ಬ್ರೇಕಿಂಗ್ ನ್ಯೂಸ್
01-09-20 06:23 pm Headline Karnataka News Network ಕರ್ನಾಟಕ
ತುಮಕೂರು, ಸೆಪ್ಟೆಂಬರ್ 1 : ನಮಗೆ ರೈಸ್ ದಾಲ್ ಗೊತ್ತು. ಬಟ್ ಡ್ರಗ್ಸ್ ಬಗ್ಗೆ ಗೊತ್ತಿಲ್ಲ.. ಸ್ಯಾಂಡಲ್ ವುಡ್ಡಿನ ಡ್ರಗ್ಸ್ ನಂಟಿನ ಬಗ್ಗೆ ಮಾತಾಡಲ್ಲ.. ಹೀಗೆಂದವರು ಸ್ಯಾಂಡಲ್ವುಡ್ಡಿನ ಖ್ಯಾತ ನಟ ಸುದೀಪ್.
ಸಿದ್ಧಗಂಗಾ ಮಠಕ್ಕೆ ಆಗಮಿಸಿದ್ದ ನಟ ಸುದೀಪ್, ಸ್ಯಾಂಡಲ್ ವುಡ್ಡಿನ ಡ್ರಗ್ಸ್ ನಂಟಿನ ಬಗ್ಗೆ ಕೇಳಿದ ಪ್ರಶ್ನೆಗೆ ಗರಂ ಆಗಿದ್ದಾರೆ. ರೈಸ್ ದಾಲ್ ತಿಂದು ಜೀವನ ಮಾಡಿದ್ದೀನಿ.. ಆದರೆ ಡ್ರಗ್ಸ್ ಬಗ್ಗೆ ನಂಗೆ ಗೊತ್ತೇ ಇಲ್ಲ. ಅದರ ಬಗ್ಗೆ ಚರ್ಚೆನೂ ಮಾಡಲ್ಲ. ಚರ್ಚೆ ಮಾಡೋದೂ ತಪ್ಪಾಗುತ್ತೆ. ಈವಾಗ ನಡೀತಿರೋ ವಿಷ್ಯದ ಬಗ್ಗೆ ಮಾತಾಡೋದೂ ತಪ್ಪು ಆಗತ್ತೆ. ಡ್ರಗ್ಸ್ ಚಿತ್ರರಂಗಕ್ಕೆ ಕಳಂಕ ಅನ್ನೋದು ಕೂಡ ತಪ್ಪು.. ಆದರೆ ಸಮಸ್ಯೆ ಏನಿದ್ದರೂ ಸಾಲ್ವ್ ಆಗುತ್ತೆ. ಹಾಗಂತ ಇಲ್ಲದೇ ಇರೋದನ್ನ ಲಿಂಕ್ ಕೊಟ್ಟು ಮಾತಾಡಬಾರದು ಅಂತ ಸುದೀಪ್ ಅಡ್ಡಗೋಡೆ ಮೇಲೆ ದೀಪವಿಟ್ಟ ರೀತಿ ಹೇಳಿಕೆ ಕೊಟ್ಟಿದ್ದಾರೆ.

ಚಿರಂಜೀವಿ ಸಾವಿಗೆ ಡ್ರಗ್ಸ್ ಕಾರಣವಾಗಿತ್ತಾ ಎಂಬ ಪ್ರಶ್ನೆಗೆ, ಚಿರಂಜೀವಿ ನನ್ನ ತಮ್ಮನ ಥರ. ಡ್ರಗ್ ನಲ್ಲಿ ಅವನ ಹೆಸರು ಥಳಕು ಹಾಕೋದು ಸರಿ ಕಾಣೋದಿಲ್ಲ ಎಂದಿದ್ದಾರೆ. ಇನ್ನು ನಟ ಚೇತನ್ ಟ್ವೀಟ್ ಕುರಿತ ಪ್ರಶ್ನೆಗೆ ಸುದೀಪ್ ವ್ಯಂಗ್ಯದ ನಗೆ ಬೀರಿದ್ದಾರೆ. ಬಹುಶಃ ಅವರು ಪ್ರಧಾನಿ ಮೋದಿ ಬಗ್ಗೆ ಮಾತಾಡಿರಬೇಕು ಎಂದು ಲೇವಡಿ ಆಡಿದ್ರು. ರಮ್ಮಿ ಆಡೋರು, ಗುಟ್ಕಾ ತಿನ್ನೋರ ಬಗ್ಗೆ ಯಾರೂ ಹೇಳಲ್ಲ ಎಂದು ನಟ ಚೇತನ್ ಟ್ವೀಟ್ ಮಾಡಿ ಕುಟುಕಿದ್ದರು.
ಮಾಧ್ಯಮಗಳು ಕೆಲ ಅನಾವಶ್ಯಕ ವಿಚಾರಗಳನ್ನು ಕೆದಕಿ ಜೀವಂತ ಇಡುತ್ತಿದೆ ಎಂದು ಕಟಕಿಯಾಡಿದ ಸುದೀಪ್, ಇಂದ್ರಜಿತ್ ಗೆ ಬೆದರಿಕೆ ಕರೆಯ ವಿಚಾರದಲ್ಲಿ ಅವರ ಬೆಂಬಲಕ್ಕೆ ನಿಲ್ತೀರಾ ಎಂಬ ಪ್ರಶ್ನೆಗೆ, ಬೇರೆಯದ್ದೇ ಕೋನದಲ್ಲಿ ಮಾತಾಡಿದ್ದಾರೆ. ಇಂದ್ರಜಿತ್ ಅವರ ಇಡೀ ಲೈಫ್ ನಾನಿಲ್ಲದೆ ಸಾಗಿದೆ. ಅವರು ನನಗಾಗಿ ಇಲ್ಲ... ನಾನೂ ಅವರಿಗಾಗಿ ಇಲ್ಲ.. ಬಟ್ ಅದಕ್ಕೆಲ್ಲಾ ಅವರು ಹೆದರಲ್ಲ ಎಂದು ಹೇಳಿದ್ರು.
ಇನ್ನು ಕೊರೋನಾದಿಂದಾಗಿ ಚಿತ್ರರಂಗ ತುಂಬಾ ನಷ್ಟದಲ್ಲಿದೆ. ನಿರ್ಮಾಪಕರು, ಕಾರ್ಮಿಕರು ಎಲ್ಲರೂ ಸಂಕಷ್ಟದಲ್ಲಿ ಇದ್ದಾರೆ. ಇಂಥ ಸಂದರ್ಭದಲ್ಲಿ ಕೊರೊನೋತ್ತರದಲ್ಲಿ ಇಂಡಸ್ಟ್ರಿಯ ಭವಿಷ್ಯದ ಬಗ್ಗೆ ನಾವು ಚಿಂತನೆ ಮಾಡಬೇಕಿದೆ ಎಂದರು ಸುದೀಪ್.
06-12-25 12:33 pm
HK News Desk
Dharwad Accident, Police Inspector: ಧಾರವಾಡ; ಡ...
05-12-25 11:20 pm
Shivamogga Doctor Suicide: ಶಿವಮೊಗ್ಗ ; ಮೂರು ವರ...
05-12-25 10:00 pm
Indigo Flight News, Hubli Marriage: ಕೈಕೊಟ್ಟ ಇ...
05-12-25 07:26 pm
ಇಸ್ಲಾಂ ಹೆಸರಲ್ಲಿ ಬಲಾತ್ಕಾರ, ಲೂಟಿ, ಮತಾಂತರ ಮಾಡಿದ್...
04-12-25 05:36 pm
07-12-25 02:04 pm
HK News Desk
ಸಂವಿಧಾನ ಪೀಠಿಕೆಯಲ್ಲಿ ಜಾತ್ಯತೀತ, ಸಮಾಜವಾದ ಪದ ಅಗತ್...
07-12-25 12:31 pm
ದೇವಾಲಯದ ಹಣ ದೇವರಿಗೆ ಸೇರಿದ್ದು, ಸಹಕಾರಿ ಬ್ಯಾಂಕುಗಳ...
06-12-25 04:58 pm
ಬಾಬರಿ ಮಸೀದಿ ನಿರ್ಮಿಸುವುದಾಗಿ ಹೇಳಿ ವಿವಾದ ಎಬ್ಬಿಸಿ...
04-12-25 05:39 pm
IndiGo Cancels Nearly 200 Flights Nationwide;...
04-12-25 11:15 am
07-12-25 03:02 pm
Mangalore Correspondent
ತಡರಾತ್ರಿ ಮನೆಗೆ ನುಗ್ಗಿ ಕಡಬ ಹೆಡ್ ಕಾನ್ಸ್ ಟೇಬಲ್ ದ...
06-12-25 06:12 pm
Kantara, Mangalore, Rishab Shetty; ಕಾಂತಾರ -1ರ...
05-12-25 12:24 pm
Mangalore, Suicide: ಕೊಣಾಜೆ ; 16ರ ಬಾಲಕಿ ಮನೆಯಲ್...
05-12-25 12:10 pm
Mithun Rai Congress, Notice: ಎಐಸಿಸಿ ಸೆಕ್ರಟರಿ...
05-12-25 10:34 am
06-12-25 09:52 pm
Mangalore Correspondent
Ganesh Gowda, Chikkamagaluru, Congress, Murde...
06-12-25 02:43 pm
ಚಿನ್ನ ಕಸಿದ ಪ್ರಕರಣ ಬೆನ್ನತ್ತಿ ಕುಖ್ಯಾತ ಅಂತಾರಾಜ್ಯ...
05-12-25 11:00 pm
ಸಿಐಡಿ ಪೊಲೀಸ್ ಸೋಗಿನಲ್ಲಿ ಮುಲ್ಕಿಯ ವೃದ್ಧ ದಂಪತಿಗೆ...
04-12-25 11:15 pm
ಪೊಲೀಸ್ ಕಮಿಷನರ್ ಕಚೇರಿ ಬಳಿ ನಿಲ್ಲಿಸಿದ್ದ ಕಾರಿನಿಂದ...
04-12-25 10:53 pm