ಬ್ರೇಕಿಂಗ್ ನ್ಯೂಸ್
01-08-25 09:09 pm Bangalore Correspondent ಕರ್ನಾಟಕ
ಬೆಂಗಳೂರು, ಆ.1 : ಕಾಶ್ಮೀರಿ ಫೈಲ್ಸ್, ಕೇರಳ ಫೈಲ್ಸ್ ರೀತಿಯಲ್ಲೇ ಧರ್ಮಸ್ಥಳ ಫೈಲ್ಸ್ ಹೆಸರಿನಲ್ಲಿ ಚಲನಚಿತ್ರ ಮಾಡಲು ರೆಡಿ ಮಾಡಿಕೊಳ್ಳಲಾಗಿದೆ. ಸುದ್ದಿ ವಾಹಿನಿ ಜೊತೆಗೆ ನಿರ್ಮಾಪಕ ಎ.ಗಣೇಶ್, ಧರ್ಮಸ್ಥಳ ಫೈಲ್ಸ್ ಸಿನಿಮಾ ತೆಗೆಯುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಸಿನಿಮಾ ಮಾಡಲು ಫಿಲಂ ಚೇಂಬರ್ ನಿಂದ ಅನುಮತಿ ಸಿಕ್ಕಿದೆ ಎಂದು ತಿಳಿಸಿದ್ದಾರೆ.
'ಧರ್ಮಸ್ಥಳ ಫೈಲ್ಸ್' ಹೆಸರಿನಲ್ಲಿ 20 ದಿನಗಳ ಹಿಂದೆಯೇ ಟೈಟಲ್ ಬುಕ್ ಮಾಡಿದ್ದೆವು. ಧರ್ಮಸ್ಥಳ ಫೈಲ್ಸ್ ಸಿನಿಮಾ ಮತ್ತು ವೆಬ್ ಸಿರೀಸ್ ಮಾಡೋಕೆ ಪ್ಲಾನ್ ಇದೆ. ಫಿಲಂ ಚೇಂಬರ್ ನಲ್ಲಿ ಈಗಾಗಲೇ ಟೈಟಲ್ ರಿಜಿಸ್ಟರ್ ಮಾಡಿಸಿದ್ದೇವೆ. ಚಿತ್ರದ ಕತೆ ಏನೆಂದು ಇನ್ನಷ್ಟೇ ಆಗಬೇಕಿದೆ. ಧರ್ಮಸ್ಥಳದಲ್ಲಿ ಆಗ್ತಿರೋ ಬೆಳವಣಿಗೆ ಆಧರಿಸಿ ಚಿತ್ರ ಮಾಡಲಾಗುತ್ತದೆ. ಧರ್ಮಸ್ಥಳದ ಧರ್ಮಾಧಿಕಾರಿ ಬಳಿ ಪರ್ಮಿಶನ್ ಪಡೆದೇ ಚಿತ್ರ ಮಾಡುತ್ತೇವೆ. ವಾಸ್ತವ ವಿಚಾರ, ನೈಜತೆಯನ್ನು ಒಳಗೊಂಡು ಚಿತ್ರ ಕತೆ ಮಾಡುತ್ತೇವೆ ಎಂದು ಗಣೇಶ್ ಹೇಳಿದ್ದಾರೆ.
ಕಾನೂನು ತೊಡಕು ಉಂಟಾದ್ರೆ ಅದರ ಪ್ರಕ್ರಿಯೆ ಪಾಲಿಸಿಕೊಂಡು ಸಿನಿಮಾ ಮಾಡಲಾಗುವುದು. ವಿಕೆ ಪ್ರಕಾಶ್ ಎನ್ನುವ ಮಲಯಾಳಿ ನಿರ್ದೇಶಕರಿಂದ ಸಿನಿಮಾ ಮಾಡ್ಸೋ ಪ್ಲಾನ್ ಇದೆ. ಎಂ.ಎಸ್ ರಮೇಶ್ ಅವರಿಂದ ಚಿತ್ರದ ಕರೆ ತಯಾರು ಮಾಡ್ತಿದೇವೆ. ಶ್ರೀರಾಮ್ ಸೇರಿದಂತೆ ಹಲವು ಸಿನಿಮಾ ಮಾಡಿರೋ ನಿರ್ದೇಶಕರಿಂದ ಕಥೆ ತಯಾರಾಗ್ತಿದೆ. ಓಂ ಶ್ರೀ ಚಾಮುಂಡೇಶ್ವೇರಿ ಪ್ರೋಡಕ್ಷನ್ ಬ್ಯಾನರಿನಡಿ ಚಿತ್ರ ತಯಾರಾಗ್ತಿದೆ ಎಂದು ಹೇಳಲಾಗುತ್ತಿದೆ.
ಧರ್ಮಸ್ಥಳದಲ್ಲಿ ನೂರಾರು ಹೆಣಗಳನ್ನು ಹೂತಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳಿರುವುದು ದೇಶಾದ್ಯಂತ ಸಂಚಲನ ಎಬ್ಬಿಸಿದ್ದು ಧರ್ಮಸ್ಥಳ ಫೈಲ್ಸ್ ಎನ್ನುವ ಹಾಗೆ ಬಿಂಬಿಸಲಾಗಿದೆ. ಇದನ್ನೇ ಬಂಡವಾಳ ಮಾಡಿಕೊಳ್ಳಲು ಚಿತ್ರ ತಂಡವೊಂದು ಸಿನಿಮಾ ಮಾಡಲು ಹೊರಟಿದ್ದು ಟೈಟಲ್ ರಿಜಿಸ್ಟರ್ ಮಾಡಿಕೊಂಡಿದೆ. ಇದೀಗ ಕನ್ನಡದ ನಿರ್ಮಾಪಕರಾದ ಎ. ಗಣೇಶ್ ಅವರು ಈ ಸಿನಿಮಾ ನಾನು ಮಾಡ್ತಿದ್ದೇನೆ ಎಂದು ಹೇಳಿಕೆ ನೀಡಿದ್ದು ಮುಂದಿನ ಬೆಳವಣಿಗೆ ಬಗ್ಗೆ ಕುತೂಹಲ ಮೂಡಿಸಿದೆ. .
In the backdrop of national discussions around controversial films like The Kashmir Files and The Kerala Story, a new Kannada film titled Dharmasthala Files is now in the pipeline. Kannada film producer A. Ganesh has announced the project and confirmed that the title has already been registered with the Film Chamber of Commerce.
14-08-26 08:42 pm
HK News Staffer
ಗುಟ್ಕಾ-ಪಾನ್ ಮಸಾಲಾ ನಿಷೇಧಕ್ಕೆ 48 ಗಂಟೆಯಲ್ಲೇ ಯು-...
14-08-26 05:32 pm
ಅನುಭವ ಇಲ್ಲದ ಮಂಗ ಯತೀಂದ್ರಗೆ ಮೈಸೂರು ಜಿಲ್ಲಾ ಉಸ್ತು...
13-08-26 10:19 pm
ಆದಿವಾಸಿ ಮತ್ತು ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ವಿ...
13-08-26 08:09 pm
ಜೈಲಿನಲ್ಲಿದ್ದರೂ ಚಟ ಬಿಡದ ಪ್ರಜ್ವಲ್ ರೇವಣ್ಣ ! ಪೆನ್...
13-08-26 07:14 pm
11-08-26 10:25 pm
HK News Staffer
ಇಬ್ಬರು ಸಹೋದರಿಯರ ಇಸ್ಲಾಂ ಮತಾಂತರ ಎತ್ತಿಹಿಡಿದ ಅಲಹಾ...
11-08-26 04:49 pm
ಕಾಶ್ಮೀರಿ ಪಂಡಿತರನ್ನು ಗುರಿಯಾಗಿಸಿ ಉಗ್ರರ ಬೆದರಿಕೆ...
11-08-26 04:32 pm
ಮೋದಿ ಸೆಲ್ಫಿ ವಿಡಿಯೋ ತೆಗೆದು ಹಾಕಿದ್ದ ಫೇಸ್ಬುಕ್ ಕಂ...
05-08-26 08:36 pm
ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ನಿಂದ ಕ್ಯಾನ್ಸರ್ ಆ...
01-08-26 05:17 pm
14-08-26 10:23 pm
Mangaluru Staffer
ಮಂಗಳೂರು ವಿಮಾನ ದುರಂತದ ಕಹಿನೆನಪು ಬಾಲಕಿಯ ಮನದಲ್ಲಿ...
14-08-26 02:07 pm
Valachil Accident, Mangalore: ವಳಚ್ಚಿಲ್ ಬಳಿ ಕಾ...
12-08-26 11:06 pm
ಸಾರ್ವಜನಿಕ ಕೆಲಸಕ್ಕೆ ಲಂಚದ ಆರೋಪ; ಮಂಗಳೂರು, ಬೆಳ್ತಂ...
12-08-26 02:08 pm
ದಕ್ಷಿಣ ಕನ್ನಡ ಡಿಸಿ ಸರ್ಕಾರಿ ನಿವಾಸದ ನಾಮಫಲಕದಲ್ಲಿ...
12-08-26 11:32 am
15-08-26 02:06 pm
HK News Staffer
Belthangady Couple Suicide, Bangalore: ಬೆಂಗಳೂ...
15-08-26 01:28 pm
ಕೋಟೆಕಾರಿನಲ್ಲಿ ಕಟ್ಟಡದಿಂದ ಬಿದ್ದು ಗಾಯಗೊಂಡ ವಲಸೆ ಕ...
14-08-26 09:09 pm
ಬಹುಕೋಟಿ ವಂಚಕ ಶಿವಾನಂದ ನೀಲಣ್ಣವರ್ ಮಂಗಳೂರಿನಲ್ಲಿ ಬ...
14-08-26 08:49 pm
ಬ್ರಹ್ಮಾವರದಲ್ಲಿ ಮೀಟರ್ ಬಡ್ಡಿ ಸಾಲ ನೀಡಿ ಕಿರುಕುಳ ;...
14-08-26 10:22 am