ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೃನ್ಮನ ಸೆಳೆದ ಹಚ್ಚ ಹಸಿರ ಕಾರವಾರ ರೈಲು ನಿಲ್ದಾಣ !

13-07-21 10:01 pm       Headline Karnataka News Network   ಕರ್ನಾಟಕ

ಕಾರವಾರ ರೈಲು ನಿಲ್ದಾಣದ ಫೋಟೊ ನೋಡಿ ಆಕರ್ಷಿತರಾದ ನಾರ್ವೆ ದೇಶದ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಅದನ್ನು ಅದ್ಭುತ ಎಂದು ಕೊಂಡಾಡಿದ್ದಾರೆ.

Photo credits : Roshan Bhat

ಕಾರವಾರ, ಜುಲೈ 13: ಪಶ್ಚಿಮ ಘಟ್ಟಗಳ ಸೌಂದರ್ಯಕ್ಕೆ ಎಣೆಯಿಲ್ಲ. ಘಟ್ಟಗಳ ನಿಸರ್ಗ ಸಿರಿಯ ಮಧ್ಯೆ ಇರುವ ಕಾರವಾರದ ರೈಲು ನಿಲ್ದಾಣ ಈಗ ವಿದೇಶದಲ್ಲೂ ಆಕರ್ಷಣೆಗೆ ಕಾರಣವಾಗಿದೆ. ಅದಕ್ಕೆ ಕಾರಣವಾಗಿರುವುದು, ಅಚ್ಚ ಹಸಿರಿನ ಮಧ್ಯದಲ್ಲಿರುವ ಕಾರವಾರ ರೈಲು ನಿಲ್ದಾಣದ ವಿಹಂಗಮ ನೋಟ.

ಕಾರವಾರ ರೈಲು ನಿಲ್ದಾಣದ ಫೋಟೊ ನೋಡಿ ಆಕರ್ಷಿತರಾದ ನಾರ್ವೆ ದೇಶದ ಸಚಿವರೊಬ್ಬರು ತಮ್ಮ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿ ಅದನ್ನು ಅದ್ಭುತ ಎಂದು ಕೊಂಡಾಡಿದ್ದಾರೆ. ನಾರ್ವೆಯ ಅಂತಾರಾಷ್ಟ್ರೀಯ ಅಭಿವೃದ್ಧಿ ಖಾತೆಯ ಸಚಿವ ಎಲಿನ್ ಸೊಲ್ಹೀಮ್ ಅವರು, ಕಾರವಾರ ರೈಲು ನಿಲ್ದಾಣದ ಫೋಟೊ ಪೋಸ್ಟ್ ಮಾಡಿ, ಅದ್ಭುತ ಹಸಿರು. ಇದು ಭಾರತದ ಅತ್ಯಂತ ಹಚ್ಚ ಹಸಿರಿನ ನಿಲ್ದಾಣಗಳಲ್ಲಿ ಒಂದಾಗಿರಬೇಕು ಎಂದು ಉದ್ಗರಿಸಿದ್ದಾರೆ.

ಸಚಿವರು ಟ್ವೀಟ್ ಮಾಡಿರುವ ಫೋಟೋ ಅಂತಾರಾಷ್ಟ್ರೀಯ ಮಟ್ಟದಲ್ಲಿ ವೈರಲ್ ಆಗಿದ್ದು, ಭಾರೀ ಕಮೆಂಟ್ ಮತ್ತು ಮೆಚ್ಚುಗೆ ವ್ಯಕ್ತವಾಗಿದೆ. ವೈರಲ್ ಆಗಿರುವ ಚಿತ್ರವನ್ನು ಸೆರೆಹಿಡಿದಿರುವವರು ರೋಶನ್ ಕಾನಡೆ. ಬೆಟ್ಟದ ನಡುವಿನ ಸುರಂಗ ಮಾರ್ಗದಿಂದ ಹೊರಬರುವ ರೈಲು ಮತ್ತು ಮೇಲ್ಭಾಗದ ಹಸಿರ ಸಿರಿಯನ್ನು ಹೊದ್ದಂತಿರುವ ಬೆಟ್ಟದ ಸಹಿತ ಇರುವ ಈ ಚಿತ್ರ ವಿಶ್ವ ಮಟ್ಟದಲ್ಲಿ ಮೆಚ್ಚುಗೆ ಗಳಿಸಿದೆ. ಒಂದು ವರ್ಷದ ಹಿಂದೆ ತೆಗೆದಿದ್ದ ಚಿತ್ರ ಈಗಿನ ಮಳೆಗಾಲದಲ್ಲಿ ಆಕರ್ಷಣೆಗೆ ಪಾತ್ರವಾಗಿದೆ.

Karwar railway station highly praised by Norway Minister Erik Solheim for its Green beauty. The Minister tweets, Amazing green! This must be One of the greenest Railway Stations in India and the world? Karwar in Karnataka

ದೇಶ - ವಿದೇಶ

Actor Sanjay Dutt Mangalore,Baba Siddique; ಬಾಬಾ ಸಿದ್ದಿಕಿ ಕೊಲೆ ಸುದ್ದಿ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ದಿಗ್ಗಜರು, ಮಂಗಳೂರಿನಿಂದ ನೇರ ಆಸ್ಪತ್ರೆಗೆ ದೌಡಾಯಿಸಿದ್ದ ಸಂಜಯ್ ದತ್, ದತ್ ಕುಟುಂಬಕ್ಕೆ ಫ್ಯಾಮಿಲಿ ಸದಸ್ಯನಂತಿದ್ದ ಸಿದ್ದಿಕಿ, ಸಲ್ಮಾನ್ ಖಾನ್ ದ್ವೇಷದಲ್ಲಿ ಸಿದ್ದಿಕಿ ಹತ್ಯೆಗೈದ್ನಾ ಗ್ಯಾಂಗ್ ಸ್ಟರ್ ಬಿಷ್ಣೋಯಿ ?

13-10-24 06:13 pm
  HK News Desk    

ಇತ್ತೀಚೆಗಷ್ಟೇ ಕಾಂಗ್ರೆಸ್ ಬಿಟ್ಟು ಎನ್ ಸಿಪಿ ಸೇರಿದ್ದ, ಬಾಲಿವುಡ್ ಸಿನಿಮಾ ಜಗತ್ತಿನ ಸ್ಟಾರ್ ಗಳ ಪಾಲಿಗೆ ಆಪ್ತಮಿತ್ರ ಎ...

ಮೈಸೂರು ದರ್ಭಾಂಗ್ ಬಾಗಮತಿ ಎಕ್ಸ್ ಪ್ರೆಸ್ ರೈಲು ಅಪಘಾ...

13-10-24 03:48 pm

Kasaragod, Auto driver suicide: ಆಟೋ ಚಾಲಕ ಆತ್ಮ...

12-10-24 01:49 pm

ಶಾರ್ಜಾಕ್ಕೆ ಹೊರಟಿದ್ದ ಏರ್ ಇಂಡಿಯಾ ವಿಮಾನದಲ್ಲಿ ತಾಂ...

11-10-24 09:59 pm

ಅಖಂಡ ಭಾರತದ 51 ಶಕ್ತಿಪೀಠಗಳಲ್ಲಿ ಒಂದೆನಿಸಿರುವ ಬಾಂಗ...

11-10-24 06:23 pm