ಡಿಜೆ ಹಳ್ಳಿ ಗಲಭೆ ; ಆರೋಪಿ ನವೀನ್ ಜಾಮೀನು ಅರ್ಜಿ ವಜಾ

26-08-20 05:59 pm       Bangalore Correspondent   ಕರ್ನಾಟಕ

ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಾಸಕ ಆಖಂಡ ಶ್ರೀನಿವಾಸ್ ಅಳಿಯ ನವೀನ್ ಜಾಮೀನು ಅರ್ಜಿ ವಜಾ ಆಗಿದೆ.

ಬೆಂಗಳೂರು, ಆಗಸ್ಟ್ 26: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಪ್ರಮುಖ ಆರೋಪಿ ಹಾಗೂ ಶಾಸಕ ಆಖಂಡ ಶ್ರೀನಿವಾಸ್ ಅಳಿಯ ನವೀನ್ ಜಾಮೀನು ಅರ್ಜಿ ವಜಾ ಆಗಿದೆ. 1ನೇ ಎಸಿಎಂಎಂ ನ್ಯಾಯಾಲಯವು ನವೀನ್ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನ ವಜಾ ಮಾಡಿ ಆದೇಶ ಹೊರಡಿಸಿದೆ.

ಆಗಸ್ಟ್​ 11 ರಂದು ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿಯಲ್ಲಿ ನಡೆದ ಗಲಾಟೆಯ ಪ್ರಮುಖ ರೂವಾರಿ ಅನ್ನೋ ಆರೋಪ ನವೀನ್​ ಮೇಲಿದೆ. ಫೇಸ್​​ಬುಕ್​​ನಲ್ಲಿ ಅವಹೇಳನಕಾರಿ ಪೋಸ್ಟ್ ಮಾಡಿರುವ ಆರೋಪ ನವೀನ್​ ಮೇಲಿದೆ. ಸದ್ಯ ಆರೋಪಿ ನವೀನ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾನೆ.