ಬ್ರೇಕಿಂಗ್ ನ್ಯೂಸ್
27-11-22 04:47 pm HK News Desk ಕರ್ನಾಟಕ
ಮೈಸೂರು, ನ.27: ವಿವಾದಕ್ಕೊಳಗಾಗಿದ್ದ ಬಸ್ ತಂಗುದಾಣದ ಗುಂಬಜ್ ಮಾದರಿಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. ಮೈಸೂರು ಊಟಿ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ ವಿರುದ್ಧ ಸಂಸದ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು.
ಬಸ್ ತಂಗುದಾಣ ಮೇಲಿದ್ದ ಎರಡು ಚಿಕ್ಕ ಗೋಪುರಗಳನ್ನು ಶನಿವಾರ ರಾತ್ರಿ ತೆರವು ಮಾಡಲಾಗಿದೆ. ಶಾಸಕ ರಾಮದಾಸ್ ಅಣತಿ ಮೇರೆಗೆ ಚಿಕ್ಕ ಗೋಪುರಗಳ ತೆರವುಗೊಳಿಸಲಾಗಿದೆ. ಮಧ್ಯೆ ಇದ್ದ ದೊಡ್ಡ ಗೋಪುರಗಳನ್ನು ಮಾತ್ರ ಉಳಿಸಿ ಚಿಕ್ಕ ಗೋಪುರವನ್ನು ಒಡೆದು ಹಾಕಲಾಗಿದೆ.

ಬಸ್ ತಂಗುದಾಣ ಗುಂಬಜ್ ಮಾದರಿ ಇದೆ ಎಂದು ಸಂಸದ ಪ್ರತಾಪಸಿಂಹ ಆಕ್ಷೇಪವೆತ್ತಿದ್ದರು. ಆದರೆ ಶಾಸಕ ರಾಮದಾಸ್ ಬಸ್ ತಂಗುದಾಣ ಅರಮನೆ ಮಾದರಿಯಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದರು. ಇದೇ ವಿಚಾರ ಸಂಸದ ಹಾಗೂ ಶಾಸಕರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಈಗ ಗೋಪುರ ತೆರವುಗೊಳಿಸಿ ವಿವಾದಕ್ಕೆ ಇತಿಶ್ರೀ ಹಾಕಲು ಯತ್ನಿಸಲಾಗಿದೆ.
ಈ ಬಗ್ಗೆ ಶಾಸಕ ರಾಮದಾಸ್ ಸ್ಪಷ್ಟನೆ ನೀಡಿದ್ದು ಗುಂಬಜ್ ಮಾದರಿಯಿದ್ದ ಬಸ್ ನಿಲ್ದಾಣದ ಗೋಪುರ ತೆರವಾಗಿದೆ. ವಿವಾದಿತ ಕೇಂದ್ರವಾಗಬಾರದು ಅನ್ನೋ ಕಾರಣಕ್ಕೆ ತೆರವುಗೊಳಿಸಲಾಗಿದೆ. 12 ಬಸ್ ನಿಲ್ದಾಣದ ಶೆಲ್ಟರ್ ಇದೇ ಮಾದರಿಯಲ್ಲಿ ನಿರ್ಮಿಸಲಾಗುವುದು. ಅರಮನೆ ಮಾದರಿ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಅನವಶ್ಯಕವಾಗಿ ಧರ್ಮದ ಲೇಪನ ನೀಡಿದ್ದು ನನಗೆ ನೋವಾಗಿದೆ. ಹಿರಿಯರ ಸಲಹೆಯಂತೆ ನಿರ್ಧಾರ ಮಾಡಿದ್ದೇನೆ. ದೊಡ್ಡ ಡೂಮ್ ಉಳಿಸಿಕೊಂಡು ಎರಡು ಚಿಕ್ಕ ಡೂಮ್ ಗಳನ್ನು ತೆರವು ಮಾಡಲಾಗಿದೆ. ಯಾರೂ ಅನ್ಯಥಾ ಭಾವಿಸಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ಮನವಿ ಮಾಡಿದ್ದಾರೆ.
Two of the three controversial domes atop a bus stop in Mysuru, which had turned into a friction point between BJP leaders of the district, were removed late on Saturday. The domes atop the bus stop near JSS College, Ooty Road, which according to local MLA S A Ramdas was modelled along the lines of Mysuru Palace, had attracted the wrath of Mysuru-Kodagu MP Prathap Simha who had threatened to demolish them.
25-07-26 03:06 pm
HK News Staffer
ಧಾರವಾಡ ; ಮಗ ರೈಲು ಹಳಿಗೆ ಬಿದ್ದು ಆತ್ಮಹತ್ಯೆ, ಸಾವಿ...
23-07-26 08:05 pm
Soujanya case: ಸೌಜನ್ಯ ಪ್ರಕರಣದಲ್ಲಿ ಸಿಬಿಐಗೆ ತರಾ...
22-07-26 06:00 pm
ಸಚಿವ ಸಂಪುಟಕ್ಕೆ ಖರ್ಗೆ, ಡಿಕೆ, ಸಿದ್ದರಾಮಯ್ಯ ಪ್ರತ್...
19-07-26 08:34 pm
ಡಿಕೆಶಿ ಸಂಪುಟ ವಿಸ್ತರಣೆಗೆ ಮತ್ತೆ ಬ್ರೇಕ್ ; 55ರ ಒಳ...
17-07-26 02:55 pm
26-07-26 01:32 pm
HK News Staffer
ವಿದ್ಯಾರ್ಥಿಗಳ ಪ್ರತಿಭಟನೆ ಕಿಚ್ಚು ; ರಾಷ್ಟ್ರೀಯ ಪರೀ...
25-07-26 07:34 pm
ಅಂತೂ ವಿದ್ಯಾರ್ಥಿಗಳ ಪ್ರತಿಭಟನೆಗೆ ಮಣಿದ ಕೇಂದ್ರ ಸರ್...
25-07-26 03:07 pm
NEET ಪ್ರತಿಭಟನೆ ಹಿಂಸಾಚಾರ ; 117 ಶಂಕಿತರ ಫೋಟೋ ಬಿಡ...
24-07-26 03:25 pm
ಪ್ರಶ್ನೆಪತ್ರಿಕೆ ಸೋರಿಕೆ ; ಕೇಂದ್ರ ಸರ್ಕಾರದ ಭರವಸೆಗ...
24-07-26 11:18 am
26-07-26 09:57 pm
HK News Desk
ಕದ್ರಿ ಯುದ್ಧ ಸ್ಮಾರಕದ ಬಳಿ ಟಿ-55 ಯುದ್ಧ ಟ್ಯಾಂಕರ್...
26-07-26 09:14 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಎಸ್ಐಆರ್ ನಿಂದ ಯಾರೂ ಮತದಾನದ ಹಕ್ಕು ಕಳೆದುಕೊಳ್ಳುವುದ...
25-07-26 07:32 pm
ಹವಾಮಾನ ಇಲಾಖೆಯ ಅವೈಜ್ಞಾನಿಕ ವರದಿ, ತರಾತುರಿಯ ರಜೆ ಘ...
25-07-26 02:42 pm
27-07-26 11:47 am
HK News Staffer
ಡೆಲ್ಲಿ ಟು ಮಂಗಳೂರು ಡ್ರಗ್ ನೆಟ್ವರ್ಕ್ ; ಪೊಲೀಸರ ಕಣ...
26-07-26 04:30 pm
ಶಾಲಾ ಬಸ್ಸಿಗೆ ಮರ ಬಿದ್ದು ಮಗು ಸಾವು ಪ್ರಕರಣ ; ಬಸ್ಸ...
25-07-26 07:36 pm
Vikky Bappal, Mangalore Crime: ಕುಖ್ಯಾತ ರೌಡಿ ವ...
25-07-26 03:50 pm
ಡೇಟಿಂಗ್ ಆ್ಯಪ್ನಲ್ಲಿ ಪರಿಚಯವಾಗಿದ್ದ ಯುವತಿಯಿಂದ ಬ್ಲ...
24-07-26 08:57 pm