ಬ್ರೇಕಿಂಗ್ ನ್ಯೂಸ್
19-03-21 04:09 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.19 : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನೆ ಮುಂದೆ ಗನ್ ಮ್ಯಾನ್ ಮತ್ತು ವಾಹನ ಚಾಲಕ ಕಿತ್ತಾಡಿಕೊಂಡಿದ್ದು ಇಬ್ಬರು ಸಿಬ್ಬಂದಿಗಳ ಹೊಡೆದಾಟ ಬಿಡಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ.

ಸಚಿವ ಸುಧಾಕರ್ ಮನೆಯ ಖಾಸಗಿ ಚಾಲಕ ಸೋಮಶೇಖರ್ ಮತ್ತು ಗನ್ಮ್ಯಾನ್ ತಿಮ್ಮಯ್ಯ ಪರಸ್ಪರ ಬೀದಿಯಲ್ಲಿ ಹೊಡೆದಾಡಿದವರು. ನಿನ್ನೆ ಡಾ.ಕೆ.ಸುಧಾಕರ್ ಅವರು ತನ್ನ ಮನೆ ಬಳಿ ಬರುವ ವೇಳೆಗೆ ಟೀ ಮಾರುತ್ತಿದ್ದ ಅಂಗವಿಕಲ ವ್ಯಕ್ತಿಯೋರ್ವರು ಅಡ್ಡ ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವರ ಗನ್ಮ್ಯಾನ್ ತಿಮ್ಮಯ್ಯ, ಟೀ ಮಾರುವ ವಿಶೇಷಚೇತನ ವ್ಯಕ್ತಿಗೆ ಹೊಡೆದಿದ್ದಾರೆ. ಗನ್ ಮ್ಯಾನ್ ಒಬ್ಬ ವಿಶೇಷಚೇತನ ವ್ಯಕ್ತಿಯ ಮೇಲೆ ಕೈಮಾಡಿದ್ದು ಅಲ್ಲಿದ್ದ ಎಲ್ಲರಿಗೂ ಬೇಸರ ತರಿಸಿದೆ.

ಘಟನೆ ಬಳಿಕ ಈ ವಿಚಾರದಲ್ಲಿ ಸ್ಥಳೀಯರು ತಿಮ್ಮಯ್ಯನನ್ನು ಪ್ರಶ್ನೆ ಮಾಡಿದ್ದರು. ಘಟನೆ ನೋಡಿದ್ದ ಖಾಸಗಿ ವಾಹನ ಚಾಲಕ ಸೋಮಶೇಖರ್ ಸಚಿವರಿಗೆ ಈ ಬಗ್ಗೆ ದೂರು ನೀಡಿರಬಹುದು ಎಂಬ ಅನುಮಾನದಲ್ಲಿ ಇಂದು ಬೆಳಗ್ಗೆ ಸೋಮಶೇಖರ್ ನನ್ನು ಪ್ರಶ್ನೆ ಮಾಡಿದ್ದಾನೆ. ‘ನಾನು ಟೀ ಮಾರಾಟಗಾರನಿಗೆ ಹಲ್ಲೆ ನಡೆಸಿದ್ದನ್ನು ನೀನು ಸಚಿವರಿಗೆ ಹೇಳಿದ್ದೀಯಾ’ ಎಂದು ಕೂಗುತ್ತಾ ಸೋಮಶೇಖರ್ ಮೇಲೆ ತಿಮ್ಮಯ್ಯ ಕೈಎತ್ತಿದ್ದಾನೆ. ಈ ಘಟನೆ ಸಚಿವ ಸುಧಾಕರ್ ಮನೆ ಮುಂದಿನ ರಸ್ತೆಯಲ್ಲೇ ನಡೆದಿದ್ದು ರಸ್ತೆಯಲ್ಲಿ ಇಬ್ಬರೂ ತಾವು ಸಚಿವರ ಸಿಬಂದಿ ಅನ್ನುವ ಪರಿವೇ ಇಲ್ಲದೆ ಹೊರಳಾಡಿದ್ದಾರೆ. ಸಿಬಂದಿಗಳಿಬ್ಬರು ಹೊಡೆದಾಟ, ಹೊರಳಾಡಿರುವ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಟೀಕೆ ಕೇಳಿಬಂದಿದೆ.

ಡಾ.ಕೆ.ಸುಧಾಕರ್ ಅವರ ಮನೆ ಸಮೀಪವೇ ರಮೇಶ್ ಜಾರಕಿಹೊಳಿ ಅವರ ಮನೆಯಿದೆ. ಸೀಡಿ ಪ್ರಕರಣದ ಬಳಿಕ ಮಾಧ್ಯಮ ಸಿಬ್ಬಂದಿಗಳು ಅವರ ಮನೆ ಮುಂದೆ ಇರುವುದು ವಾಡಿಕೆಯಾಗಿದ್ದರೆ, ಕೊರೊನಾ ಸೋಂಕಿನ ಆತಂಕದಿಂದಾಗಿ ಡಾ.ಕೆ.ಸುಧಾಕರ್ ಮನೆ ಬಳಿಯೂ ವಿವರ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಇರುತ್ತಾರೆ. ಇದೆಲ್ಲ ಗೊತ್ತಿದ್ದರೂ, ಹೀಗೆ ನಡುರಸ್ತೆಯಲ್ಲಿ ಸಚಿವರ ಸಿಬಂದಿ ಹೊಡೆದಾಡಿರುವುದು ಮಾಧ್ಯಮ ವಲಯದಲ್ಲಿ ನಗೆಪಾಟಲು ಮತ್ತು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Minister Sudhakar gunman and driver fight in front of his residence in Bangalore video goes viral on social media.
15-01-26 05:56 pm
HK News Desk
ಧರ್ಮಸ್ಥಳ ಎಸ್ಐಟಿ ತನಿಖೆ ; ತನಿಖೆಯ ಮಾಹಿತಿ ಕೇಳಿ ಸರ...
14-01-26 03:34 pm
ಆನೆ ದಂತದಿಂದ ಮಾಡಲ್ಪಟ್ಟ ರಾಧಾ ಕೃಷ್ಣರ ವಿಗ್ರಹ ಮಾರಾ...
14-01-26 02:54 pm
ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ ; ಪ್ರತ್ಯೇಕ...
14-01-26 01:34 pm
ಅಕಾಲಿಕ ಮಳೆಗೆ ಕಂಗಾಲಾದ ಕಾಫಿನಾಡು ; ಭಾರೀ ಮಳೆಗೆ ಕೊ...
13-01-26 10:13 pm
15-01-26 12:14 pm
HK News Desk
ಆಂತರಿಕ ದಂಗೆಯಲ್ಲಿ ಬೆಂದು ಹೋದ ಇರಾನ್ ; 12 ಸಾವಿರಕ್...
14-01-26 10:08 pm
ಜೀವಂತ ನಾಗರಹಾವನ್ನೇ ಜೇಬಿನಲ್ಲಿಟ್ಟು ಆಸ್ಪತ್ರೆಗೆ ಬಂ...
13-01-26 06:39 pm
ರಷ್ಯಾ ಬಳಿಕ ಇರಾನ್ ಮುಂದಿಟ್ಟು ಟ್ರಂಪ್ ಬೆದರಿಕೆ ; ಇ...
13-01-26 04:21 pm
ಮುಂಬೈಗೆ ಬಂದೇ ಬರುತ್ತೇನೆ, ತಾಕತ್ತಿದ್ದರೆ ತಡೆಯಿರಿ....
12-01-26 11:00 pm
15-01-26 10:24 pm
Mangalore Correspondent
ಗೋ ಸೇವೆಗೆ ಜನಸಾಮಾನ್ಯರು ಕೊಡುಗೆ ನೀಡಲು ವೇದಿಕೆ ; ಕ...
15-01-26 10:07 pm
ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳಿಗೆ ಇಸ್ರೇಲ್ ಡಿಜಿ...
15-01-26 09:04 pm
ಮನರೇಗಾ ಜಾರಿಗೆ ಒತ್ತಾಯಿಸಿ ಸುಳ್ಯದಿಂದ ಮುಲ್ಕಿಗೆ ಪಾ...
15-01-26 08:12 pm
ಜ.18ರಂದು ಮಂಗಳೂರಿನಲ್ಲಿ ಪ್ರಪ್ರಥಮ ಜಾಗತಿಕ ಬಿಲ್ಲವರ...
15-01-26 04:01 pm
15-01-26 11:07 pm
Bangalore Correspondent
ಬಾಲಕನ ಅಸಹಜ ಸಾವು ಪ್ರಕರಣ ; ಬಾವಿಗೆ ಬಿದ್ದಾಗ ಜೀವಂತ...
15-01-26 03:01 pm
ಹೂಡಿಕೆ ಹೆಸರಿನಲ್ಲಿ ವಂಚಿಸುತ್ತಿದ್ದ ಖದೀಮರ ಜಾಲ ಬಯಲ...
14-01-26 09:49 pm
Karwar Suicide: ಪ್ರೀತಿ ಒಪ್ಪಿಕೊಳ್ಳುವಂತೆ ನಿರಂತರ...
14-01-26 05:22 pm
ಹೆಂಡತಿ ಮೇಲೆ ಕಣ್ಣು ; ಗುತ್ತಿಗೆದಾರನನ್ನು ಕೊಲೆ ಮಾಡ...
13-01-26 05:28 pm