ದೇಶ- ವಿದೇಶದಲ್ಲಿ ಸದ್ದು ಮಾಡಿರುವ ಕಾಂತಾರ ಸಿನಿಮಾ ಭಾರತದಲ್ಲಿ ಡಿ.2ರಂದು ತುಳು ಭಾಷೆಯಲ್ಲೇ ಡಬ್ ಆಗಿ ಬಿಡುಗಡೆಗೊಳ್ಳುತ್ತಿದೆ. ಈ ಬಗ್ಗೆ ಚಿತ್ರ ನಿರ್ಮಾಪಕ ಹೊಂಬಾಳೆ ಫಿಲ್ಮ್ಸ್ ತಂಡವು ಟ್ವಿಟರ್ ನಲ್ಲಿ ಪ್ರಕಟಿಸಿದೆ.
ತುಳು ಭಾಷೆಗೆ ಡಬ್ ಆಗಿರುವ ಚಿತ್ರದ ಟ್ರೈಲರ್ ಅನ್ನು ಹೊಂಬಾಳೆ ಫಿಲಂಸ್ ತಂಡ ಟ್ವಿಟರ್ ನಲ್ಲಿ ಹಂಚಿಕೊಂಡಿದೆ. ಅಲ್ಲದೆ, ವಿದೇಶದಲ್ಲಿ ನ.25ರಂದೇ ತುಳು ಭಾಷೆಯಲ್ಲಿ ಫಿಲಂ ಬಿಡುಗಡೆಯಾಗಲಿದ್ದು, ಭಾರತದಲ್ಲಿ ಡಿ.2ರಂದು ಬಿಡುಗಡೆ ಆಗಲಿದೆ ಎಂದು ಹೇಳಿದೆ. ಕರಾವಳಿಯ ದೈವಾರಾಧಾನೆ ಮತ್ತು ತುಳುವರ ಆಚರಣೆ, ಸಂಪ್ರದಾಯಗಳನ್ನು ಎದ್ದು ತೋರಿಸಿರುವ ಕಾಂತಾರ ಸಿನಿಮಾ ತುಳುವಿನಲ್ಲೇ ಬರಬೇಕೆಂದು ಆಗ್ರಹ ಕೇಳಿಬಂದಿತ್ತು. ಸೆ.30ರಂದು ಕನ್ನಡದಲ್ಲಿ ಮಾತ್ರ ಹೊರಬಂದಿದ್ದ ಚಿತ್ರವು ಆನಂತರ, ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗೂ ಡಬ್ ಆಗಿ ಆಯಾ ಭಾಗದಲ್ಲೂ ಜನರ ಮೆಚ್ಚುಗೆ ಗಳಿಸಿತ್ತು.
ಇದೀಗ ಎರಡು ತಿಂಗಳ ನಂತರ ಕಾಂತಾರ ತುಳುವಿನಲ್ಲಿ ಬಿಡುಗಡೆಯಾಗುತ್ತಿದೆ. ಚಿತ್ರದಲ್ಲಿ ಭೂಮಾಲೀಕನ ಪಾತ್ರ ಮಾಡಿದ್ದ ಅಚ್ಯುತ್ ಕುಮಾರ್ ಪರವಾಗಿ ತುಳುವಿನ ಖ್ಯಾತ ನಟ, ನಿರ್ದೇಶಕ ದೇವದಾಸ್ ಕಾಪಿಕಾಡ್ ಧ್ವನಿ ನೀಡಿದ್ದಾರೆ. ಉಳಿದಂತೆ, ಚಿತ್ರದಲ್ಲಿ ಹೆಚ್ಚಿನ ಮಂದಿ ತುಳುವರೇ ಪಾತ್ರ ನಿರ್ವಹಿಸಿರುವುದರಿಂದ ಆಯಾ ಪಾತ್ರಧಾರಿಗಳೇ ಧ್ವನಿ ನೀಡಿದ್ದಾರೆ. ಕನ್ನಡದಲ್ಲಿ ಕುಂದಾಪ್ರ ಕನ್ನಡ ಮತ್ತು ಮಂಗಳೂರು ಕನ್ನಡದಲ್ಲಿಯೇ ಹೆಚ್ಚು ಡಯಲಾಗ್ ಗಳಿದ್ದವು. ಇದೀಗ ತುಳುವರನ್ನು ಪ್ರತಿನಿಧಿಸುವ ಚಿತ್ರಕ್ಕೆ ತುಳು ಭಾಷೆಯ ಟಚ್ ಸಿಕ್ಕಿದೆ.
ವರಾಹ ರೂಪಂ ಹಾಡಿಗೆ ಕತ್ತರಿ
ಇದೇ ವೇಳೆ, ಕಾಂತಾರ ಕನ್ನಡ ಸಿನಿಮಾ ಅಮೆಜಾನ್ ಪ್ರೈಮ್ ಓಟಿಟಿಯಲ್ಲೂ ಬಿಡುಗಡೆಯಾಗಿದೆ. ಆದರೆ ಚಿತ್ರದಲ್ಲಿ ಜನಾಕರ್ಷಣೆ ಗಳಿಸಿದ್ದ ವರಾಹಂ ರೂಪಂ ಹಾಡಿನಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ. ಕೇರಳದ ತೈಕ್ಕುಡಂ ಬ್ರಿಡ್ಜ್ ಎನ್ನುವ ಆಲ್ಬಂ ತಂಡ ವರಾಹ ರೂಪಂ ಹಾಡು ತಮ್ಮದೆಂದು ಹೇಳಿಕೊಂಡು ಕೋರ್ಟ್ ಮೆಟ್ಟಿಲೇರಿತ್ತು. ತಮ್ಮ ನವರಸ ರೂಪಂ ಹಾಡಿನ ಟ್ಯೂನನ್ನು ಬಳಸಲಾಗಿದೆ ಎಂದು ಕೋಯಿಕ್ಕೋಡ್ ಕೋರ್ಟಿನಿಂದ ಹಾಡು ಪ್ರಸಾರಕ್ಕೆ ತಡೆಯಾಜ್ಞೆ ತರಲಾಗಿತ್ತು. ಥಿಯೇಟರ್ ಗಳಲ್ಲಿ ಹಾಡಿಗೆ ನಿಷೇಧ ಹೇರದೇ ಇದ್ದರೂ, ಇದೀಗ ಒಟಿಟಿ ವೇದಿಕೆಯಲ್ಲಿ ಚಿತ್ರ ಬಿಡುಗಡೆಯಾಗುತ್ತಲೇ ಹಾಡಿಗೆ ಕತ್ತರಿ ಹಾಕಲಾಗಿದೆ. ವರಾಹ ರೂಪಂ ಹಳೆಯ ಹಾಡಿನ ಟ್ಯೂನನ್ನು ಬದಲಾಯಿಸಿ ಹೊಸತಾಗಿ ಕೊಟ್ಟಿದ್ದು ಜನರ ನಿರಾಸೆಗೆ ಕಾರಣವಾಗಿದೆ.
Pan-India film 'Kantara', which recently took the theatres by storm, has now made its way to OTT, but with a change. Makers of the film, who were accused of plagiarising the song 'Varaha Roopam', have allegedly made some modifications to it.
19-04-24 07:58 pm
HK News Desk
Hubbali Neha Murder, CM Siddaramaiah: ವೈಯಕ್ತಿ...
19-04-24 04:27 pm
Hubballi Murder Neha, Parameshwar: ಹುಬ್ಬಳ್ಳಿ...
19-04-24 04:08 pm
ಶಿವಮೊಗ್ಗ ಸಂಸದ ರಾಘವೇಂದ್ರ 73 ಕೋಟಿ ಆಸ್ತಿ ; ಪತ್ನಿ...
19-04-24 01:41 pm
Sri Dingaleshwara Swamiji dharwad, Pralad Jo...
19-04-24 10:39 am
17-04-24 08:42 pm
HK News Desk
Gujarat, Road Accident: ನಿಂತಿದ್ದ ಟ್ರಕ್ಗೆ ಗುದ...
17-04-24 07:07 pm
Dubai, Oman Rain, flood; ಧಾರಾಕಾರ ಮಳೆಗೆ ಕೊಚ್ಚಿ...
17-04-24 12:53 pm
29 Naxalites killed in Kanker encounter, Chha...
16-04-24 07:50 pm
ಕ್ರೇನ್ ಗೆ ಡಿಕ್ಕಿ ಹೊಡೆದ ರಿಕ್ಷಾ ; ಏಳು ಮಂದಿ ದುರ್...
16-04-24 05:09 pm
19-04-24 10:11 pm
Mangalore Correspondent
Mangalore accident, Kulur: ಕೋಡಿಕಲ್ ಕ್ರಾಸ್ ನಲ್...
19-04-24 09:55 pm
Mangalore election, 144 section: ಲೋಕಸಭೆ ಚುನಾವ...
19-04-24 08:32 pm
Kalakul, diploma course: ಕಲಾಕುಲ್ ನಾಟಕ ತಂಡದಿಂದ...
19-04-24 05:18 pm
Congress MP Padmaraj, Bantwal: ಬಂಟ್ವಾಳ ಕ್ಷೇತ್...
19-04-24 02:30 pm
19-04-24 10:25 pm
Mangalore Correspondent
Mangalore Acid Attack, EXAM: ಆ್ಯಸಿಡ್ ದಾಳಿಗೀಡಾ...
19-04-24 09:25 pm
Hubballi student Neha murder: ಹುಬ್ಬಳ್ಳಿ ಕಾಲೇ...
19-04-24 03:43 pm
Gadag Murder news, four killed; ನಗರ ಸಭೆ ಉಪಾಧ್...
19-04-24 09:27 am
Bangalore Double Murder: 'ಕರಿಮಣಿ ಮಾಲೀಕ'ನಿಗೆ ತ...
18-04-24 10:03 pm