ಕೊರೊನಾ ನಡುವೆ ರಾಜ್ಯದ ಜನತೆಗೆ ಕರೆಂಟ್ ಶಾಕ್ !!

04-11-20 05:42 pm       Bangalore Correspondent   ಕರ್ನಾಟಕ

ರಾಜ್ಯ ಸರಕಾರ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪ್ರತಿ ಯುನಿಟಿಗೆ 40 ಪೈಸೆಯಷ್ಟು ದರ ಹೆಚ್ಚಿಸಿ ಆದೇಶ ಹೊರಡಿಸಿದೆ.

ಬೆಂಗಳೂರು, ನವೆಂಬರ್ 04: ರಾಜ್ಯದ ಜನತೆಗೆ ಕೊರೊನಾ ನಡುವೆ ಕರೆಂಟ್ ಶಾಕ್ ತಗುಲಿದೆ. ರಾಜ್ಯ ಸರಕಾರ ವಿದ್ಯುತ್ ದರ ಹೆಚ್ಚಳ ಮಾಡಿದ್ದು, ಪ್ರತಿ ಯುನಿಟಿಗೆ 40 ಪೈಸೆಯಷ್ಟು ದರ ಹೆಚ್ಚಿಸಿ ಆದೇಶ ಹೊರಡಿಸಿದೆ.

ವಿದ್ಯುತ್ ದರ ಹೆಚ್ಚಳ ಮಾಡುವಂತೆ ರಾಜ್ಯ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ ಎಲ್ಲ ಎಸ್ಕಾಂಗಳಿಂದ ಮನವಿ ಬಂದಿತ್ತು. ಪ್ರತಿ ಯುನಿಟ್ ವಿದ್ಯುತ್ತಿಗೆ 1.90 ರೂ.ನಂತೆ ದರ ಹೆಚ್ಚಿಸಲು ಮನವಿ ಬಂದಿತ್ತು. ಆದರೆ, ರಾಜ್ಯ ಸರಕಾರ ಯುನಿಟ್ ದರ 40 ಪೈಸೆ ಹೆಚ್ಚಿಸಿದೆ.  

ಹೊಸ ದರ ರಾಜ್ಯದ ಎಲ್ಲ ಎಸ್ಕಾಂಗಳ ವ್ಯಾಪ್ತಿಯಲ್ಲಿ ನವೆಂಬರ್ 1ರಿಂದಲೇ ಜಾರಿಗೆ ಬರಲಿದೆ. ಕೊರೊನಾದಿಂದ ಜನಸಾಮಾನ್ಯರು ತತ್ತರಿಸಿರುವ ಹೊತ್ತಲ್ಲಿ ವಿದ್ಯುತ್ ದರ ಹೆಚ್ಚಳ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. 

Karnataka Electricity Regulatory Commission (KERC) has approved revision of electricity tariff for all the Electricity Supply Companies (ESCOMs) with an average increase by 40 paise per unit considering increase in demand and energy charges, with an average increase of 5.4%.