ಬ್ರೇಕಿಂಗ್ ನ್ಯೂಸ್
19-03-21 04:09 pm Headline Karnataka News Network ಕರ್ನಾಟಕ
ಬೆಂಗಳೂರು, ಮಾ.19 : ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಮನೆ ಮುಂದೆ ಗನ್ ಮ್ಯಾನ್ ಮತ್ತು ವಾಹನ ಚಾಲಕ ಕಿತ್ತಾಡಿಕೊಂಡಿದ್ದು ಇಬ್ಬರು ಸಿಬ್ಬಂದಿಗಳ ಹೊಡೆದಾಟ ಬಿಡಿಸಲು ಪೊಲೀಸ್ ಸಿಬ್ಬಂದಿ ಹರಸಾಹಸ ಪಟ್ಟಿರುವ ವಿಡಿಯೋ ಈಗ ವೈರಲ್ ಆಗಿದೆ.
ಸಚಿವ ಸುಧಾಕರ್ ಮನೆಯ ಖಾಸಗಿ ಚಾಲಕ ಸೋಮಶೇಖರ್ ಮತ್ತು ಗನ್ಮ್ಯಾನ್ ತಿಮ್ಮಯ್ಯ ಪರಸ್ಪರ ಬೀದಿಯಲ್ಲಿ ಹೊಡೆದಾಡಿದವರು. ನಿನ್ನೆ ಡಾ.ಕೆ.ಸುಧಾಕರ್ ಅವರು ತನ್ನ ಮನೆ ಬಳಿ ಬರುವ ವೇಳೆಗೆ ಟೀ ಮಾರುತ್ತಿದ್ದ ಅಂಗವಿಕಲ ವ್ಯಕ್ತಿಯೋರ್ವರು ಅಡ್ಡ ಬಂದಿದ್ದಾರೆ. ಇದರಿಂದ ಸಿಟ್ಟಿಗೆದ್ದ ಸಚಿವರ ಗನ್ಮ್ಯಾನ್ ತಿಮ್ಮಯ್ಯ, ಟೀ ಮಾರುವ ವಿಶೇಷಚೇತನ ವ್ಯಕ್ತಿಗೆ ಹೊಡೆದಿದ್ದಾರೆ. ಗನ್ ಮ್ಯಾನ್ ಒಬ್ಬ ವಿಶೇಷಚೇತನ ವ್ಯಕ್ತಿಯ ಮೇಲೆ ಕೈಮಾಡಿದ್ದು ಅಲ್ಲಿದ್ದ ಎಲ್ಲರಿಗೂ ಬೇಸರ ತರಿಸಿದೆ.
ಘಟನೆ ಬಳಿಕ ಈ ವಿಚಾರದಲ್ಲಿ ಸ್ಥಳೀಯರು ತಿಮ್ಮಯ್ಯನನ್ನು ಪ್ರಶ್ನೆ ಮಾಡಿದ್ದರು. ಘಟನೆ ನೋಡಿದ್ದ ಖಾಸಗಿ ವಾಹನ ಚಾಲಕ ಸೋಮಶೇಖರ್ ಸಚಿವರಿಗೆ ಈ ಬಗ್ಗೆ ದೂರು ನೀಡಿರಬಹುದು ಎಂಬ ಅನುಮಾನದಲ್ಲಿ ಇಂದು ಬೆಳಗ್ಗೆ ಸೋಮಶೇಖರ್ ನನ್ನು ಪ್ರಶ್ನೆ ಮಾಡಿದ್ದಾನೆ. ‘ನಾನು ಟೀ ಮಾರಾಟಗಾರನಿಗೆ ಹಲ್ಲೆ ನಡೆಸಿದ್ದನ್ನು ನೀನು ಸಚಿವರಿಗೆ ಹೇಳಿದ್ದೀಯಾ’ ಎಂದು ಕೂಗುತ್ತಾ ಸೋಮಶೇಖರ್ ಮೇಲೆ ತಿಮ್ಮಯ್ಯ ಕೈಎತ್ತಿದ್ದಾನೆ. ಈ ಘಟನೆ ಸಚಿವ ಸುಧಾಕರ್ ಮನೆ ಮುಂದಿನ ರಸ್ತೆಯಲ್ಲೇ ನಡೆದಿದ್ದು ರಸ್ತೆಯಲ್ಲಿ ಇಬ್ಬರೂ ತಾವು ಸಚಿವರ ಸಿಬಂದಿ ಅನ್ನುವ ಪರಿವೇ ಇಲ್ಲದೆ ಹೊರಳಾಡಿದ್ದಾರೆ. ಸಿಬಂದಿಗಳಿಬ್ಬರು ಹೊಡೆದಾಟ, ಹೊರಳಾಡಿರುವ ಘಟನೆಯ ವಿಡಿಯೋ ಜಾಲತಾಣದಲ್ಲಿ ವೈರಲ್ ಆಗಿದ್ದು ವ್ಯಾಪಕ ಟೀಕೆ ಕೇಳಿಬಂದಿದೆ.
ಡಾ.ಕೆ.ಸುಧಾಕರ್ ಅವರ ಮನೆ ಸಮೀಪವೇ ರಮೇಶ್ ಜಾರಕಿಹೊಳಿ ಅವರ ಮನೆಯಿದೆ. ಸೀಡಿ ಪ್ರಕರಣದ ಬಳಿಕ ಮಾಧ್ಯಮ ಸಿಬ್ಬಂದಿಗಳು ಅವರ ಮನೆ ಮುಂದೆ ಇರುವುದು ವಾಡಿಕೆಯಾಗಿದ್ದರೆ, ಕೊರೊನಾ ಸೋಂಕಿನ ಆತಂಕದಿಂದಾಗಿ ಡಾ.ಕೆ.ಸುಧಾಕರ್ ಮನೆ ಬಳಿಯೂ ವಿವರ ಪಡೆಯಲು ಮಾಧ್ಯಮ ಪ್ರತಿನಿಧಿಗಳು ಇರುತ್ತಾರೆ. ಇದೆಲ್ಲ ಗೊತ್ತಿದ್ದರೂ, ಹೀಗೆ ನಡುರಸ್ತೆಯಲ್ಲಿ ಸಚಿವರ ಸಿಬಂದಿ ಹೊಡೆದಾಡಿರುವುದು ಮಾಧ್ಯಮ ವಲಯದಲ್ಲಿ ನಗೆಪಾಟಲು ಮತ್ತು ಸಾರ್ವಜನಿಕರ ವಲಯದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.
Minister Sudhakar gunman and driver fight in front of his residence in Bangalore video goes viral on social media.
11-05-25 01:21 pm
HK News Desk
Minister zameer ahmed, Pak, India: ಮೋದಿ ಹೇಳಿದ...
10-05-25 10:40 pm
Dk Shivakumar, Congress, Birthday: ಭಯೋತ್ಪಾದನೆ...
10-05-25 12:40 pm
Mandya Post, Modi; ಮಾಜಿ ಪಾಕ್ ಪ್ರಧಾನಿಗೆ ಮೋದಿ ಶ...
10-05-25 11:30 am
Janardhana Reddy disqualified, MLA: ಅಕ್ರಮ ಗಣಿ...
08-05-25 11:07 pm
11-05-25 11:02 pm
HK News Desk
ಭಾರತದ ಮೇಲೆ ದಾಳಿಗೆ ಟರ್ಕಿ ಡ್ರೋಣ್ ಬಳಕೆ ; ಒಂದೇ ರಾ...
11-05-25 06:25 pm
ಆಪರೇಷನ್ ಸಿಂಧೂರ ಇನ್ನೂ ಮುಗಿದಿಲ್ಲ.. ಕದನ ವಿರಾಮ ಘೋ...
11-05-25 06:12 pm
ಜಮ್ಮು ಗಡಿಯಲ್ಲಿ ಪಾಕ್ ಶೆಲ್ ದಾಳಿ ; ಬಿಎಸ್ಎಫ್ ಯೋಧ,...
11-05-25 01:43 pm
India Pak War: ಪೆಟ್ಟು ತಿಂದರೂ ಬಿಡದ ಪಾಕ್ ನರಿಬುದ...
10-05-25 11:05 pm
11-05-25 05:01 pm
Mangalore Correspondent
Drone Ban, Mangalore, Mysuru: ಮಂಗಳೂರು, ಮೈಸೂರಿ...
10-05-25 07:10 pm
ಹಿಂದು - ಮುಸ್ಲಿಂ ಮಧ್ಯೆ ಪ್ರಚೋದನಕಾರಿ ಪೋಸ್ಟ್ ಹಾಕು...
09-05-25 11:07 pm
Mangalore University, U T Khader, Syndicate M...
09-05-25 06:22 pm
Resham Bariga, Belthangady, Indo Pak War, Ant...
09-05-25 03:24 pm
08-05-25 05:32 pm
HK News Desk
Mangalore Suhas Shetty Murder, Eight Arrested...
03-05-25 02:16 pm
Suhas Shetty Murder, Thokottu Attack, Mangalo...
02-05-25 12:00 pm
Mangalore Bajpe Murder, Suhas Shetty: ಹಳೆ ದ್ವ...
01-05-25 10:06 pm
Mangalore, Illegal Rice, crime: ಉತ್ತರ ಕರ್ನಾಟಕ...
30-04-25 04:09 pm