ಬೆಂಗಳೂರು ವಿವಿ ಕುಲಪತಿ ಆಯ್ಕೆಗೆ ಪಿ.ಎಸ್. ಯಡಪಡಿತ್ತಾಯ ನೇತೃತ್ವದಲ್ಲಿ ಸರ್ಚ್ ಕಮಿಟಿ !

31-10-20 01:26 pm       Bangalore Correspondent   ಕರ್ನಾಟಕ

ಬೆಂಗಳೂರು ವಿವಿಯ ಕುಲಪತಿ ಯಾರಾಗಬಹುದೆಂಬ ಬಗ್ಗೆ ವರದಿ ನೀಡಲು ಮಂಗಳೂರು ವಿವಿಯ ಕುಲಪತಿ ಪಿ.ಎಸ್‌.ಯಡಪಡಿತ್ತಾಯ ನೇತೃತ್ವದಲ್ಲಿ ಸರ್ಚ್ ಕಮಿಟಿ.

ಬೆಂಗಳೂರು, ಅಕ್ಟೋಬರ್ 31: ಬೆಂಗಳೂರು ವಿವಿಯ ಕುಲಪತಿ ಯಾರಾಗಬಹುದೆಂಬ ಬಗ್ಗೆ ವರದಿ ನೀಡಲು ಮಂಗಳೂರು ವಿವಿಯ ಕುಲಪತಿ ಪಿ.ಎಸ್‌.ಯಡಪಡಿತ್ತಾಯ ನೇತೃತ್ವದಲ್ಲಿ ಸರ್ಚ್ ಕಮಿಟಿಯನ್ನು ರಾಜ್ಯ ಸರಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಬೆಂಗಳೂರು ನಗರ ವಿವಿ ಕುಲಪತಿ ಸ್ಥಾನಕ್ಕೆ ಅರ್ಜಿ ಸಲ್ಲಿಸಲು 15 ದಿನಗಳ ಕಾಲಾವಕಾಶವಿದ್ದು, ಬಳಿಕ ಸರ್ಚ್ ಕಮಿಟಿ ನೂತನ ಕುಲಪತಿಯ ಆಯ್ಕೆಗೆ ಸಭೆ ನಡೆಸಿ ಶಿಫಾರಸು ಮಾಡಲಿದೆ. 

ಮಂಗಳೂರು ವಿವಿ ಕುಲಪತಿ ಪ್ರೊ.ಪಿ.ಎಸ್‌.ಯಡಪಡಿತ್ತಾಯ ಅಧ್ಯಕ್ಷತೆಯ ಈ ಸರ್ಚ್ ಕಮಿಟಿಯಲ್ಲಿ ಮೈಸೂರು ಮುಕ್ತ ವಿವಿ ಕುಲಪತಿ ಡಾ.ವಿದ್ಯಾಶಂಕರ್‌, ಹೊಸದಿಲ್ಲಿಯ ಜೆಎನ್‌ಯು ಕುಲಪತಿ ಪ್ರೊ.ಜಗದೀಶ್‌ ಕುಮಾರ್‌, ಕುಲಬುರಗಿಯ ಕರ್ನಾಟಕ ಸೆಂಟ್ರಲ್‌ ವಿವಿ ಕುಲಪತಿ ಪ್ರೊ.ಎನ್‌.ಆರ್‌.ಶೆಟ್ಟಿ ಅವರನ್ನು ಸದಸ್ಯರಾಗಿ ನಾಮನಿರ್ದೇಶನ ಮಾಡಲಾಗಿದೆ.

The State government has nominated Vice-Chancellor of Mangalore University P.S. Yadapadithaya as the chairman of the search committee to recommend a panel of three eminent educationists for appointing one of them as the Vice-Chancellor of Bengaluru City University.