ಬ್ರೇಕಿಂಗ್ ನ್ಯೂಸ್
28-11-23 07:28 pm Bangalore Correspondent ಕರ್ನಾಟಕ
ಬೆಂಗಳೂರು, ನ 28: ರಾಜ್ಯದ ಕಾಂಗ್ರೆಸ್ನವರು ಅಮಲಿನಲ್ಲಿದ್ದಾರೆ. ಗ್ಯಾರಂಟಿ ನೀಡಿ ನಾವು ಗೆದ್ದಿದ್ದು ಅಂತ ಭ್ರಮೆಯಲ್ಲಿದ್ದಾರೆ ಎಂದು ಸಂಸದ ಡಿ.ವಿ. ಸದಾನಂದಗೌಡ ವಾಗ್ದಾಳಿ ನಡೆಸಿದ್ದಾರೆ.
ಮಲ್ಲೇಶ್ವರದ ಬಿಜೆಪಿ ಕಚೇರಿಯಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ನಮ್ಮ ಬಿಜೆಪಿಯವರ ಆಂತರಿಕ ಸಮಸ್ಯೆ, ಮತ್ತಿತರ ಕಾರಣಗಳಿಂದ ಕಾಂಗ್ರೆಸ್ ರಾಜ್ಯದಲ್ಲಿ ಗೆದ್ದಿದೆ ಅಷ್ಟೇ. ಗ್ಯಾರಂಟಿಗಳನ್ನು ಕೊಡುತ್ತೇವೆಂದು ಹೇಳಿದ್ದ ಕಾಂಗ್ರೆಸ್, ಈಗ ಸಮರ್ಪಕವಾಗಿ ಜನರಿಗೆ ಪೂರೈಸುತ್ತಿಲ್ಲ ಎಂದು ಆರೋಪಿಸಿದರು.
ಕರ್ನಾಟಕ ಸರ್ಕಾರದ ಜಾಹೀರಾತುಗಳು ತೆಲಂಗಾಣದಲ್ಲಿ: ತೆಲಂಗಾಣದಲ್ಲಿ ಜಾಹೀರಾತು ಕೊಟ್ಟಿರುವ ರಾಜ್ಯ ಸರ್ಕಾರಕ್ಕೆ ಚುನಾವಣಾ ಆಯೋಗದ ನೋಟಿಸ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕರ್ನಾಟಕದ ಜಾಹೀರಾತುಗಳು ಎಲ್ಲಿರಬೇಕಿತ್ತೋ ಅಲ್ಲಿ ಇಲ್ಲ. ತೆಲಂಗಾಣದಲ್ಲಿ ಕಾಂಗ್ರೆಸ್ನವ್ರು ತಮ್ಮ ಫ್ರಿಬೀಸ್ಗಳ ಜಾಹೀರಾತು ಕೊಟ್ಟಿದ್ದಾರೆ. ಕಾಂಗ್ರೆಸ್ ರಾಜ್ಯದ ಜನರ ತೆರಿಗೆ ಹಣ ಪೋಲು ಮಾಡಿದೆ. ಹೀಗಾಗಿ ಚುನಾವಣಾ ಆಯೋಗ ರಾಜ್ಯ ಸರ್ಕಾರಕ್ಕೆ ನೋಟಿಸ್ ಕೊಟ್ಟಿದೆ. ಆಯೋಗ ಖಂಡಿತ ಈ ಸರ್ಕಾರದ ವಿರುದ್ಧ ಕ್ರಮ ತೆಗೆದುಕೊಳ್ಳುತ್ತದೆ ಎಂದು ಡಿವಿಎಸ್ ಹೇಳಿದರು.
ಫ್ರೀ ಬೀಸ್ ಜಾಹೀರಾತು:ತೆಲಂಗಾಣದಲ್ಲಿ ಫ್ರೀ ಬೀಸ್ ಜಾಹೀರಾತು ಹಾಕಿ, ಕರ್ನಾಟಕದ ಹಣ ದುರುಪಯೋಗ ಮಾಡುತ್ತಿರುವುದು ಕಂಡುಬಂದಿದೆ. ರಾಜ್ಯದ ಖಜಾನೆ ಬರ್ಬಾದ್ ಮಾಡಲು ಹೊರಟಿದ್ದಾರೆ. ರಾಜ್ಯದ ವಿಚಾರ ಜಾಹೀರಾತು ಮಾಡಬಾರದು ಅಂತಿಲ್ಲ. ಅದಕ್ಕೆ ಕಾಲ ಸನ್ನಿವೇಶ ಇದೆ. ಕರ್ನಾಟಕ ಕುಲಗೆಡಿಸಿರುವಂತೆ, ತೆಲಂಗಾಣ ರಾಜ್ಯ ಕುಲಗೆಡಿಸಲು ಹೊರಟಿದೆ. ಕರ್ನಾಟಕದ ಹಣ ಲೂಟಿ ಮಾಡಿ ಚುನಾವಣೆ ಮಾಡುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಅಲ್ಲಿ ಖರ್ಚು ಮಾಡಿದ ಹಣ ಕಾಂಗ್ರೆಸ್ ನವರಿಗೆ ಎಲ್ಲಿಂದ ಬಂತು?. ಇದರ ಬಗ್ಗೆ ಕಾಂಗ್ರೆಸ್ ಸ್ಪಷ್ಟನೆ ಕೊಡಬೇಕಿದೆ. ಜನ ದುರುಪಯೋಗ ಮಾಡುವುದರ ವಿರುದ್ಧ ನಿಲ್ಲಬೇಕು. ಮುಂದಿನ ದಿನಗಳಲ್ಲಿ ಜನ ತೀರ್ಮಾನ ಮಾಡಬೇಕು ಎಂದರು.
D. V. Sadananda Gowda slams Congress in Bangalore over telagana elections.
21-02-25 10:47 pm
Bangalore Correspondent
Rohini Sindhuri, Roopa moudgil, latest news:...
21-02-25 10:12 pm
Santosh Lad, Modi, Nitin Gadkari: ಬಿಜೆಪಿ ಅಧಿಕ...
21-02-25 04:36 pm
Bidar accident, Prayagraj, five killed; ಬೀದರ್...
21-02-25 02:00 pm
Siddaramaiah, MUDA case, Vijayendra: ಮುಡಾ ಹಗರ...
20-02-25 10:06 pm
21-02-25 01:23 pm
HK News Desk
Tesla Musk-Modi meeting: ಮೋದಿ- ಎಲಾನ್ ಮಸ್ಕ್ ಭೇ...
21-02-25 12:17 pm
ವಿಶ್ವದ ಪ್ರಬಲ ತನಿಖಾ ಸಂಸ್ಥೆ ಎಫ್ಬಿಐಗೆ ಕಾಶ್ ಪಟೇ...
21-02-25 10:36 am
MLA Rekha Gupta, Delhi Chief Minister: ದೆಹಲಿ...
19-02-25 11:00 pm
ಬಾಲಕನಿದ್ದಾಗ ನುಂಗಿದ್ದ ಪೆನ್ ಕ್ಯಾಪ್ ; 21 ವರ್ಷ ಕಳ...
19-02-25 06:41 pm
21-02-25 08:22 pm
Giridhar Shetty, Mangaluru
Thumbay Group, Fergana College, Uzbekistan: ಉ...
21-02-25 07:54 pm
Mangalore, Ullal, B R Rao, Kannada literary c...
21-02-25 07:21 pm
Mangalore Congress, Satish Jarkiholi; ಗಾಂಧಿ-...
21-02-25 12:40 am
Protest Mangalore, 400 KV, Catholic sabha: ಉಡ...
20-02-25 06:48 pm
20-02-25 01:22 pm
Mangalore Correspondent
Mangalore, Puttur, Cheating, paras traders: ಲ...
19-02-25 09:26 pm
Mangalore CCB police, 119 kg ganja, Crime: ಮೀ...
18-02-25 07:19 pm
Madikeri police, Fake Scheme, Mangalore crime...
18-02-25 06:04 pm
Mangalore Crime, Surathkal, Car: ಮದುವೆ ಸಮಾರಂಭ...
18-02-25 12:11 pm