ಕೊಡಗು ಗಡಿಭಾಗದಲ್ಲಿ ನಕ್ಸಲ್ ಕೂಂಬಿಂಗ್ ; ಕಾರ್ಕಳದ ಎಎನ್ಎಫ್ ಮಡಿಕೇರಿಗೆ

06-11-20 05:16 pm       Headline Karnataka News Network   ಕರ್ನಾಟಕ

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿಯೋಜಿಸಲಾಗಿದ್ದ ನಕ್ಸಲ್ ನಿಗ್ರಹ ದಳವನ್ನು ಕೊಡಗು ಗಡಿಭಾಗಕ್ಕೆ ತರಿಸಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ.

ಮಡಿಕೇರಿ, ನವೆಂಬರ್ 06: ಕೊಡಗು, ಮೈಸೂರು ಮತ್ತು  ಕೇರಳ ರಾಜ್ಯದ ಗಡಿಭಾಗದ ಅರಣ್ಯದಲ್ಲಿ ನಕ್ಸಲ್ ಚಲನವಲನ ಇರುವುದರಿಂದ ಎಎನ್ಎಫ್ ಪಡೆ ಕಟ್ಟೆಚ್ಚರ ವಹಿಸಿದ್ದು ಕೂಂಬಿಂಗ್ ಆರಂಭಿಸಿದೆ. 

ಉಡುಪಿ ಜಿಲ್ಲೆಯ ಕಾರ್ಕಳದಲ್ಲಿ ನಿಯೋಜಿಸಲಾಗಿದ್ದ ನಕ್ಸಲ್ ನಿಗ್ರಹ ದಳವನ್ನು ಕೊಡಗು ಗಡಿಭಾಗಕ್ಕೆ ತರಿಸಿದ್ದು ಕಾರ್ಯಾಚರಣೆ ಆರಂಭಿಸಿದ್ದಾರೆ. ಕೊಡಗಿನ ಕುಟ್ಟ, ಮಾಕುಟ್ಟ, ನಾಪೋಕ್ಲು ಬಳಿಯ ಬೆಟ್ಟ ಶ್ರೇಣಿಗಳಲ್ಲಿ ಎಎನ್ಎಫ್ ಪಡೆ ಕಾರ್ಯಾಚರಣೆ ನಡೆಸುತ್ತಿದೆ.

ಕೆಲ ದಿನದ ಹಿಂದೆ ಕೇರಳದ ವಯನಾಡು ಭಾಗದಲ್ಲಿ ನಕ್ಸಲ್ ಎನ್‌ಕೌಂಟರ್ ಆಗಿತ್ತು. ಘಟನೆ ಬಳಿಕ ಕೊಡಗಿನಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಅಲ್ಲಿಂದ ತಪ್ಪಿಸಿಕೊಂಡು ಬಂದಿರುವ ನಕ್ಸಲರು ಕೊಡಗಿನ ಅರಣ್ಯ ಭಾಗಕ್ಕೆ ಬರಬಹುದು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಎಎನ್ಎಫ್ ಪಡೆ ಕಾರ್ಯಾಚರಣೆ ಆರಂಭಿಸಿದೆ.‌

ಇಂದು ಮಡಿಕೇರಿಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೊಲೀಸ್ ಅಧಿಕಾರಿಗಳ ಜೊತೆ ಸಭೆ ನಡೆಸಿದ್ದು ಕೂಂಬಿಂಗ್ ಬಗ್ಗೆ ಮಾಹಿತಿ ಪಡೆಯಲಿದ್ದಾರೆ. ಸಭೆಯಲ್ಲಿ ದಕ್ಷಿಣ ವಲಯ ಐಜಿಪಿ ವಿಪುಲ್ ಕುಮಾರ್, ಕೊಡಗು ಎಸ್ಪಿ ಕ್ಷಮಾ ಮಿಶ್ರ, ಸೇರಿದಂತೆ ಪೊಲೀಸ್ ಆಧಿಕಾರಿಗಳು ಭಾಗಿಯಾಗಿದ್ದರು.