ಗುಂಬಜ್ ಬಸ್ ನಿಲ್ದಾಣ ತೆರವು ; ಅರಮನೆ ಮಾದರಿ ಮಾಡಿದ್ದೆ, ಧರ್ಮದ ಲೇಪನ ಮಾಡಿದ್ದು ನೋವು ತಂದಿದೆ ; ರಾಮದಾಸ್ 

27-11-22 04:47 pm       HK News Desk   ಕರ್ನಾಟಕ

ವಿವಾದಕ್ಕೊಳಗಾಗಿದ್ದ ಬಸ್ ತಂಗುದಾಣದ ಗುಂಬಜ್ ಮಾದರಿಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. ಮೈಸೂರು ಊಟಿ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ ವಿರುದ್ಧ ಸಂಸದ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು. 

ಮೈಸೂರು, ನ.27: ವಿವಾದಕ್ಕೊಳಗಾಗಿದ್ದ ಬಸ್ ತಂಗುದಾಣದ ಗುಂಬಜ್ ಮಾದರಿಯನ್ನು ರಾತ್ರೋರಾತ್ರಿ ತೆರವು ಮಾಡಲಾಗಿದೆ. ಮೈಸೂರು ಊಟಿ ರಸ್ತೆಯಲ್ಲಿ ನಿರ್ಮಾಣವಾಗಿದ್ದ ಗುಂಬಜ್ ಮಾದರಿ ಬಸ್ ತಂಗುದಾಣದ ವಿರುದ್ಧ ಸಂಸದ ಪ್ರತಾಪಸಿಂಹ ಆಕ್ರೋಶ ವ್ಯಕ್ತಪಡಿಸಿದ್ದರು. 

ಬಸ್ ತಂಗುದಾಣ ಮೇಲಿದ್ದ ಎರಡು ಚಿಕ್ಕ ಗೋಪುರಗಳನ್ನು ಶನಿವಾರ ರಾತ್ರಿ ತೆರವು ಮಾಡಲಾಗಿದೆ. ಶಾಸಕ ರಾಮದಾಸ್ ಅಣತಿ ಮೇರೆಗೆ ಚಿಕ್ಕ ಗೋಪುರಗಳ ತೆರವುಗೊಳಿಸಲಾಗಿದೆ. ಮಧ್ಯೆ ಇದ್ದ ದೊಡ್ಡ ಗೋಪುರಗಳನ್ನು ಮಾತ್ರ ಉಳಿಸಿ ಚಿಕ್ಕ ಗೋಪುರವನ್ನು ಒಡೆದು ಹಾಕಲಾಗಿದೆ. 

ಬಸ್ ತಂಗುದಾಣ ಗುಂಬಜ್ ಮಾದರಿ ಇದೆ ಎಂದು ಸಂಸದ ಪ್ರತಾಪಸಿಂಹ ಆಕ್ಷೇಪವೆತ್ತಿದ್ದರು. ಆದರೆ ಶಾಸಕ ರಾಮದಾಸ್ ಬಸ್ ತಂಗುದಾಣ ಅರಮನೆ ಮಾದರಿಯಲ್ಲಿದೆ ಎಂದು ಸಮರ್ಥಿಸಿಕೊಂಡಿದ್ದರು. ಇದೇ ವಿಚಾರ ಸಂಸದ ಹಾಗೂ ಶಾಸಕರ ನಡುವೆ ಆರೋಪ ಪ್ರತ್ಯಾರೋಪಕ್ಕೆ ಕಾರಣವಾಗಿತ್ತು. ಈಗ ಗೋಪುರ ತೆರವು‌ಗೊಳಿಸಿ ವಿವಾದಕ್ಕೆ ಇತಿಶ್ರೀ ಹಾಕಲು ಯತ್ನಿಸಲಾಗಿದೆ. 

ದಯಮಾಡಿ ನನ್ನ ಬಿಟ್ಟು ಬಿಡಿ : ಶಾಸಕ ರಾಮ್‌ದಾಸ್‌ - Pratidhvani

ಈ ಬಗ್ಗೆ ಶಾಸಕ ರಾಮದಾಸ್ ಸ್ಪಷ್ಟನೆ ನೀಡಿದ್ದು ಗುಂಬಜ್ ಮಾದರಿಯಿದ್ದ ಬಸ್ ನಿಲ್ದಾಣದ ಗೋಪುರ ತೆರವಾಗಿದೆ. ವಿವಾದಿತ ಕೇಂದ್ರವಾಗಬಾರದು ಅನ್ನೋ ಕಾರಣಕ್ಕೆ ತೆರವುಗೊಳಿಸಲಾಗಿದೆ. 12 ಬಸ್ ನಿಲ್ದಾಣದ ಶೆಲ್ಟರ್ ಇದೇ ಮಾದರಿಯಲ್ಲಿ ನಿರ್ಮಿಸಲಾಗುವುದು. ಅರಮನೆ ಮಾದರಿ ನಿರ್ಮಾಣ ನನ್ನ ಉದ್ದೇಶವಾಗಿತ್ತು. ಅನವಶ್ಯಕವಾಗಿ ಧರ್ಮದ ಲೇಪನ ನೀಡಿದ್ದು ನನಗೆ ನೋವಾಗಿದೆ. ಹಿರಿಯರ ಸಲಹೆಯಂತೆ ನಿರ್ಧಾರ ಮಾಡಿದ್ದೇನೆ. ದೊಡ್ಡ ಡೂಮ್ ಉಳಿಸಿಕೊಂಡು ಎರಡು ಚಿಕ್ಕ ಡೂಮ್ ಗಳನ್ನು ತೆರವು ಮಾಡಲಾಗಿದೆ. ಯಾರೂ ಅನ್ಯಥಾ ಭಾವಿಸಬಾರದು ಎಂದು ಪತ್ರಿಕಾ ಪ್ರಕಟಣೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ಮನವಿ ಮಾಡಿದ್ದಾರೆ.

Two of the three controversial domes atop a bus stop in Mysuru, which had turned into a friction point between BJP leaders of the district, were removed late on Saturday. The domes atop the bus stop near JSS College, Ooty Road, which according to local MLA S A Ramdas was modelled along the lines of Mysuru Palace, had attracted the wrath of Mysuru-Kodagu MP Prathap Simha who had threatened to demolish them.