ಶಿವಮೊಗ್ಗದ ಕ್ರಿಮಿನಲ್ ಸುಹೇಲ್ ಕೋಬ್ರಾ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು 

03-12-22 01:03 pm       HK News Desk   ಕರ್ನಾಟಕ

ಗಡೀಪಾರು ಶಿಕ್ಷೆಗೆ ಹೆದರಿ ವಿಷ ಸೇವಿಸಿದ್ದ ಕ್ರಿಮಿನಲ್ ಆರೋಪಿ ಸುಹೇಲ್ ಕೋಬ್ರಾ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ. 

ಶಿವಮೊಗ್ಗ, ಡಿ.3: ಗಡೀಪಾರು ಶಿಕ್ಷೆಗೆ ಹೆದರಿ ವಿಷ ಸೇವಿಸಿದ್ದ ಕ್ರಿಮಿನಲ್ ಆರೋಪಿ ಸುಹೇಲ್ ಕೋಬ್ರಾ ಮಂಗಳೂರಿನ ಆಸ್ಪತ್ರೆಯಲ್ಲಿ ಸಾವು ಕಂಡಿದ್ದಾನೆ. 

ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ನಿವಾಸಿಯಾಗಿರು ಸುಹೇಲ್ ನ.28ರಂದು ಮನೆಯಲ್ಲಿ ವಿಷ ಸೇವಿಸಿದ್ದ. ತೀರ್ಥಹಳ್ಳಿ ಸರಕಾರಿ ಆಸ್ಪತ್ರೆ ಹಾಗೂ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಸುಹೇಲ್ ಗೆ ಚಿಕಿತ್ಸೆ ನೀಡಲಾಗಿತ್ತು. ಆನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯೇನಪೋಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಲ್ಲಿ ಚಿಕಿತ್ಸೆ ಫಲಿಸದೆ ಶುಕ್ರವಾರ ರಾತ್ರಿ 1 ಗಂಟೆಗೆ ಸಾವನ್ನಪ್ಪಿದ್ದಾನೆ. 

ಸುಹೇಲ್ ವಿರುದ್ದ ತೀರ್ಥಹಳ್ಳಿ ಹಾಗು ಮಾಳೂರು ಠಾಣೆಯಲ್ಲಿ ಹಲವು ಕ್ರಿಮಿನಲ್ ‌ಪ್ರಕರಣ ದಾಖಲಾಗಿದ್ದವು.‌ ಹಾಗಾಗಿ, ಆತನನ್ನು ಎರಡು ವರ್ಷ ಕಾಲ ಜಿಲ್ಲೆಯಿಂದ ಗಡಿಪಾರು ಮಾಡಲು ಆದೇಶವಾಗಿತ್ತು. ಗಡಿಪಾರು ಆದೇಶಕ್ಕೆ ಬೆದರಿದ್ದ ಆರೋಪಿ, ಪೊಲೀಸ್ ನೋಟಿಸ್ ತಲುಪಿದ ಬೆನ್ನಲ್ಲೇ ವಿಷ ಸೇವಿಸಿದ್ದ.

Suhail Cobra, a criminal accused in the case, who consumed poison fearing deportation, died at a hospital in Mangaluru on Monday.