ಬ್ರೇಕಿಂಗ್ ನ್ಯೂಸ್
29-08-20 05:31 pm Dhruthi Anchan - Correspondent ಕರ್ನಾಟಕ
ಬೆಂಗಳೂರು, ಆಗಸ್ಟ್ 29: ಚಂದನವನದ ಕೆಲವು ನಟ-ನಟಿಯರಿಗೆ ಡ್ರಗ್ಸ್ ನ ವ್ಯಸನ ಇದೆ ಎಂದು ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ. ಮಾಧ್ಯಮವೊಂದರ ಜೊತೆ ಮಾತನಾಡಿರುವ ಇಂದ್ರಜಿತ್, ಚಂದನವನದಲ್ಲಿ ಡ್ರಗ್ ಮಾಫಿಯಾ ಇರುವುದು ನಿಜ ನಾನೇ ಕಣ್ಣಾರೆ ನೋಡಿದ್ದೇನೆ' ಎಂದಿದ್ದಾರೆ.
ಹಲವು ಯುವ ನಟ-ನಟಿಯರು ಡ್ರಗ್ಸ್ನ ಹಿಂದೆ ಬಿದ್ದಿದ್ದು, ಸ್ಯಾಂಡಲ್ವುಡ್ನಲ್ಲಿ ರೇವ್ ಪಾರ್ಟಿ, ನೈಟ್ ಪಾರ್ಟಿಗಳು ನಡೆಯುವ ಸಂದರ್ಭಗಳಲ್ಲಿ ಡ್ರಗ್ಸ್ ಹರಿದಾಡುತ್ತದೆ ಹಾಗೂ ಹಲವು ಯುವ ನಟರು ಈ ಡ್ರಗ್ಸ್ನ ಚಟಕ್ಕೆ ಬಿದ್ದಿದ್ದಾರೆ ಎಂದು ನೇರವಾಗಿ ಹೇಳಿದ್ದಾರೆ.
ದೊಡ್ಡ ಸ್ಟಾರ್ ನಟರುಗಳು ಇಂಥಹುದರಲ್ಲಿ ಇಲ್ಲ. ಆದರೆ ಒಂದೆರಡು ಸಿನಿಮಾ ಮಾಡಿದ ಯುವ ನಟರು ಕೆಲವರು ಡ್ರಗ್ಸ್ಗೆ ದಾಸರಾಗಿದ್ದಾರೆ. ದುಡ್ಡಿನ ವ್ಯಾಮೋಹ, ಹಣದ ಆಸೆಗೆ ಬಿದ್ದು ಕೆಲವರು ಮಾಫಿಯಾದ ಒಳಕ್ಕೆ ಸೇರಿದ್ದಾರೆ. ಕೊಕೇನ್ ರೀತಿಯ ಅಪಾಯಕಾರಿ ಮಾದಕ ವಸ್ತು ಸಹ ಚಂದನವನ ನಟ-ನಟಿಯರ ಕೈಗೆ ಎಟುಕುತ್ತಿದೆ ಎಂದು ಶಾಕಿಂಗ್ ಅಂಶ ಬಹಿರಂಗಪಡಿಸಿದ್ದಾರೆ ಇಂದ್ರಜಿತ್.

ಇಷ್ಟೇ ಅಲ್ಲದೆ ಯಾರೆಲ್ಲಾ ಈ ಮಾಫಿಯಾದಲ್ಲಿದ್ದಾರೆ, ಯಾರೆಲ್ಲಾ ದಾಸರಾಗಿದ್ದಾರೆ ಎಂಬುದನ್ನು ನಾನು ಬೇಕಾದರೆ ಬಹಿರಂಗಪಡಿಸುತ್ತೇನೆ. ಆದರೆ ಪೊಲೀಸರು ನನಗೆ ಸೂಕ್ತ ರಕ್ಷಣೆ ಕೊಡುಬೇಕು ಎಂದಿದ್ದಾರೆ ಇಂದ್ರಜಿತ್ ಲಂಕೇಶ್.
ಇತ್ತೀಚಿಗೆ ನಿಧನರಾದ 35 ವರ್ಷ ವಯಸ್ಸಿನ ನಟನ ಸಾವಿನ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸಿದ ಇಂದ್ರಜಿತ್, ಚಿಕ್ಕ ವಯಸ್ಸಿನಲ್ಲಿಯೇ ಸಾವನ್ನಪ್ಪುತ್ತಾರೆ ಎಂದರೆ ಏನು ಕಾರಣ?, ಆ ನಟನ ಸಾವಿನ ಬಳಿಕ ಮರಣೋತ್ತರ ಪರೀಕ್ಷೆ ಯಾಕೆ ಮಾಡಿಸಿಲ್ಲ? ಪರೀಕ್ಷೆ ಮಾಡಿಸಿದ್ದರೆ ಎಲ್ಲಾ ಬಯಲಾಗುತ್ತಿತ್ತು. ಮರಣೋತ್ತರ ಪರೀಕ್ಷೆ ನಡೆಸದಂತೆ ಪೊಲೀಸರಿಗೆ ರಾಜಕೀಯ ಒತ್ತಡವಿತ್ತು. ಯಾವ ರಾಜಕೀಯ ವ್ಯಕ್ತಿ ಒತ್ತಡ ಹಾಕಿದ್ದಾರೆ ಎನ್ನುವುದು ಗೊತ್ತಿದೆ" ಎಂದು ಇಂದ್ರಜಿತ್ ಲಂಕೇಶ್ ಹೇಳಿದ್ದಾರೆ.
08-11-25 12:38 pm
HK News Desk
ಯಾವ ಕ್ರಾಂತಿಯೂ ಆಗಲ್ಲ, ವಾಂತಿಯೂ ಆಗಲ್ಲ.. ನನಗೆ ಸಿದ...
07-11-25 09:59 pm
ಖಾಸಗಿ ಸಂಸ್ಥೆಗೆ ಸಾರ್ವಜನಿಕ ಸ್ಥಳದಲ್ಲಿ ನಿರ್ಬಂಧ ;...
06-11-25 07:34 pm
ಖ್ಯಾತ ಖಳ ನಟರಾಗಿ ಮಿಂಚಿದ್ದ ಹರೀಶ್ ರಾಯ್ ಕ್ಯಾನ್ಸರ್...
06-11-25 03:06 pm
ಕೇಂದ್ರ ಜಿಎಸ್ಟಿ ದರ ಇಳಿಸಿದ ಬೆನ್ನಲ್ಲೇ ನಂದಿನಿ ತುಪ...
05-11-25 06:15 pm
07-11-25 05:21 pm
HK News Desk
ಮತಗಳವು ಆರೋಪ ; ರಾಹುಲ್ ವಿರುದ್ಧ ತಿರುಗಿಬಿದ್ದ ಮತದಾ...
07-11-25 11:33 am
'ನವೆಂಬರ್ ಕ್ರಾಂತಿ' ವದಂತಿ ತಳ್ಳಿಹಾಕಿದ ಡಿಸಿಎಂ ; ನ...
06-11-25 10:22 pm
ಐಸಿಸಿ ಮಹಿಳಾ ವಿಶ್ವಕಪ್ ಎತ್ತಿಹಿಡಿದ ಭಾರತದ ವನಿತೆಯರ...
03-11-25 01:13 pm
ಜೋಧಪುರ ; ಭೀಕರ ರಸ್ತೆ ಅಪಘಾತದಲ್ಲಿ 18 ಜನರು ಸಾವು,...
02-11-25 11:12 pm
08-11-25 08:31 pm
Mangalore Correspondent
ಬೆಂಗಳೂರು- ಮಂಗಳೂರು ಹೈಸ್ಪೀಡ್ ಕಾರಿಡಾರ್ ; ಶಿರಾಡ...
07-11-25 10:58 pm
ಕುದ್ರೋಳಿ ಕ್ಷೇತ್ರ ಸ್ಥಾಪಿಸಿದ ಫೆ.21ರಂದು ನಾರಾಯಣ ಗ...
07-11-25 07:23 pm
ಗೋಡಂಬಿ ಉದ್ಯಮಕ್ಕೆ ನೂರು ವರ್ಷ ; ನ.14-16ರಂದು ದೇಶದ...
07-11-25 05:25 pm
ನೆಲ್ಯಾಡಿಯಲ್ಲಿ ಹೊಟೇಲ್ ಉದ್ಯಮ ನಡೆಸುತ್ತಿದ್ದ ಅಭಿಷೇ...
07-11-25 02:18 pm
08-11-25 04:08 pm
Mangaluru Staff
ಆರೋಪಿಗೆ ಜಾಮೀನು ನೀಡಲು ಹೋಗಿ ತಾನೇ ತಗ್ಲಾಕ್ಕೊಂಡ !...
07-11-25 11:20 pm
ಹಗಲು ಕುರಾನ್ ಬೋಧಕ, ರಾತ್ರಿ ಮನೆಗಳ್ಳ..! ಬೀಗ ಹಾಕಿದ...
07-11-25 08:05 pm
ಕೋಮು ದ್ವೇಷ ; ಸಹಪಾಠಿ ವಿದ್ಯಾರ್ಥಿಗಳ ಮೇಲೆ ಯುವಕರಿಂ...
06-11-25 10:59 pm
ಪ್ರೇಮ ನಿರಾಕರಣೆ ; ಯುವಕನ ಹೆಸರಲ್ಲಿ ಕರ್ನಾಟಕ, ತಮಿಳ...
06-11-25 08:20 pm