ಬ್ರೇಕಿಂಗ್ ನ್ಯೂಸ್
15-08-26 04:52 pm HK News Staffer ಕರಾವಳಿ
ಮಂಗಳೂರು, ಆ.15: ಪಾನ್ ಮಸಾಲಾದಲ್ಲಿ ನಿಕೋಟಿನ್, ತಂಬಾಕು ಹೆಚ್ಚಿರುವುದರಿಂದ ಗುಟ್ಕಾ ಬ್ಯಾನ್ ಮಾಡಲಾಗಿದೆ. ಪ್ರತ್ಯೇಕವಾಗಿ ಪಾನ್ ಮಸಾಲ ಮಾತ್ರ ಬರೋದಾದ್ರೆ ನಮ್ಮ ನಿರ್ಬಂಧ ಇಲ್ಲ. ಇದರಿಂದ ಅಡಿಕೆ ಬೆಳೆಗಾರರಿಗೆ ಅಥವಾ ವ್ಯಾಪಾರಸ್ಥರಿಗೆ ಯಾವ ತೊಂದರೆಯೂ ಆಗಲ್ಲ ಎಂದು ಆರೋಗ್ಯ ಸಚಿವ ಯು.ಟಿ ಖಾದರ್ ಹೇಳಿದ್ದಾರೆ.
2014ರಲ್ಲಿ ಗುಟ್ಕಾ ನಿಷೇಧ ಮಾಡಿದಾಗಲೂ ಇದೇ ರೀತಿ ಆಗಿತ್ತು. ಆದರೆ ಆಗಲೂ ಅಡಿಕೆ ಬೆಲೆ ಕಡಿಮೆ ಆಗಿಲ್ಲ, ಜಾಸ್ತಿ ಆಗಿತ್ತು. ಈಗಲೂ ಮೂರು ತಿಂಗಳು ಕಾಯಿರಿ, ಆ ಬಳಿಕ ಹೇಳುತ್ತೇನೆ. ಇದನ್ನ ನಾನು ರಾಜಕೀಯ ಮಾಡಲ್ಲ, ನಮ್ಮದು ಆರೋಗ್ಯಕ್ಕೆ ಪೂರಕ ಉದ್ದೇಶ. ಇವರು ಗುಟ್ಕಾ ಲಾಬಿಗೆ ಮಣಿದು ನಮ್ಮನ್ನ ವಿರೋಧ ಮಾಡ್ತಾ ಇದಾರೆ ಅಂತ ಆರೋಪ ಇದೆ. ಅಡಿಕೆಗೂ ಗುಟ್ಕಾ ನಿಷೇಧಕ್ಕೂ ಸಂಬಂಧ ಇಲ್ಲ ಎನ್ನೋದನ್ನು ಹೇಳುತ್ತೇನೆ ಎಂದರು.
ಸಾರ್ವಜನಿಕ ಸ್ಥಳಗಳಲ್ಲಿ ಧಾರ್ಮಿಕ ಚಟುವಟಿಕೆ ನಿರ್ಬಂಧ ಕಾಯಿದೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಸಂವಿಧಾನ, ಕಾನೂನಿಗೆ ಅನುಗುಣವಾಗಿ ಸರ್ಕಾರ ತೀರ್ಮಾನ ತೆಗೆದುಕೊಳ್ಳಲಿದೆ. ಕಾಂಗ್ರೆಸ್ ಸರ್ಕಾರ ಕುಳಿತು ಚರ್ಚಿಸಿ ಇದರ ಬಗ್ಗೆ ತೀರ್ಮಾನ ಮಾಡಲಿದೆ. ಜನರಿಗೆ ತೊಂದರೆ ಆಗದಂತೆ ನಾವು ಪ್ರತಿಪಕ್ಷ ನಾಯಕರ ಜೊತೆಗೂ ಚರ್ಚಿಸ್ತೇವೆ. ಸರ್ಕಾರ ಜನಸಾಮಾನ್ಯರಿಗೆ ತೊಂದರೆ ಕೊಡುವುದಾಗಲೀ, ಸಂವಿಧಾನದ ವಿರುದ್ಧ ತೀರ್ಮಾನ ತೆಗೊಳ್ಳುವುದಾಗಲೀ ಮಾಡಲ್ಲ ಎಂದರು.
ಜಮೀರ್ ಆಹ್ಮದ್ ಸ್ವಾತಂತ್ರ್ಯ ಧ್ವಜಾರೋಹಣ ನಿರಾಕರಿಸಿದ್ದಕ್ಕೆ ಪ್ರತಿಕ್ರಿಯೆ ನೀಡಿದ ಖಾಸರ್, ಜಮೀರ್ ಅವರ ದೇಶಪ್ರೇಮ ಬೇರೆಯವರಿಗಿಂತ ಹೆಚ್ಚಿದೆ. ದೇಶದ ಸತ್ಪ್ರಜೆಯಾಗಿ ಸೌಹಾರ್ದತೆ ಮತ್ತು ದೇಶಪ್ರೇಮ ತೋರಿಸಿದ್ದಾರೆ. ಕೆಲವೊಂದು ಕಾರಣದಿಂದ ಇವತ್ತಿನ ಕಾರ್ಯಕ್ರಮ ಬರಲು ಆಗಲ್ಲ ಎಂದು ಹೇಳಿದ್ದಾರೆ. ಅವರು ಬರೆದ ಪತ್ರದಲ್ಲಿ ಒಂದೆರಡು ಅಕ್ಷರ ಹೆಚ್ಚು ಕಡಿಮೆ ಆಗಿದೆ. ಅವರ ಉದ್ದೇಶ ಸರಿಯಿದೆ, ಅದನ್ನ ನಾವು ಅರ್ಥ ಮಾಡಿಕೊಳ್ಳಬೇಕು. ಅದನ್ನೇ ಅಪಾರ್ಥ ಮಾಡಿಕೊಂಡು ರಾಜಕೀಯ ಮಾಡೋದು ಸರಿಯಲ್ಲ
ಅವರಿಗೆ ಕಡೆ ಘಳಿಗೆಯಲ್ಲಿ ಅವರಿಗೆ ಹೋಗಲು ಆಗದೇ ಪತ್ರ ಬರೆದಿದ್ದಾರೆ. ದೇಶದ ಎಲ್ಲರಿಗೂ ದೇಶ ಪ್ರೇಮ ಇದೆ, ಜಮೀರ್ ಆಹ್ಮದ್ ಅವರಿಗೂ ಇದೆ. ಎಲ್ಲರೂ ಪ್ರೀತಿ, ವಿಶ್ವಾಸದಿಂದ ಒಗ್ಗಟ್ಟಿನಿಂದ ಅಭಿವೃದ್ಧಿಯ ಕರ್ನಾಟಕ ನಿರ್ಮಿಸೋಣ. ಜಮೀರ್ ಅವರಿಗೆ ಖಾತೆ ಬಗ್ಗೆ ಅಸಮಾಧಾನ ಇಲ್ಲ, ಅದು ಹೈಕಮಾಂಡ್ ಕೊಟ್ಟಿರೋದು. ಎಲ್ಲರೂ ಒಪ್ಪಿಕೊಂಡೇ ಈ ತೀರ್ಮಾನ ಆಗಿದೆ, ಜಮೀರ್ ಕೂಡ ಒಪ್ಪಿದ್ದಾರೆ ಎಂದರು.
10-09-26 05:10 pm
HK News Staffer
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
10-09-26 09:24 pm
HK News Staffer
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ;...
09-09-26 03:29 pm
ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವ...
09-09-26 02:03 pm
10-09-26 09:22 pm
HK News Staffer
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm
ಬೆಳ್ಳಾರೆ ಸರ್ಕಾರಿ ಬಾಲಕಿಯರ ಹಾಸ್ಟೆಲ್ನಲ್ಲಿ ಬಟ್ಟೆ...
09-09-26 07:45 pm