ಕಳ್ಳ ಚಿನ್ನ ಕದ್ದು ಪರಾರಿಯಾಗುವ ಮೊದಲೇ ವಿಮಾನದಲ್ಲಿ ಹಾರಿ ಹಿಡಿದ ಪೊಲೀಸರು!!

20-10-20 04:06 pm       Bangalore Correspondent   ಕರ್ನಾಟಕ

ಆಭರಣಗಳನ್ನು ಲಪಟಾಯಿಸಿ ಪರಾರಿಯಾಗುತ್ತಿದ್ದ ಕಳ್ಳನನ್ನು ಪೊಲೀಸರು ವಿಮಾನದಲ್ಲಿ ತೆರಳಿ ಬಂಧಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬೆಂಗಳೂರು, ಅಕ್ಟೋಬರ್ 20 : 1.3 ಕೋಟಿ ರೂ. ಮೌಲ್ಯದ ಆಭರಣಗಳನ್ನು ಲಪಟಾಯಿಸಿ ಪರಾರಿಯಾಗುತ್ತಿದ್ದ ಕಳ್ಳನನ್ನು ಪೊಲೀಸರು ವಿಮಾನದಲ್ಲಿ ತೆರಳಿ ಬಂಧಿಸಿದ ಘಟನೆ ಬೆಂಗಳೂರಲ್ಲಿ ನಡೆದಿದೆ.

ಬಂಧಿತ ಆರೋಪಿ ಮೂಲತಃ ಪಶ್ಚಿಮ ಬಂಗಾಳದವನಾಗಿದ್ದು ಬೆಂಗಳೂರಿನ ಉದ್ಯಮಿಯೊಬ್ಬರ ಮನೆಯಲ್ಲಿ ಕೆಲಸಕ್ಕಿದ್ದನು. ಉದ್ಯೋಗದಾತನ ಕುಟುಂಬ ಸದಸ್ಯರೊಬ್ಬರಿಗೆ ಕೊರೊನ ಪಾಸಿಟಿವ್ ದೃಢಪಟ್ಟಿದ್ದರಿಂದ  ಮನೆಯವರೆಲ್ಲ ಆತನ ಶುಶ್ರೂಷೆಯಲ್ಲಿ ನಿರತರಾಗಿದ್ದರು. ಇದನ್ನು ಮನಗಂಡ ಆರೋಪಿ ಮನೆಯಲ್ಲಿದ್ದ ವಜ್ರದ ಆಭರಣಗಳನ್ನು ಕದ್ದು ಪರಾರಿಯಾಗಲು ಯತ್ನಿಸಿದ್ದಾನೆ. 

ವಿಷಯವನ್ನರಿತ ಮನೆಯವರು ತಕ್ಷಣ ಪೊಲೀಸರಿಗೆ ದೂರು ನೀಡಿದ್ದು, ಕಳ್ಳ ಯಶವಂತಪುರ ರೈಲ್ವೆ ನಿಲ್ದಾಣದಿಂದ  ಕೊಲ್ಕತ್ತಾದೆಡೆಗೆ ಪರಾರಿಯಾಗುವ ಯೋಜನೆ ಹಾಕಿದ್ದ. ವಿಷಯ ತಿಳಿದ ಪೊಲೀಸರು ಕೂಡಲೇ ವಿಮಾನವನ್ನೇರಿ ಕಳ್ಳ ಕೋಲ್ಕತ್ತಾ ತಲುಪುವ ಮೊದಲೇ ಆರೋಪಿಯನ್ನು ಬಂಧಿಸಿದ್ದಾರೆ.

In a hot chase, police flew to Kolkata to catch a domestic help who had fled by train after allegedly stealing gold and diamond jewellery from his employer in Bengaluru. Police were waiting for him at the Howrah railway station before the train reached there.