ಬ್ರೇಕಿಂಗ್ ನ್ಯೂಸ್
29-05-25 02:19 pm HK News Desk ಕರ್ನಾಟಕ
ಬಾಗಲಕೋಟೆ, ಮೇ 29 : ಕೊರೋನಾ ಆತಂಕದ ಮಧ್ಯೆ ರಾಜ್ಯದಲ್ಲಿ ಆಫ್ರಿಕನ್ ಹಂದಿ ಜ್ವರ ಕಾಣಿಸಿಕೊಂಡಿರುವುದು ದೃಢಪಟ್ಟಿದೆ. ಬಾಗಲಕೋಟೆ ವ್ಯಾಪ್ತಿಯ ಸಾಕಾಣಿಕಾ ಕೇಂದ್ರಗಳ ಹಂದಿಗಳಲ್ಲಿ ಆಪ್ರಿಕನ್ ಹಂದಿ ಜ್ವರ ಕಂಡುಬಂದಿದ್ದು ಸಾಮೂಹಿಕ ಹತ್ಯೆಗೈದು ವಿಲೇವಾರಿ ಮಾಡಲು ರಾಜ್ಯ ಸರ್ಕಾರ ಆದೇಶ ಮಾಡಿದೆ.
ಕೇರಳ ಇಲ್ಲವೇ ಗೋವಾದಿಂದ ತರಿಸಿಕೊಂಡ ಹಂದಿಗಳಿಂದ ಜ್ವರ ಬಂದಿರುವ ಶಂಕೆಯಿದೆ. ಬಾಗಲಕೋಟೆ ಜಿಲ್ಲೆಯ
ಗೊರಬಾಳ ಗ್ರಾಮದ ಹಂದಿಗಳ ಸಾಕಾಣಿಕಾ ಕೇಂದ್ರದಲ್ಲಿ ಜ್ವರ ಪತ್ತೆಯಾಗಿದೆ. ಬಾಗಲಕೋಟೆ ಜಿಲ್ಲೆಯಾದ್ಯಂತ ಈಗಾಗಲೇ 20ಕ್ಕೂ ಅಧಿಕ ಸಾಕಾಣಿಕೆ ಕೇಂದ್ರಗಳಿದ್ದು ಹಂದಿ ಸಾಕಾಣಿಕೆದಾರರು ಆತಂಕಗೊಂಡಿದ್ದಾರೆ.
ಆಫ್ರಿಕನ್ ಜ್ವರ ಕಾಣಿಸಿಕೊಂಡ ಸುತ್ತಮುತ್ತಲಿನ ಪ್ರದೇಶ ನಿಷೇಧಿತ ಪ್ರದೇಶ ಎಂದು ಘೋಷಣೆ ಮಾಡಿದ್ದಾರೆ. ಮೇ 15ರಂದು ಬಾಗಲಕೋಟೆಯಿಂದ ಭೋಪಾಲ್ ನ ಲ್ಯಾಬೊರೇಟರಿಗೆ ಹಂದಿಗಳ ರಕ್ತದ ಮಾದರಿ ರವಾನಿಸಿದ್ದು ಮೇ 22ರಂದು ಬಂದಿರುವ ವರದಿಯಲ್ಲಿ ಹಂದಿಗಳಿಗೆ ಆಫ್ರಿಕನ್ ಜ್ವರ ಇರೋದು ಧೃಢವಾಗಿದೆ. ಇದರ ಬೆನ್ನಲ್ಲೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧಿಸೂಚನೆ ಪ್ರಕಟಿಸಿದ್ದು ಸಾಮೂಹಿಕ ವಿಲೇವಾರಿಗೆ ಸೂಚನೆ ನೀಡಿದ್ದಾರೆ.
ಇದರಂತೆ, ಬಾಗಲಕೋಟೆ ಜಿಲ್ಲೆಯಲ್ಲಿ ಮೂರು ರ್ಯಾಪಿಡ್ ಟೀಮ್ ಕಾರ್ಯಾಚರಣೆ ಮಾಡುತ್ತಿದ್ದು ಬಾಗಲಕೋಟೆ ಜಿಲ್ಲೆಯಿಂದ ಮೂರು ತಿಂಗಳ ಕಾಲ ಯಾವುದೇ ರೀತಿಯ ಹಂದಿಗಳನ್ನು ಆಮದು ಅಥವಾ ರಫ್ತು ಮಾಡುವುದು ನಿಷೇಧ ಮಾಡಲಾಗಿದೆ. ರೋಗ ಪತ್ತೆಯಾದ ಜಾಗದಿಂದ 1 ಕಿಮೀ ರೋಗಪೀಡಿತ ವಲಯ, 1 ರಿಂದ 10 ಕಿಮೀ ಜಾಗೃತ ವಲಯ ಎಂದು ಘೋಷಣೆ ಮಾಡಲಾಗಿದೆ.
ರೋಗ ಪೀಡಿತ ವಲಯ ವ್ಯಾಪ್ತಿಯ ಹಂದಿಗಳ ವಿಲೇವಾರಿಗೆ ಸೂಚನೆ ನೀಡಲಾಗಿದೆ. ಎರಡು ಹಂದಿಗಳ ಸಾಕಾಣಿಕೆ ಕೇಂದ್ರದ 130 ಹಂದಿಗಳ ವಧೆ ಮತ್ತು ವೈಜ್ಞಾನಿಕ ವಿಲೇವಾರಿಗೆ ಸೂಚಿಸಲಾಗಿದೆ. ಇದೇ ವೇಳೆ, ಬಾಗಲಕೋಟೆ ಜಿಲ್ಲೆಯ 18 ಸಾಕಾಣಿಕಾ ಕೇಂದ್ರದಲ್ಲಿರುವ 20 ಸಾವಿರ ಹಂದಿಗಳಿಗೆ ಮುಂಜಾಗ್ರತಾ ಕ್ರಮವಾಗಿ ವ್ಯಾಕ್ಸಿನ್ ನೀಡಲಾಗಿದೆ.
Amid COVID Concerns, African Swine Fever Confirmed in Karnataka, Outbreak Detected in Bagalkote District, Ban on Pork Transport Imposed.
26-10-25 07:33 pm
Bangalore Correspondent
ಪ್ರೀತಿ ನೆಪದಲ್ಲಿ ಹಿಂದು ಯುವತಿಗೆ ಮೋಸ ; ಮದುವೆಯಾಗಲ...
25-10-25 09:33 pm
ಸಾರ್ವಜನಿಕರೊಂದಿಗೆ ಮಾತನಾಡುವಾಗ ಒರಟು ಭಾಷೆ ಬೇಡ, ಯಾ...
25-10-25 09:04 pm
"ಎ" ಖಾತೆ ಪರಿವರ್ತಿಸುವ ಸರ್ಕಾರದ ಬೋಗಸ್ ಸ್ಕೀಂ ;...
25-10-25 09:00 pm
ಸಿಎಂ ಬದಲಾವಣೆ ಹೇಳಿಕೆಯ ಬಗ್ಗೆ ಯತೀಂದ್ರನನ್ನು ಕೇಳ್ದ...
24-10-25 09:35 pm
26-10-25 11:01 pm
HK News Desk
ಅಂಗೈಯಲ್ಲಿ ಡೆತ್ ನೋಟ್ ಬರೆದಿಟ್ಟು ಸರ್ಕಾರಿ ವೈದ್ಯೆ...
26-10-25 05:38 pm
ಮುಂದಿನ ವಾರದಿಂದಲೇ ತಮಿಳುನಾಡಿನಲ್ಲಿ ಮತದಾರ ಪಟ್ಟಿಯ...
25-10-25 09:36 pm
Vemuri Kaveri Travels Bus Accident, Fire, Ill...
25-10-25 02:28 pm
Kurnool Bus Fire, Accident, Latest News: ಹೈದರ...
24-10-25 05:43 pm
26-10-25 04:42 pm
Mangalore Correspondent
ಮುಸ್ಲಿಂ ಮಹಿಳೆಯರಿಗೆ ಅವಮಾನ ಆರೋಪ ; ಆರೆಸ್ಸೆಸ್ ಮುಖ...
26-10-25 02:12 pm
ಚಿತ್ತಾಪುರದಲ್ಲಿ ಆರೆಸ್ಸೆಸ್ ಪಥಸಂಚಲನ ಆಗೇ ಆಗುತ್ತೆ,...
25-10-25 08:08 pm
SIT Dharmasthala Case, Soujanya Case: ಎಸ್ಐಟಿ...
25-10-25 05:02 pm
ಸುಬ್ರಹ್ಮಣ್ಯ - ಸಕಲೇಶಪುರದಲ್ಲಿ ರೈಲ್ವೇ ವಿದ್ಯುದೀಕರ...
25-10-25 02:36 pm
25-10-25 10:00 pm
Bangalore Correspondent
SP Arun, Puttur: ಗೋಸಾಗಾಟ ತಡೆದ ಪ್ರಕರಣ ; ಯಾವುದೇ...
25-10-25 02:14 pm
Surathkal Murder Attempt, Arrest, Crime; ಸುರತ...
24-10-25 08:20 pm
Surathkal Stabbing, Crime, Mangalore: ಸುರತ್ಕಲ...
24-10-25 10:07 am
ನೀವು ಮೋಸದ ಕರೆ ಮಾಡಿ ವಂಚಿಸುತ್ತಿದ್ದೀರಿ ಎಂದು ಹೇಳಿ...
23-10-25 06:53 pm