ಮೈಸೂರಿನಲ್ಲಿ ಕಿಡಿಗೇಡಿ ಕೃತ್ಯ ; ಗಾಂಧೀಜಿಯ ಕಂಚಿನ ಪ್ರತಿಮೆ ಭಗ್ನ !

06-11-20 06:02 pm       Headline Karnataka News Network   ಕರ್ನಾಟಕ

ನಗರದ ಸುಬ್ಬರಾಯನ ಕೆರೆಯ ಬಳಿಯಿರುವ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿದ್ದ ಉದ್ಯಾನದಲ್ಲಿ ಹಾಕಿದ್ದ ಗಾಂಧೀಜಿಯವರ ಪ್ರತಿಮೆಗೆ ಹಾನಿಗೊಳಿಸಲಾಗಿದೆ.

ಮೈಸೂರು, ನವೆಂಬರ್ 06: ಮೈಸೂರಿನ ಹೆಸರಾಂತ ಸ್ವಾತಂತ್ರ್ಯ ಉದ್ಯಾನವನದಲ್ಲಿ ಇರುವ ಗಾಂಧೀಜಿಯ ಕಂಚಿನ ಪ್ರತಿಮೆಯನ್ನು ಕಿಡಿಗೇಡಿಗಳು ಭಗ್ನಗೊಳಿಸಿದ್ದಾರೆ. ನಗರದ ಸುಬ್ಬರಾಯನ ಕೆರೆಯ ಬಳಿಯಿರುವ ಸ್ವಾತಂತ್ರ್ಯ ಹೋರಾಟಗಾರರ ಹೆಸರಿನಲ್ಲಿದ್ದ ಉದ್ಯಾನದಲ್ಲಿ ಹಾಕಿದ್ದ ಗಾಂಧೀಜಿಯವರ ಪ್ರತಿಮೆಗೆ ಹಾನಿಗೊಳಿಸಲಾಗಿದೆ.

ದಂಡಿಗೆ ಯಾತ್ರೆ ಸಾಗುತ್ತಿರುವ ರೀತಿಯ ಪ್ರತಿಮೆ ಇದಾಗಿದ್ದು, ಬಲಗೈಯಲ್ಲಿ ಕೋಲು ಹಿಡಿದುಕೊಂಡು ಸಾಗುವ ರೀತಿಯಿತ್ತು. ಕೈಯಲ್ಲಿದ್ದ ಕೋಲನ್ನು ಮುರಿದು ತೆಗೆಯಲಾಗಿದ್ದು, ಎಡಗೈಯನ್ನು ಮುರಿದು ವಿರೂಪಗೊಳಿಸಲಾಗಿದೆ. ಕಂಚಿನ ಪ್ರತಿಮೆಯಾಗಿದ್ದು, ಮೈಸೂರಿನ ಹೃದಯಭಾಗದಲ್ಲಿರುವುದರಿಂದ ಹೆಚ್ಚು ಜನ ಬಂದು ಹೋಗುವ ಪಾರ್ಕ್ ಇದಾಗಿತ್ತು.

ಸ್ಥಳೀಯರ ಪ್ರಕಾರ, ಯಾರೋ ಮಾದಕ ವ್ಯಸನಿಗಳು ಕೃತ್ಯ ಎಸಗಿದ್ದಾರೆ ಎನ್ನಲಾಗುತ್ತಿದೆ. ಗಾಂಧಿ ಪ್ರತಿಮೆ ಎದುರು ಸ್ಥಳೀಯರು ಸಾಂಕೇತಿಕ ಪ್ರತಿಭಟನೆ ನಡೆಸಿದ್ದು, ತಪ್ಪಿತಸ್ಥರನ್ನು ಬಂಧಿಸಿ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಉದ್ಯಾನವನಕ್ಕೆ ಸೂಕ್ತ ಭದ್ರತೆ ಒದಗಿಸಬೇಕೆಂದು ಆಗ್ರಹಿಸಿದ್ದಾರೆ. 

Miscreants Vandalise the Famous Bronze Gandhi Statue in Mysore. Public protest and also urge for tight security.